ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಹಿಳೆ ಕಾಣೆ ಪ್ರಕರಣದ ಮಾಹಿತಿ :
ಇಂದು ದಿನಾಂಕ 12/6/2020 ರಂದು 20.15 ಗಂಟೆಗೆ ಫಿರ್ಯಾದಿದಾರಳು
ಠಾಣೆಗೆ ಹಾಜರಾಗಿ ತಮ್ಮ ಒಂದು ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ,
ಫಿರ್ಯಾದಿ ಹನುಮಂತ ತಂದೆ ಬಸಪ್ಪ ಊರಲಗಡ್ಡಿ, 28 ವರ್ಷ, ನಾಯಕ, ಬಿ.ಸಿ.ಎಮ್. ಇಲಾಖೆ ಸಿಂಧನೂರನಲ್ಲಿ ಅಡಿಗೆ ಸಹಾಯಕ ಸಾ: ಪೋತ್ನಾಳ, ದಿನಾಂಕ 20/03/2020 ರಂದು ತನುಶ್ರಿ (ಸರಸ್ವತಿ) ಈಕೆಯೊಂದಿಗೆ ಮದುವೆಯಾಗಿದ್ದು. ಸದರಿಯವಳು ದಿನಾಂಕ 10/06/2020 ರಂದು ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ಮನೆಯಿಂದ ಬಯಲು ಕಡೆಗೆ ಹೋಗುವದಾಗಿ ಹೇಳಿ ಹೋಗಿದ್ದು ವಾಪಾಸ ಬರದ ಕಾರಣ ಎಲ್ಲಾ ಕಡೆಗೆ ಹುಡಕಾಡಿದ್ದು ಅಲ್ಲದೇ ಸಂಬಂಧಿಕರ ಊರುಗಳಿಗೆ ಸಹ ಫೊನ್ ಮಾಡಿ ವಿಚಾರಿಸಿದ್ದು ಆದರೆ ಎಲ್ಲಿಯೂ ತನ್ನ ಹೆಂಡತಿ ಸುಳಿವು ಸಿಕ್ಕಿರುವದಿಲ್ಲ. ಮತ್ತು ನನ್ನ ಹೆಂಡತಿಯು ಯಾವ ಕಾರಣಕ್ಕೆ ಮನೆಯನ್ನು ಬಿಟ್ಟು ಹೋಗಿದ್ದಾಳೆ ಮತ್ತು ಎಲ್ಲಿಗೆ ಹೋಗಿದ್ದಾಳೆ
ಅಂತಾ ತಿಳಿದಿರುವದಿಲ್ಲ. ಕಾರಣ ನನ್ನ ಹೆಂಡತಿಯನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಪೊಲೀಸ ಠಾಣೆ ಗುನ್ನೆ ನಂ
87/2020 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆಯನ್ನು ಕೈ ಕೊಂಡಿರುತ್ತಾರೆ.
ಹೆಸರು : ಶ್ರೀಮತಿ ತನುಶ್ರೀ (ಸರಸ್ವತಿ) ,
ಗಂಡನ ಹೆಸರು : ಹನುಮಂತ,
ಚಹರೆ : ದುಂಡು ಮುಖ,
ವಯಸ್ಸು: 25 ವರ್ಷ
ಜಾತಿ : ನಾಯಕ,
ವಿದ್ಯಾಭ್ಯಾಸ: ಬಿ.ಎ.
ಮಾತನಾಡುವ ಭಾಷೆ: ಕನ್ನಡ
ಎತ್ತರ: 5’2’’ ,
ಮೈ ಕಟ್ಟು : ಸಾಧಾರಣ ಮೈಕಟ್ಟು,
ಬಣ್ಣ : ಕೆಂಪು
ಮಟಕಾ ಪ್ರಕರಣದ ಮಾಹಿತಿ
:
ದಿನಾಂಕ.12-06-2020 ಸಂಜೆ
07-30 ಗಂಟೆಗೆ ಶ್ರೀ ವಿರುಪಾಕ್ಷಪ್ಪ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್
ಠಾಣೆ ರವರು ಠಾಣೆಗೆ ದಾಳಿ ಪಂಚನಾಮೆದೊಂದಿಗೆ ಒಬ್ಬ ಆರೋಪಿ ºÀ£ÀĪÀÄAvÀ vÀAzÉ wªÀÄäAiÀÄå £É®èAV
24 ªÀµÀð eÁ-£ÁAiÀÄPÀ G-mÉÊ®jAUï PÉ®¸À ¸Á-vÀ¼ÀªÁgÀ Nt eÁ®ºÀ½î ಈತನನ್ನು ಹಾಜರು ಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು
ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆಯಲ್ಲಿ ವರದಿ ನೀಡಿದ್ದೆನೆಂದರೆ, ದಿನಾಂಕ.12-06-2020 ರ ಸಂಜೆ 05-50 ಗಂಟೆಯ ಸುಮಾರಿಗೆ ಜಾಲಹಳ್ಳಿ ಬಸ್ಸ್ ನಿಲ್ದಾಣದ ಹತ್ತಿರ ಇರುವ ಉಡುಪಿ
ಕ್ಯಾಂಟಿನ್ ಹತ್ತಿರ ಇತುವ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ
ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಎಂದು ಕೂಗಿ ಹೇಳುತ್ತಿದ್ದಾಗ ಮಟಕಾ ಜೂಜಾಟದ ಬಗ್ಗೆ
ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿ ದೇವಪ್ಪನನ್ನು ಹಿಡಿದು ಅವನಿಂದ ಪಂಚರ ಸಮಕ್ಷಮ ಜಪ್ತಿ
ಮಾಡಲಾಗಿ ಅವನಲ್ಲಿ ಮಟಕಾ ನಂಬರು ಬರೆದ ಚೀಟಿ,
ಪೆನ್ನು ಮತ್ತು ನಗದು ಹಣ 1,460/- ರೂಗಳನ್ನು
ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ
ಜರುಗಿಸುವಂತೆ ಸೂಚಿಸಿದ್ದರ ಆಧಾರದ ಮೇಲಿಂದ ಪ್ರಕರಣದ ಸಾರಾಂಶವು ಆಸಂಜ್ಞೆಯ ಪ್ರಕರಣವಾಗಿದ್ದು
ಇದನ್ನು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಸಲ್ಲಿಸಿ
ಅನುಮತಿಗಾಗಿ ವಿನಂತಿಸಿಕೊಳ್ಳಲಾಗಿದ್ದು ಮಾನ್ಯ ನ್ಯಾಯಾಲಯ ಅನುಮತಿಯನ್ನು ಪಡೆದುಕೊಂಡು ಸದರಿ
ಅನುಮತಿಯನ್ನು ಪಿಸಿ-408 ರವರು ಇಂದು ದಿನಾಂಕ. 12-06-2020 ರಂದು
ರಾತ್ರಿ 08-45 ಠಾಣೆಗೆ
ತಂದು ಹಾಜರುಪಡಿಸಿರುತ್ತಾರೆ. ಪಿ.ಎಸ್.ಐ ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ
ಸಾರಾಂಶದ ಮೇಲಿಂದ ಮತ್ತು ಮಾನ್ಯ ನ್ಯಾಯಾಲಯ ನೀಡಿದ ಅನುಮತಿ ಮೇಲಿಂದ ಜಾಲಹಳ್ಳಿ ಪೊಲೀಸ್
ಠಾಣೆಯಲ್ಲಿ ಗುನ್ನೆ78(3) PÉ ¦ PÁ¬ÄzÉ ಅಡಿಯಲ್ಲಿ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರ
ಸರ್ಕಾರಿ ಕೆಲಸಕ್ಕೆ ಅಡೆತಡೆ ಮಾಡಿದ ಪ್ರಕರಣದ ಮಾಹಿತಿ.
ದಿನಾಂಕ
12.06.2020 ರಂದು ರಾತ್ರಿ 9-00 ಗಂಟೆಗೆ ಮಾನ್ಯ ಪಿಎಸ್ಐ {ಕಾ/ಸು} ಪಶ್ಚಿಮ ಪೊಲೀಸ್ ಠಾಣೆ ರಾಯಚೂರು ರವರು ತಮ್ಮ ದೂರು ಹಾಜರು ಪಡಿಸಿದ್ದೇನೆಂದರೆ, ಇಂದು ದಿನಾಂಕ 12.06.2020 ರಂದು ಮಧ್ಯಾಹ್ನ 12-00 ಗಂಟೆಯಿಂದ ಓಪೆಕ್ ಆಸ್ಪತ್ರೆಯಲ್ಲಿ ಕರೋನಾ ಬಂದೋಬಸ್ತ್ ಕರ್ತವ್ಯಕ್ಕೆ ಹೋಗಿ ಮೇಲಾಧಿಕಾರಿಗಳ ಆದೇಶದಂತೆ ವಾಪಸ್ ಠಾಣೆಗೆ ರಾತ್ರಿ 8-00 ಗಂಟೆಗೆ ಠಾಣೆಗೆ ಬಂದು ಕರ್ತವ್ಯದ ಮೇಲೆ ಇರುವಾಗ್ಗೆ ಆರೋಪಿತನು ಮತ್ತು ಪ್ರತಿವಾದಿಗಳು ಇಂದು ಬೆಳಿಗ್ಗೆ 07-30 ಗಂಟೆಗೆ ಪ್ರತಿವಾದಿ ತನ್ನ ಹೊಸ ಮನೆ ಕಟ್ಟುತ್ತಿರುವಾಗ್ಗೆ ಆರೋಪಿತನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಮಣ್ಣು ಬಿದ್ದಿರುತ್ತದೆ ಇದೇ ವಿಚಾರವಾಗಿ ಎರಡು ಪಾರ್ಟಿಯ ಜನರು ಠಾಣೆಗೆ ಹಾಜರಾಗಿ ತಿಳಿಸುತ್ತಿರುವಾಗ್ಗೆ ಆಗ ಫಿರ್ಯಾದಿದಾರರು ಮಣ್ಣು ಬಿದ್ದ ವಿಚಾರದಲ್ಲಿ ಜಗಳ ಮಾಡಿಕೊಳ್ಳುವುದು ಸರಿಯಲ್ಲಾ ಮತ್ತು ಒಬ್ಬರಿಗೊಬ್ಬರು ಮೈಕೈ ಮುಟ್ಟಿಕೊಂಡು ಹೊಡೆದುಕೊಂಡಿರುವುದು ಸರಿಯಲ್ಲಾ ಅಂತಾ ತಿಳಿಸಿದ್ದಕ್ಕೇ ಆರೋಪಿತನು ಒಮ್ಮಿಂದೊಮ್ಮೇಲೆ ಫಿರ್ಯಾದಿದಾರರಿಗೆ ನೀನು ಯಾವ ಸೀಮೆಯ ಸಬ್ ಇನ್ಸ್ ಪೆಕ್ಟರ್ ನಿನ್ನನ್ನು ನೋಡಿಕೊಳ್ಳುತ್ತೇನೆ ನೀನು ಅವರ ಪರವಾಗಿ ಮಾತನಾಡುತ್ತೇನೆ ನಿನ್ನನ್ನು ನೋಡಿಲ್ಲೇನು ಅಂತಾ ಕೈ ಮಾಡಿ ಗುರಾಯಿಸಿ ನೋಡುತ್ತಾ ಏಕ ವಚನದಲ್ಲಿ ಮಾತನಾಡಿ ಅಸಭ್ಯ ರೀತಿಯಿಂದ ವರ್ತನೆ ಮಾಡಿ ಫಿರ್ಯಾದಿದಾರರಿಗೆ ಕರ್ತವ್ಯಕ್ಕೆ ಅಡತಡೆ ಮಾಡಿ ಏರು ಧ್ವನಿಯಲ್ಲಿ ಅವಾಚ್ಯವಾಗಿ ಮಾತನಾಡಿ ಠಾಣೆಯಲ್ಲಿ ಫಿರ್ಯಾದಿದಾರರೊಂದಿಗೆ ಜಗಳ ಮಾಡಿದ್ದು ಇರುತ್ತದೆ ಮತ್ತು ಸದರಿ ಆರೋಪಿತನು ನರಸರೆಡ್ಡಿ ತಂದೆ ಅಯ್ಯಾಣ್ಣ, ವಯಾ: 65 ವರ್ಷ, ಪರಿಶಿಷ್ಟ ಜಾತಿ {ಚಲುವಾದಿ}, ನಿವೃತ್ತಿ ಎ.ಎಸ್.ಐ, ಸಾ: ಮನೆ ನಂ 1-7-47/3 ಸಾಯಿಬಾಬಾ ಕಾಲೋನಿ ರಾಂಪುರ ಇವರು ಪೊಲೀಸ್ ಇಲಾಖೆಯಲ್ಲಿ ಸುಮಾರು ದಿನಗಳ ವರೆಗೆ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡು ಇಲಾಖೆಯ ಬಗ್ಗೆ ಗೌರವ ಹೊಂದದೇ ಸಾರ್ವಜನಿಕವಾಗಿ ಈ ಮೇಲ್ಕಂಡಂತೆ ಕೃತ್ಯೆ ವೆಸಗಿರುತ್ತಾರೆ ಅಂತಾ ಇದ್ದ ದೂರಿನ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ
66/2020, ಕಲಂ
353, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.