Thought for the day

One of the toughest things in life is to make things simple:

5 Aug 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ- 04-08-2019 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಮರೇಶಪ್ಪ ಹೆಚ್.ಸಿ-346 ರವರು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ,  ಸದರಿ ಪಿರ್ಯಾದಿದಾರರು ಇಂದು ದಿನಾಂಕ-04.08.2019 ರಂದು ಮಾನ್ಯ ಎಸ್.ಪಿ ಸಾಹೇಬರು ರಾಯಚುರು ರವರ ಕಾರ್ಯಾಲಯದಿಂದ ಸ್ವೀಕೃತಗೊಂಡ ಗುಡುದೂರು ಹೋಬಳಿಯ ಹಂಪನಾಳ ಗ್ರಾಮದ  ಆಶ್ರಯ ಯೋಜನೆಯ ಅಡಿಯಲ್ಲಿ ಗ್ರಾಮಸ್ಥರಿಗೆ ಮೋಸ-ವಂಚನೆ ಮಾಡಿದ ದಲ್ಲಾಳಿ ಕೋರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಇದ್ದ ಅರ್ಜಿಗೆ ಸಂಬಂದಸಿದೆಂತೆ ಅರ್ಜಿಯಲ್ಲಿನ ಪ್ರತಿವಾದಿಗಳಾದ  1. ದೇವಪ್ಪ ಹಂಪನಾಳ,  2. ಹನುಮಂತ ಹಂಪನಾಳ, 3. ಶರಣಪ್ಪ ಮಟ್ಟೂರು, 4.ಅಮರೇಶ ನಿಡಿಗೋಳ ಇವರುಗಳಿಗೆ ವಿಚಾರಣೆ ಕುರಿತು ನೋಟೀಸ್ ಜಾರ ಮಾಡುವಂತೆ ತುರುವಿಹಾಳ ಠಾಣೆಯ ಎಸ್ .ಹೆಚ್. ಓ ಆದೇಶ ಇದ್ದುದರಿಂದ ಸಮವಸ್ತ್ರದಲ್ಲಿ ಬೆಳಿಗ್ಗೆ 09.30 ಗಂಟೆಗೆ ಠಾಣೆಯಿಂದ ರಹದಾರಿ-ಪತ್ರವನ್ನು ಪಡೆದುಕೊಂಡು ಮೋಟಾರ್ ಸೈಕಲ್ ಮೇಲೆ ಹೊರಟು, ಬಪ್ಪೂರು ಗ್ರಾಮಕ್ಕೆ ಹೋಗಿ ಪ್ರತಿ ವಾದಿಗಳ ಪೈಕಿ ದೇವಪ್ಪ ಮತ್ತು ಹನುಮಂತ ಹಂಪನಾಳ ರವರಿಗೆ ಕರೆ ಮಾಡಿ ಬಪ್ಪೂರದಲ್ಲಿ ನೋಟೀಸ್ ಜಾರಿ ಮಾಡಿದ್ದು,  ತನ್ನ ಬೈಕಿನಲ್ಲಿ ಪೆಟ್ರೋಲ್ ಕಡಿಮೆ ಇದ್ದುದರಿಂದ ಯಂಕಪ್ಪನ ಕಿರಾಣಿ ಅಂಗಡಿಗೆ ಹೋಗಿ ಪೆಟ್ರೋಲ್ ಸಿಗುವ ಬಗ್ಗೆ ವಿಚಾರಿಸುತ್ತಾ ಯಂಕಪ್ಪ ಅಂತಾ ಕೂಗಿ ಕರೆದಾಗ ಅಲ್ಲಿಯೇ  ನಿಂತಿದ್ದ ಆರೋಪಿತರು ಪಿರ್ಯಾದಿದಾರರಿಗೆ ಲೇ ಪೊಲೀಸ್ ನೀನು ನಮ್ಮೂರಿನ ಯಂಕಪ್ಪನಿಗೆ ಏಕೆ ಕರೆಯುತ್ತೀಯಾ ಆತನಿಗೆ ಏನು ಮಾಡುತ್ತಿಯಾ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಕಿರಾಣಿ ಅಂಗಡಿ ಮುಂದೆ ಹೊರಟಿದ್ದ ಫಿರ್ಯಾದಿದಾರನಿಗೆ ತಡೆದು ನಿಲ್ಲಿಸಿ, ಆರೋಪಿ ನಂ-01 ಈತನು ತನ್ನ ಕೈಯಿಂದ ಪಿರ್ಯಾದಿಯ ಕಪಾಳಕ್ಕೆ ಹೊಡೆದನು. ಆರೋಪಿ ನಂ-2 ಈತನು ತನ್ನ ಕಾಲಿನಿಂದ ಪಿರ್ಯಾದಿಯ ಬಲ ಪಕ್ಕಡಿಗೆ ಒದ್ದಿದ್ದು, ಆರೋಪಿತರು ಕುಡಿದ ಅಮಲಿನಲ್ಲಿ ಪಿರ್ಯಾದಿದಾರನನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ.  ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್  ಠಾಣೆ ಗುನ್ನೆ ನಂ. 138/2019 ಕಲಂ. 323, 353, 504, ಸಹಿತ 34 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.