ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಅನಧಿಕೃತ ಪಟಾಕಿ ಪ್ರಕರಣದ ಮಾಹಿತಿ.
ದಿ.16-11-2020
At 12-00 PM ಕ್ಕೆ ಪಿ.ಎಸ್.ಐ ರವರು ಅನಧಿಕೃತ ಪಟಾಕಿ ದಾಸ್ತಾನು ದಾಳಿಯಿಂದ ಮರಳಿ ಠಾಣೆಗೆ ಬಂದು
ಪಟಾಕಿ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ ಆರೋಪಿ ಪಾಲಾಷ್ ಮಂಡಲ್ ತಂದೆ ದಿಲೀಪ್ ಮಂಡಲ್
26 ವರ್ಷ, ಜಾ:-ಕ್ಷೆತ್ರಿಯಾ, ಕಿರಾಣಿ ಅಂಗಡಿ ವ್ಯಾಪಾರ್.ಸಾ:-ಆರ್.ಹೆಚ್. ಕ್ಯಾಂಪ್ ನಂಬರ್ 3.ತಾ:-ಸಿಂಧನೂರು. ಮತ್ತು ಜಪ್ತಿ
ಪಡಿಸಿಕೊಂಡ ಪಟಾಕಿ ಸಾಮಾಗ್ರಿಗಳನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ
ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನಾಂಕ:-16-11-2020 ರಂದು ಬೆಳಿಗ್ಗೆ
10-00 ಗಂಟೆ ಸುಮಾರಿಗೆ ಆರೋಪಿತನು ಆರ್.ಹೆಚ್.ಕ್ಯಾಂಪ್
ನಂಬರ್ 3 ರಲ್ಲಿ ತನ್ನ ಕಿರಾಣಿ ಅಂಗಡಿಯಲ್ಲಿ ಅನಧಿಕೃತವಾಗಿ ಪಟಾಕಿಗಳನ್ನು
ದಾಸ್ತಾನು ಮಾಡಿ, ಮಾರಾಟ ಮಾಡುತ್ತಿದ್ದಾನೆಂದು ಖಚಿತ ಭಾತ್ಮಿ ಮೇರೆಗೆ, ನಾನು ,ಪಂಚರು ಮತ್ತು ಸಿಬ್ಬಂದಿಯವರೊಂದಿಗೆ
ಭಾತ್ಮಿ ಸ್ಥಳಕ್ಕೆ ಹೋಗಿ, ದಾಳಿ ಮಾಡಿ ವಿವಿಧ ಮಾದರಿಯ ಪಟಾಕಿ ಇರುವ ಮೂರು ರಟ್ಟಿನ ಬಾಕ್ಸಗಳು ಅಂ.ಕಿ.5000/-
ರೂಪಾಯಿ ಬೆಲೆಬಾಳುವುದು. ಜಪ್ತಿ ಮಾಡಿಕೊಂಡು ಮದ್ಯಾಹ್ನ 12-00 ಗಂಟೆಗೆ ವಾಪಾಸ್ ಠಾಣೆಗೆ ಬಂದಿರುತ್ತೇನೆ.
ಮುಂದಿನ ಕ್ರಮ ಜರುಗಿಸುವಂತೆ ತಮ್ಮ ವರದಿಯನ್ನು ಪಂಚನಾಮೆ ಸಂಗಡ ಹಾಜರಪಡಿಸಿದ್ದರ ಮೇರೆಗೆ ಸದರಿ ಪಟಾಕಿ
ದಾಳಿ ಪಂಚನಾಮೆಯ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ್ 188/2020. ಕಲಂ.
9(b) ಸ್ಟೋಟಕ ಕಾಯಿದೆ-1884 ಮತ್ತು ಕಲಂ.286 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಇಸ್ಪೇಟ್ ಜೂಜಾಟ ಪ್ರಕರಣದ ಮಾಹಿತಿ.
ದಿ.16-11-2020
At 02-00 AM ಕ್ಕೆ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ
ರವರು ಇಸ್ಪೇಟ್ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ
ಬಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ. ದಾಳಿ ಕಾಲಕ್ಕೆ ಸಿಕ್ಕಿಬಿದ್ದ ಗಂಗಣ್ಣ ತಂದೆ
ಮೂಕಪ್ಪ @ ವಡ್ಡಿ ಭೀರಪ್ಪ 25 ವರ್ಷ, ಜಾ:-ಕುರುಬರು, ಉ:-ಒಕ್ಕಲುತನ, ಸಾ:-ರಾಮಾರ, ಕೌತಳಂ ಮಂಡಲ್,ತಾ:-ಮಂತ್ರಾಲಯ
ಜಿ. ಕರ್ನೂಲ್. ಹಾಗೂ ಇತರೆ 14-ಜನ ಆರೋಪಿತರು, ಜಪ್ತಿ ಪಡಿಸಿಕೊಂಡ ಇಸ್ಪೇಟ್ ಜೂಜಾಟದ ನಗದು, ಸಾಮಾಗ್ರಿಗಳನ್ನು
ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಪಿರ್ಯಾದನ್ನು ಹಾಜರಪಡಿಸಿದ್ದು,
ಸಾರಾಂಶವೇನೆಂದರೆ, ಮೇಲ್ಕಂಡ ದಿನಾಂಕ, ಸಮಯ, ಸ್ಥಳದಲ್ಲಿ ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವ
ಬಗ್ಗೆ ಖಚಿತ ಭಾತ್ಮಿ ಮೇರೆಗೆ, ನಾನು ,ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ,
ಅಲ್ಲಿ ಆರೋಪಿತರು ‘’ಅಂದರ್ ಬಹಾರ್ ‘’ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮದಲ್ಲಿ
ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ, ಹಿಡಿದುಕೊಂಡು ಆರೋಪಿತರಿಂದ ಮತ್ತು ಕಣದಿಂದ ಇಸ್ಪೇಟ್ ಜೂಜಾಟದ
ನಗದು ಹಣ 29,500/-ರೂಪಾಯಿ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ಪಂಚನಾಮೆ ಪೂರೈಸಿಕೊಂಡು
ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ
ಎನ್.ಸಿ.ನಂ.52/2020 ರ ಅಡಿಯಲ್ಲಿ ನಮೂಧಿಸಿಕೊಂಡು ಆರೋಫಿತರ ವಿರುದ್ದ ಕಲಂ.87 ಕೆ.ಪಿ ಕಾಯಿದೆ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳುವ ಕುರಿತು ನ್ಯಾಯಾಧೀಶರಿಂದ ಪರವಾನಿಗೆ ಪಡೆದುಕೊಂಡು ಬೆಳಿಗ್ಗೆ
8-15 ಗಂಟೆಗೆ ಸಿಂದನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂಬರ್ 187/2020. ಕಲಂ. 87 ಕೆ.ಪಿ ಕಾಯಿದೆ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಸೇಂದಿ ಜಪ್ತಿ ಪ್ರಕರಣದ
ಮಾಹಿತಿ.
ದಿನಾಂಕ:16.11.2020 ರಂದು 00:45 ಗಂಟೆಗೆ ಪಿ.ಎಸ್.ಐ. (ಕಾ.ಸು) ಪಶ್ಚಿಮ ಪೊಲೀಸ್ ಠಾಣೆ ರವರು ಸೇಂದಿ ದಾಳಿಯಿಂದ ವಾಪಸ್ ಠಾಣೆಗೆ ವಿವರವಾದ ಪಂಚನಾಮೆ ಮತ್ತು ಮುದ್ದೆಮಾಲು & ಆರೋಪಿತರೊಂದಿಗೆ ಹಾಜರಾಗಿ ದೂರು ಸಲ್ಲಿಸಿದ್ದೇನೆಂದರೆ, ದಿನಾಂಕ 15.11.2020 ರಂದು ರಾತ್ರಿ 11:30 ಗಂಟೆಗೆ ಠಾಣಾ ವ್ಯಾಪ್ತಿಯ ಜೆ.ಜೆ.ವೃತ್ತದಲ್ಲಿ ಸಿಬ್ಬಂದಿಯವರೊಂದಿಗೆ ವಾಹನಗಳನ್ನು ಚಕ್ ಮಾಡುತ್ತಿರುವಾಗೆ ಐ.ಬಿ. ಕಡೆಯಿಂದ ಕಾರ ಕೆಂಪ್ಪು ಬಣ್ಣದ VITARA BREZZA (WHITE BOARD) ನಂ. ಕೆ.ಎ.36/ಎನ್-9248 ನೇದ್ದರಲ್ಲಿ ಕಲಬರಿಕೆ ಸೇಂದಿ ಸಾಗಿಸುತ್ತಿರುವುದು ಕಂಡು ಬಂದು ಕಾರನ್ನು ಪಿ.ಎಸ್.ಐ. ರವರು ನಿಲುಗಡೆ ಮಾಡಿ ರಾತ್ರಿ 11:45 ಗಂಟೆಗೆ ಪಂಚರನ್ನು ಘನಾ ಸ್ಥಳಕ್ಕೆ ಬರ ಮಾಡಿಕೊಂಡು ಕಾರಿನ ಡಿಕ್ಕಿಯಲ್ಲಿದ್ದ 26 ಲೀಟರ ಕಲಬರಿಕೆ ಸೇಂದಿ ಅ.ಕಿ. ರೂ.1,560/- ಬೆಲೆಬಾಳುವುದನ್ನು ಮತ್ತು ಕಾರ ಅ.ಕಿ. ರೂ.8,00,000/- ಬೆಲೆಬಾಳವ ಕಾರನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಡಲ್ಲದೆ ಆರೋಪಿತರು ವಿಚಾರಣೆಯಲ್ಲಿ ಆಂದ್ರದ ಕೃಷ್ಣದಲ್ಲಿ ಒಂದು ಲೀಟರಗೆ 10 ರೂ. ಅಂತೆ ಕಲಬರಿಕೆ ಸೇಂದಿಯನ್ನು ಖರೀದಿಸಿಕೊಂಡಿದ್ದು ಸದರಿ ಸೇಂದಿಯನ್ನು ಲಿಂಗಸ್ಗೂರು ಕಡೆ ಮತ್ತು ಇತರೆ ಕಡೆಗೆ ಲೀಟರಗೆ 60 ರೂ ಅಂತೆ ಮಾರಾಟ ಮಾಡುತ್ತೇವೆ ಇನ್ನು ಹೆಚ್ಚಿಗೆ ಕಲಬರಿಕೆ ಸೇಂದಿಯು ಕೃಷ್ಣದಲ್ಲಿ ಸಿಕ್ಕಿರುವುದಿಲ್ಲ ಮತ್ತು ಸದರಿ ಆರೋಪಿತರು ವಿಷಪೂರಿತ ಕಲಬರಿಕೆ ಸೇಂದಿಯನ್ನು ಯಾವುದೇ ಮಾನವನ್ನು ಕುಡಿದರೆ ಮಾನವ ಜೀವಕ್ಕೆ ಅಪಾಯಕಾರಿ ಅಂತಾ ಗೋತ್ತಿದ್ದರೂ ಕಲಬರಿಕೆ ಸೇಂದಿಯನ್ನು ಮಾರಾಟ ಮಾಡಲು ಕೊಂಡೊಯ್ಯತ್ತಿರುವದಲ್ಲದೆ ನಿರ್ಲಕ್ಷ್ಯತನದಿಂದ, ದುಡಿಕಿನಿಂದ ವಿಷಪೂರಿತ ಕಲಬರಿಕೆ ಸೇಂದಿಯು ಹಾನಿಕರವಾಗಿದೆ ಅಂತಾ ತಿಳಿದೂ ಸೇಂದಿಯನ್ನು ಮಾರಾಟಕ್ಕೆ ಆರೋಪಿತರು ಕಾರಿನಲ್ಲಿ ಸಾಗಿಸುತ್ತಿರುವಾಗ್ಗೆ ಪಿ.ಎಸ್.ಐ. ರವರು ಜಪ್ತಿ ಪಡಿಸಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇಲಿಂದ ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ.126/2020 ಕಲಂ.328.273.284 ಐ.ಪಿ.ಸಿ. & 32, 34. 43 ಕೆ.ಇ.ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿತ್ತಾರೆ.
ಕಳುವಿನ
ಪ್ರಕರಣದ ಮಾಹಿತಿ.