Thought for the day

One of the toughest things in life is to make things simple:

4 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕ್ರಕೇಟ್ ಬೆಟ್ಟಿಂಗ್ ಪ್ರಕರಣದ ಮಾಹಿತಿ.




1] ದಿನಾಂಕ 02.10.2020 ರಂದು ರಾತ್ರಿ 8.40 ಗಂಟೆಗೆ ಆರೋಪಿತರು ಹಟ್ಟಿ ಕ್ಯಾಂಪಿನ ದಾರುವಾಲ ಸ್ಟೇಡಿಯಂ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಗಳ ಮೂಲಕ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿ ಸಾರ್ವಜನಿಕರಿಗೆ ಸನ್ ರೈಸರ್ ಹೈದರಾಬಾದ್ ಗೆದ್ದರೆ 1000/- ರೂಪಾಯಿಗೆ 1300/- ಹಾಗೂ ಚನೈ ಸೂಪರ್ ಕಿಂಗ್ ಗೆದ್ದರೆ 1000/- ರೂ 1500/- ಕೊಡುವುದಾಗಿ ಕೂಗೂತ್ತಾ ಅವರನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡು ಹಾಳೆಯಲ್ಲಿ ಬರೆಯುತ್ತಾ ಕ್ರಿಕೇಟ್ ಬೆಟ್ಟಿಂಗ ಜೂಜಾಟದಲ್ಲಿ ತೊಡಗಿದ್ದಾಗ  ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಡಿ.ಎಸ್.ಪಿ ಲಿಂಗಸ್ಗೂರು ಹಾಗೂ ಸಿಪಿಐ ಲಿಂಗಸ್ಗೂರು ವೃತ್ತ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿ ನಂ 1 ಇಸ್ಮಾಯಿಲ್ @ ಗೋರಿ ತಂದೆ ಖಾದರ್ ಪಾಶ ವಯಾ: 28 ವರ್ಷ ಜಾ: ಮುಸ್ಲಿಂ ಉ: ವ್ಯಾಪಾರ ಸಾ: ಕಾಕಾನಗರ ಹಟ್ಟಿ ಮತ್ತು 2 ಚಂದ್ರಶೇಖರ @ ಚಂದ್ರುಗೌಡ ತಂದೆ ಅಮರಪ್ಪ ವಯಾ: 35 ವರ್ಷ ಜಾ: ಲಿಂಗಾಯತ ಉ: ವ್ಯಾಪಾರ ಸಾ: ತವಗ ನೇದ್ದವರಿಂದ 1) ಕ್ರಿಕೇಟ್ ಬೆಟ್ಟಿಂಗ್ ಜೂಜಾಟದ ನಗದು ಹಣ 8,000/- 2) ಒಂದು ಸೆಲ್ ಕಾನ್ ಮೊಬೈಲ್ ಅಕಿರೂ 400/- 3) ಒಂದು ಐಟೆಲ್ ಮೊಬೈಲ್ ಅಕಿರೂ 600/-  ಜಪ್ತಿಮಾಡಿಕೊಂಡಿದ್ದು, ಆರೋಪಿ ನಂ 1 ಮತ್ತು 2 ನೇದ್ದವರು ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಹಣವನ್ನು ತಾವೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 39/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 03.10.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 135/2020 ಕಲಂ: 78(6) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

 

ಇಸ್ಪೇಟ್ ಜೂಜಾಟ ಪ್ರಕರಣದ ಮಾಹಿತಿ.

                1] ದಿನಾಂಕ: 03/10/2020 ರಂದು 12-45 ಗಂಟೆ ಸುಮಾರಿಗೆ ವಟಗಲ್ ಸೀಮಾದ ಬಸಪ್ಪ ಹೆಗಡದಿನ್ನಿ ರವರ ಹೊಲದ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿ ಎಸ್ ಐ ಕವಿತಾಳ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಯಲ್ಲಪ್ಪ ತಂದೆ ರಂಗಪ್ಪ ವಯಾ:35 ವರ್ಷ ಜಾ: ದಾಸರ : ಕೂಲಿಕೆಲಸ ಸಾ: ಯಕ್ಲಾಸಪೂರು ಹಾಗೂ ಇತರೆ 5 ಜನರನ್ನು ವಶಕ್ಕೆ ಪಡೆದುಕೊಂಡು ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ  ಇಸ್ಪೇಟ್  ಜೂಜಾಟದ ನಗದು ಹಣ ಒಟ್ಟು 3600 ರೂ/-ಮತ್ತು 52 ಇಸ್ಪೇಟ್ ಎಲೆಗಳು ಅ.ಕಿ. ಇಲ್ಲ  ಇವುಗಳನ್ನು ಜಪ್ತಿ ಮಾಡಿ ತಂದು ಹಾಜರು ಪಡಿಸಿದ್ದು ನಂತರ ಇಸ್ಪೇಟ್ ದಾಳಿ ಪಂಚನಾಮೆಯ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಳ್ಳಲು ಪಿರ್ಯಾದಿದಾರರು ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು ಇಂದು ದಿನಾಂಕ03/10/2020 ರಂದು ಪಡೆದುಕೊಂಡು ವಾಪಾಸು ಠಾಣೆಗೆ 17.00 ಗಂಟೆಗೆ ಬಂದು ಪರವಾನಿಗೆ ಪತ್ರವನ್ನು ಹಾಜರು ಪಡಿಸಿದ್ದರಿಂದ  ಇಸ್ಪೇಟ್ ದಾಳಿ ಪಂಚನಾಮೆಯ ಮತ್ತು ವರದಿಯ ಅಧಾರದ ಮೇಲಿಂದ ಕವಿತಾಳ ಠಾಣೆಯ ಅಪರಾಧ ಸಂಖ್ಯೆ 78/2020 ಕಲಂ-87 ಕೆಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.

 

            2] ದಿನಾಂಕ.02-10-2020 ರಂದು ಸಾಯಂಕಾಲ 5-15 ಗಂಟೆಗೆ ಆರೋಪಿತರು ಕಲ್ಲೂರು ಗ್ರಾಮದ ಹೊರ ವಲಯದಲ್ಲಿರುವ ಕಲ್ಲೂರು-ದಿನ್ನಿ ರಸ್ತೆಯಲ್ಲಿರುವ ಬ್ರಿಡ್ಜಿನ್ ಕೆಳಗೆ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರಬಾಹರ್ ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ. ಸಿರವಾರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿಮಾಡಿದಾಗ 7 ಜನರು ಓಡಿ ಹೋಗಿ ಶ್ರೀನಿವಾಸ ತಂದೆ ದೇವೀಂದ್ರಪ್ಪ ಜಾತಿ-ಕಬ್ಬೇರ,ವಯ-55ವರ್ಷ, ಉ-ಒಕ್ಕಲುತನ ಸಾ:ಕಲ್ಲೂರು ಇತರೆ 4 ಜನರು ಸಿಕ್ಕು  ಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ  ದೊರೆತ ಇಸ್ಪೇಟ್ ಜೂಜಾಟದ ಹಣ ರೂ.3,740/- ಮತ್ತು 52 ಇಸ್ಪೇಟ್ ಎಲೆಗಳನ್ನು ದಾಳಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 126/2020 ಕಲ: 87 ಕ.ಪೋ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.