Thought for the day

One of the toughest things in life is to make things simple:

15 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮಟ್ಕಾ ದಾಳಿ ಪ್ರಕರಣದ ಮಾಹಿತಿ
ದಿನಾಂಕ  13-11-2018 ರಂದು ರಾತ್ರಿ  7-50 ಗಂಟೆಗೆ ಸಿ.ಪಿ,ಐ ಸಾಹೇಬರು ಮಾನವಿ ವೃತ್ತ  ರವರು ಮಟ್ಕಾ  ದಾಳಿಯಿಂದ ವಾಪಸ್ ಠಾಣೆಗೆ ಬಂದು ಮಟ್ಕಾ  ದಾಳಿ ಪಂಚನಾಮೆ ಜಪ್ತಿ ಮಾಡಿಕೊಂಡ ಮುದ್ದೆಮಾಲು. ಒಬ್ಬ ಆರೋಪಿ ಶ್ರೀಧರ್ ತಂದೆ ಎಸ್. ವೆಂಕಟರಮಣ ರಾವ್ ವಯಾಃ 30 ವರ್ಷ ಜಾತಿಃ ನೇಕಾರ ಉಃ ಸೈಕಲ್ ಮೇಕ್ಯಾನಿಕ್ ಸಾಃ ಕರಡಿ ಗುಡ್ಡ ರೋಡ್ ನೇತಾಜಿ ಶಾಲೆ ಹತ್ತಿರ ಮಾನವಿ ತನನ್ನು  ರಾತ್ರಿ 8-00 ಗಂಟೆಗೆ ವಶಕ್ಕೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು  ಸದರಿ ಪಂಚನಾಮೆಯ ಸಾರಾಂಶವೆನೆಂದರೆ ಮಾನವಿ ನಗರದ ನೇತಾಜಿ ಸರ್ಕಲ್ ಹತ್ತಿರ ರಸ್ತೆಯಲ್ಲಿ ಮಟ್ಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ  ಬಂದ ಕೂಡಲೇ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ  ಸಾಯಾಂಕಾಲ 6-40 ಗಂಟೆಗೆ ದಾಳಿ ಮಾಡಿದಾಗ ಒಬ್ಬ ವ್ಯಕ್ತಿಯು ಸಿಕ್ಕಿ ಬಿದ್ದಿದ್ದು ಅವನನ್ನು ವಿಚಾರಿಸಲಾಗಿ ತನ್ನ ಹೆಸರು ಶ್ರೀಧರ್ ತಂದೆ ಎಸ್. ವೆಂಕಟರಮಣ ರಾವ್ ವಯಾಃ 30 ವರ್ಷ ಜಾತಿಃ ನೇಕಾರ ಉಃ ಸೈಕಲ್ ಮೇಕ್ಯಾನಿಕ್ ಸಾಃ ಕರಡಿ ಗುಡ್ಡ ರೋಡ್ ನೇತಾಜಿ ಶಾಲೆ ಹತ್ತಿರ ಮಾನವಿ ಅಂತಾ ತಿಳಿಸಿದ್ದು  ಸದರಿಯವನಿಂದ 1] ನಗದು ಹಣ ರೂ  2910/-  2] ಒಂದು ಬಾಲ್ ಪೆನ್ನು 3] ಮಟಕಾ ನಂಬರ್ ಬರೆದ 1 ಚೀಟಿ  ಸಿಕ್ಕಿದ್ದು ನಂತರ  ಸದ್ರಿ ಆರೋಪಿತನಿಗೆ ತಾನು ಮಟಕಾ ಚೀಟಿಯನ್ನು ಬರೆದು ಯಾರಿಗೆ ಕೊಡುವುದಾಗಿ ಅಂತಾ ವಿಚಾರಿಸಲು ಅವರು ತಾನು ಬರೆದ ಮಟಕಾ ಚೀಟಿಯನ್ನು ತಾನೇ ತನ್ನಲ್ಲಿಯೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಸದರಿ ಆರೋಪಿತನನ್ನು ನಮ್ಮ ವಶಕ್ಕೆ ತೆಗೆದುಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ  ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ  ಆರೋಪಿತನು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು  ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ   332/2018 ಕಲಂ 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ: 13-11-2018 ರಂದು 7-15 ಪಿ.ಎಂ ಕ್ಕೆ ಸಮಯದಲ್ಲಿ ಆರೋಪಿ ಈರೇಶ ತಂದೆ ಗಾದೆಪ್ಪ ಗಡ್ಡದ್  ಹಾಗೂ ಇತರೆ 10 ರವರು ಸಿಂಧನೂರು ತಾಲ್ಲೂಕಿನ ಗೊರೆಬಾಳದ ಜನರಲ್ ಕೆರೆ ಹತ್ತಿರ ಶೆಡ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂದು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತರಿಂದ ಹಾಗೂ ಕಣದಲ್ಲಿಂದ ನಗದು ಹಣ ರೂ.25700/- ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ 6.10 ಪಿ.ಎಮ್ ಕ್ಕೆ ಬಂದು ದಾಳಿ ಪಂಚನಾಮೆ ಮತ್ತು 11 ಜನ ಆರೋಪಿತರನ್ನು ನನಗೆ ಒಪ್ಪಿಸಿದ್ದು, ದಾಳಿ ಪಂಚನಾಮೆ ಮೇಲಿಂದ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ದಾಳಿ ಪಂಚನಾಮೆ ಸಾರಾಂಶದ ಮೇಲಿಂದಾ ಸಿಂಧನೂರ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.258/2018, ಕಲಂ.87 ಕ.ಪೊ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳ್ಳತನ ಪ್ರಕರಣದ ಮಾಹಿತಿ.
ದಿನಾಂಕ 13.11.2018 ರಂದು ಮದ್ಯಾಹ್ನ 3.45 ಗಂಟೆ ಸುಮಾರಿಗೆ ಪಿಎಸ್.ಐ. ಹಟ್ಟಿ ಪೊಲಿಸ್ ಠಾಣೆರವರು, ಹಟ್ಟಿ ಪಟ್ಟಣದ ಪಾಮನಕೆಲ್ಲರೂ ಕ್ರಾಸ್ ಹತ್ತಿ ರಸ್ತೆಯಲ್ಲಿ 1) ಟ್ರ್ಯಾಕ್ಟರ್ ನಂ ಕೆ. 33 ಟಿ. 2444 ನೇದ್ದರ ಚಾಲಕ ಮತ್ತು 2) ಟ್ರ್ಯಾಕ್ಟರ್ ನಂ ಕೆ. 36 ಟಿ.ಸಿ 1596 ನೇದ್ದರ ಚಾಲಕ  ಟ್ರ್ಯಾಕ್ಟರ್ ಗಳ ಮಾಲೀಕರ ಸೂಚನೆ ಮೇರೆಗೆ ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿದ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ಕಳ್ಳತನದಿಂದ ಅ.ಕಿ.ರೂ 3000 ರೂ ಸಾವಿರ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಮರಳು ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 269/2018 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.