ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದೊಂಬಿ ಪ್ರಕರಣದ ಮಾಹಿತಿ.
ತಾರೀಕು
04/07/2019 ರಂದು ಸಂಜೆ 4-50 ಗಂಟೆಗೆ ಫಿರ್ಯಾದಿದಾರಳಾದ CªÀÄgÀªÀÄä UÀAqÀ CªÀÄgÉñÀ PÀÄA¨sÁgÀ ಈಕೆಯು ಠಾಣೆಗೆ
ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಕೊಟ್ಟಿದ್ದು ಅದರ
ಸಾರಾಂಶವೆನೆಂದರೆ ತನ್ನ
ಲಗ್ನವು ಮರಗಂಟನಾಳ ಗ್ರಾಮದ ಆರೋಪಿ ನಂ 1 CªÀÄgÉñÀ vÀAzÉ ¥ÀA¥ÀtÚ ಈತನ ಸಂಗಡ ದಿನಾಂಕ 18/05/2017
ರಂದು ಮದುವೆ ಆಗಿದ್ದು ಲಗ್ನದಲ್ಲಿ ತನ್ನ ತಂದೆ 1,50,000/-ರೂ ವರದಕ್ಷಣೆ, 5 ತೊಲೆ ಬಂಗಾರ,
25,000/-ರೂ ವಾಚ್ ಮತ್ತು ಬಟ್ಟೆ ಹಾಗೂ 90,000/-ರೂ ಸಾಮಾನುಗಳು ಕೊಟ್ಟಿದ್ದರು. ಲಗ್ನವಾದ ನಂತರ
ತನ್ನ ಗಂಡ ಆತನ ಸಂಬಂದಿಕರು ತನಗೆ 4 ತಿಂಗಳ ವರೆಗೆ ಚೆನ್ನಾಗಿ ಇಟ್ಟುಕೊಂಡು ನಂತರ ತನ್ನ ಗಂಡ ತನ್ನ
ಮೇಲೆ ಅನುಮಾನ ಪಡುತ್ತಾ ಸೂಳೆ ಬಸವಿ ಅಂತಾ ಅವಾಚ್ಯವಗಿ ಬೈದಾಡಿ, ತವರೂ ಮನೆಯಿಂದ ಇನ್ನೂ 2 ಲಕ್ಷ ರೂ
ತೆಗೆದುಕೊಂಡ ಬಾ ಅಂತಾ ಜಗಳ ಆಡುವುದು ಹೊಡೆಬಡೆ ಮಾಡುವುದು ಮಾಡುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ
ತೊಂದರೆ ಕೊಡುತ್ತಿದ್ದು ಉಳಿದ ಆರೋಪಿತರು ಸಹಿತವಾಗಿ ತನ್ನ ಗಂಡನಿಗೆ ಇನ್ನೊಂದು ಲಗ್ನಮಾಡುತ್ತೇವೆ
ನೀನು ಹಣ ತಂದರೆ ನಮ್ಮ ಮನೆಯಲ್ಲಿ ಬಾ ಇಲ್ಲದಿದ್ದರೆ ಹೋಗು ಅಂತಾ ಬೈಯುವುದು, ಹೊಡೆಬಡೆ ಮಾಡುತ್ತಿದ್ದರು.
ದಿನಾಂಕ 20/06/2019 ರಂದು ಮದ್ಯಾಹ್ನ 1-00 ಗಂಟೆಗೆ ಮರಗಂಟನಾಳ ಗ್ರಾಮಕ್ಕೆ ತನ್ನ ತಂದೆ ಬಂದು ಬಿದ್ದಿವಾದ
ಹೇಳಿದಾಗ ಮೇಲ್ಕಾಣಿಸಿದ ಆರೋಪಿತರು ಈ ಸೂಳೆ ನಮಗೆ ಪಂಚಾಯತಿ ಸೇರಿಸಿದ್ದಾಳೆ ಒಂದು ಗತಿ ಕಾಣಿಸೊಣಾ
ಅಂತಾ ಹೆದರಿಸಿ, ಜಗಳ ತೆಗೆದು, ತನ್ನ ಗಂಡ ಕೈ ಹಿಡಿದು ಎಳೆದಾಡಿ, ಕಾಲಿನಿಂದ, ಆರೋಪಿ 2,3 ನೇದ್ದವರು
ಕೂದಲು ಹಿಡಿದು ಎಳೆದಾಡಿ, ಉಳಿದ ಆರೋಪಿ ನಂ 4,5 ನೇದ್ದವರು ಕೈಗಳಿಂದ ಕಪಾಳಕ್ಕೆ ಹೊಡೆದು, ಜೀವದ ಬೆದರಿಕೆ
ಹಾಕಿ ಮನೆಯಿಂದ ವಾಫಸ್ಸು ಕಳುಹಿಸಿದ್ದು ನಂತರ ನಾನು ನಮ್ಮ ಗಂಡನ ಮನೆಯವರು ಕರೆದುಕೊಂಡು ಹೋಗಬಹೆದೆಂದು
ಕಾಯುತ್ತಾ ಇದ್ದು ಸದರಿಯವರು ಬಾರದೆ ಇದ್ದುದ್ದರಿಂದ ಈಗ ತಡವಾಗಿ ಬಂದು ಫಿರ್ಯಾದಿ ಕೊಟ್ಟಿದ್ದು ಅಂತಾ ವೈಗೈರೆ ಇದ್ದು ಫಿರ್ಯಾದಿ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 157/2019 PÀ®A
143,147,504,498J,323,506 ¸À»vÀ 149 L¦¹ & 3 & 4 r¦ DPïÖ 1961 ಅಡಿಯಲ್ಲಿ ಆರೋಪಿತರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ
ಪ್ರಯತ್ನ ಪ್ರಕರಣದ ಮಾಹಿತಿ.
ದಿನಾಂಕ:06-07-2019
ರಂದು ಬೆಳಿಗ್ಗೆ
08.00 ಗಂಟೆಗೆ ಪಿಎಸ್ಐ ರವರು ಠಾಣೆಗೆ ಬಂದು ಪಿರ್ಯಾಧಿ ನೀಡಿದ ಸಾರಾಂಶವೆನೇಂದರೆ ಫಿರ್ಯಾದಿದಾರರು ನಿನ್ನ ದಿನಾಂಕಃ 05-07-2019 ರಂದು ರಾತ್ರಿ 8.30 ಗಂಟೆಗೆ ಬಲವಾದ ಮಾಹಿತಿಯ ಮೇರೆಗೆ ಠಾಣೆ ಸಿಬ್ಬಂದಿ ಹೆಚ್,ಸಿ 342, ಪಿಸಿ 656,643 ರವರನ್ನು ಕರೆದುಕೊಂಡು ಸರಕಾರಿ ಜೀಪ್ ನಂ KA 36/G-460 ರಲ್ಲಿ ರೈಲ್ವೇ ಸ್ಟೇಷನದಲ್ಲಿರುವ ನೀರಿನ ಟ್ಯಾಂಕ್ ಹತ್ತಿರ ಸುಮಾರು
70-80 ಜನ ಸೇರಿದ್ದು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿಯನ್ನು ಮಾರಾಕಾಸ್ತ್ರಗಳಿಂದ ತಲೆಗೆ, ಹೊಟ್ಟೆಗೆ ಹೊಡೆದು ಕೊಲೆ ಮಾಡಿದ್ದು ಕಂಡು ಬಂದಿದ್ದು ಆತನ ಮಗನಿಂದ ತಿಳಿದು ಬಂದ ಕಾರಣ ಕೂಡಲೇ ಎಂ.ಆರ್.ಎಸ್ ಕಾಲೋನಿ, ರಾಣಾ ಪ್ರತಾಪ್ ಸಿಂಗ್ ಕಾಲೋನಿಯ ಖುಲ್ಲಾ ಜಾಗೆಯಲ್ಲಿ ಹುಡುಕುತ್ತಾ ಹೋದಾಗ ಅಲ್ಲಿ ಲೈಟಿನ ಬೆಳಕಿನಲ್ಲಿ ನೋಡಲು ಮೇಲ್ಕಂಡ ಮೂರು ಜನ ಆರೋಪಿತರು ಫಿರ್ಯಾದಿದಾರಿಗೆ ನೋಡಿ ಮಾರಾಕಾಸ್ತ್ರಗಳನ್ನು ಹಿಡಿದು ಓಡಿ ಹೋಗಿ ಹಸ್ಮತ್ ಈತನು ಕೈಯಲ್ಲಿದ್ದ ಡ್ರ್ಯಾಗರ್ (ಉದ್ದನೆಯ ಚಾಕು) ನಿಂದ ಫಿರ್ಯಾದಿಗೆ ತೋರಿಸಿ ನಮ್ಮ ಕಡೆ ಬಂದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿ ಫಿರ್ಯಾದಿದಾರರ ಮೇಲೆ ಹಲ್ಲೇ ಮಾಡಲು ಪ್ರಯತ್ನಿಸಿದ್ದು ಆಗ ಫಿರ್ಯಾದಿದಾರರು ತಮ್ಮ ಆತ್ಮರಕ್ಷಣೆಗಾಗಿ ಎಚ್ಚರಿಕೆ ನೀಡುವ ಉದ್ದೇಶದಿಂದ ಫಿರ್ಯಾದಿದಾರರು ಆರೋಪಿತರಿಗೆ ಓಡಬೇಡಿ ನಿಲ್ಲಲ್ಲಿವೆಂದರೆ ನಿಮ್ಮ ಕಾಲಿಗೆ ಗುಂಡು ಹೊಡೆಯುತ್ತೇನೆ ಅಂತಾ ಕೂಗಿದರು ಸಹಾ ಆರೋಪಿತರು ನಿಲ್ಲದೇ ಇರುವಾಗ ತಮ್ಮ ಸರ್ವಿಸ್ ಫಿಸ್ತಲ್ ನಿಂದ 3 ಸಾರಿ ಆಕಾಶಕ್ಕೆ ಮುಖಮಾಡಿ ಗುಂಡು ಹಾರಿಸಿದಾಗ ಆರೋಪಿತರು ಪಕ್ಕದ ಪೊದೆಯಲ್ಲಿ ಓಡಿ ಹೋಗಿದ್ದು ಆರೋಪಿತರನ್ನು ಗುರುತಿಸಿ ಹಿಡಿಯಲು ಹೋದಾಗ ಫಿರ್ಯಾದಿದಾರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಮಾರಣಾಂತಿಕ ಆಯುಧಗಳನ್ನು ಎಸೆದು ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ.
67/2019 ಕಲಂ
353,504,506,307, ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.