ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ದಿನಾಂಕ:15-01-2020
ರಂದು ವಿರುಪಾಕ್ಷಿ ಈತನು ತಾನು ನಡೆಸುತ್ತಿದ್ದ
ಮೋಟರ್ ಸೈಕಲ್ ನಂ. KA-36/EN-6657 ರಲ್ಲಿ ತನ್ನ ಹಿಂದುಗಡೆ ಫಿರ್ಯಾದಿದಾರನನ್ನು ಕೂಡಿಸಿಕೊಂಡು ರಾಯಚೂರಿನಿಂದ
ಹಂಪಿಗೆ ಹೋಗಿ ಅಲ್ಲಿಂದ ಮರಳಿ ರಾಯಚೂರಿಗೆ ಗಂಗಾವತಿ-ಸಿಂಧನೂರು ರಸ್ತೆಯಲ್ಲಿ ಗೊರೆಬಾಳ ಸೀಮಾದಲ್ಲಿ
ದೊಡ್ಡಭೀಮನಗೌಡ ಇವರ ಹೊಲದ ಹತ್ತಿರ ಬರುತ್ತಿದ್ದಾಗ ಎದುರಿಗೆ ಸಿಂಧನೂರು ಕಡೆಯಿಂದ ಆರೋಪಿತನು ತಾನು
ಚಾಲನೆ ಮಾಡುತ್ತಿದ್ದ ಟವೇರಾ ವಾಹನ ನಂ.KA-37/M-9689 ನೇದ್ದನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ
ನಡೆಸಿಕೊಂಡು ಹೋಗಿ ಮೋಟರ್ ಸೈಕಲ್ ನಂ.KA-36/EN-6657 ಗೆ ಟಕ್ಕರ್ ಕೊಟ್ಟಿದ್ದಕ್ಕೆ ಮೋಟರ್ ಸೈಕಲ್
ಸವಾರಿ ಮಾಡುತ್ತಿದ್ದ ವಿರುಪಾಕ್ಷಿ ಈತನಿಗೆ ತಲಗೆ ಒಳಪೆಟ್ಟು, ಮೈ ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು
ಮತ್ತು ಫಿರ್ಯಾದಿದಾರನಿಗೆ ಮುಂದೆಲೆಗೆ ಮೂಕಪೆಟ್ಟು ಮತ್ತು ಮೂಗಿಗೆ ತರಚಿದ ಗಾಯವಾಗಿರುತ್ತದೆ ಎಂದು
ಮುಂತಾಗಿ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಸೀಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ
ನಂ.10/2020, ಕಲಂ. 279, 337, 338 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತಾರೆ.