ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟ್ಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ-16/09/2020 ರಂದು ಸಾಯಂಕಾಲ
16-30 ಗಂಟೆಗೆ
ಪಿ.ಎಸ್,ಐ
ಬಳಗಾನೂರು
ಪೊಲೀಸ್ ಠಾಣೆ ರವರು ಮಟಕಾ ಜೂಜಾಟದ ದಾಳಿ ಪಂಚನಾಮೆ ಹಾಗೂ ಒಬ್ಬ ಆರೋಪಿತನನ್ನು
ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ-16/09/2020 ರಂದು ದುರ್ಗಾಕ್ಯಾಂಪದಲ್ಲಿ
ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ನಾನು ಹಾಗೂ
ಸಿಬ್ಬಂದಿ
ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ ಕೆ.ಎ-36 ಜಿ-211 ನೇದ್ದರಲ್ಲಿ ಠಾಣೆಯಿಂದ ಹೊರಟು ದುರ್ಗಾಕ್ಯಾಂಪ ರಾಮಮಂದಿರ ಗುಡಿಯ ಹತ್ತಿರ ಮರೆಯಾಗಿ ನಿಂತು
ನೋಡಲಾಗಿ ದುರ್ಗಾಕ್ಯಾಂಪನ ದುರುಗಮ್ಮ ಗುಡಿಯ ಹತ್ತಿರ ಸಾರ್ವಜನಿಕೆ ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಆರೋಪಿ ನಂ-1 ಈತನು ಸಾರ್ವಜನಿಕರಿಂದ
1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ
ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು
ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಕೆ.ಸತ್ಯನಾರಯಣ
ಶೆಟ್ಟಿ ತಂದೆ ನರಸಿಂಹಯ್ಯ ಶೆಟ್ಟಿ 40 ವರ್ಷ ಜಾ-ಶೆಟ್ಟರ್ ಉ-ಕಿರಾಣಿ ಅಂಗಡಿ ಕೆಲಸ ಸಾ-ದುರ್ಗಾಕ್ಯಾಂಪ್
ತಾ:-ಮಸ್ಕಿ ಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ
ಜೂಜಾಟದ ನಗದು ಹಣ 330/- 2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ 3).ಮಟಕಾ ನಂಬರ್ ಬರೆದ
ಚೀಟಿ ಅಂ.ಕಿ.ಇಲ್ಲಾ. ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ
ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ. ಸದರಿಯವನು ಮಟಕಾ ನಂಬರ ಪಟ್ಟಿಯನ್ನು ಆರೋಪಿ ನಂ-2 ಯಂಕೋಬ ನಾಯಕ ಸಾ-ತಲೆಖಾನ್ ತಾ:-ಮಸ್ಕಿ ನೇದ್ದವರನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ನಂತರ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು
ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 80/2020 ಕಲಂ-78(3).ಕೆ.ಪಿ
ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
NDPS ACT. ಪ್ರಕರಣದ
ಮಾಹಿತಿ.