ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಐ.ಟಿ.
ಕಾಯ್ದೆ ಅಡಿಯಲ್ಲಿ ಮೋಸ ಮಾಡಿದ ಪ್ರಕರಣದ ಮಾಹಿತಿ.
ದಿನಾಂಕ:02-11-2020 ರಂದು ಬೆಳಿಗ್ಗೆ
10-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು
ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಎಸ್.ಬಿ.ಐ. ಬ್ಯಾಂಕಿನಲ್ಲಿ ಉಳಿತಾಯ ಖಾತೆ ಸಂ.37212333107
ನೇದ್ದನ್ನು ಹೊಂದಿದ್ದು ದಿನಾಂಕ:01-11-2020 ರಂದು ಮಧ್ಯಾಹ್ನ 2-19 ಗಂಟೆ ಸುಮಾರಿಗೆ ಅರ್ಜಿದಾರರ
ಮೊಬೈಲ್ ನಂ.9916147551 ನೇದ್ದಕ್ಕೆ ಫಿರ್ಯಾದಿದಾರರ ಸ್ನೇಹಿತರಾದ ಟಿ.ಎನ್.ಎ. ವಿಜಯ ರಾಜ್ ಇವರ ಮೊಬೈಲ್
ನಂ.8769990025 ನೇದ್ದರಿಂದ ವಾಟ್ಸ್ ಅಪ್ ಮೆಸೇಜ್ ಬಂದಿದ್ದು ಟಿ.ಎನ್.ಎ. ವಿಜಯ ರಾಜ್ ಇವರು ತಾವು
ಯು.ಎಸ್.ಎ. ನಲ್ಲಿರುವದಾಗಿ ತಿಳಿಸಿ ಯೋಗಕ್ಷೇಮ ವಿಚಾರಿಸಿ ನಂತರ ತಮ್ಮ ಪತ್ನಿಯ ಸಹೋದರಿಗೆ ಹಾರ್ಟ್
ಸರ್ಜರಿ ಇದ್ದು ತಮ್ಮ ಖಾತೆಯಿಂದ ಹಣ ಪಾವತಿಸಲು ಆಗದೆ ಇದ್ದುದ್ದರಿಂದ ನೀವು ಹಣವನ್ನು ಕಳುಹಿಸಿದರೆ
ಸೋಮವಾರ ಹಣ ವಾಪಸ ಹಿಂದಿರುಗಿಸುವದಾಗಿ ತಿಳಿಸಿ ಶ್ವೇತಾ ಎಂಬುವ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಸಂ.35486390382
(ಐ.ಎಫ್.ಎಸ್.ಸಿ. ನಂ.SBIN0060030) ನೇದ್ದಕ್ಕೆ ರೂ.50.000/- ಹಣ ಜಮಾ ಮಾಡಲು ಕೋರಿದ್ದು ಅದಕ್ಕೆ
ಫಿರ್ಯಾದಿದಾರರು ತಮ್ಮ ಮೊಬೈಲ್ ನಿಂದ ಎಸ್.ಬಿ.ಐ. ಯೊನೊ ಕ್ವಿಕ್ ಪೇ ಇಂಟರನೆಟ್ ಬ್ಯಾಂಕಿಂಗ್ ಮೂಲಕ
ರೂ.25.000/- ಗಳನ್ನು ಅವರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದು ನಂತರ ಸದರಿಯವರು ಇನ್ನೂ ಹೆಚ್ಚಿನ
ಹಣದ ಅವಶ್ಯಕತೆ ಇದೆ ಎಂದು ಮೆಸೇಜ್ ಕಳುಹಿಸಿದ್ದರಿಂದ ಫಿರ್ಯಾದಿದಾರರು ತಮ್ಮ ಮಗನಾದ ವರುಣ್ ಈತನಿಗೆ
ತನ್ನ ಸ್ನೇಹಿತನು ಹೇಳಿದ ಖಾತೆಗೆ ಹಣವನ್ನು ಜಮಾ ಮಾಡುವಂತೆ ತಿಳಿಸಿದ್ದರಿಂದ ಫಿರ್ಯಾದಿದಾರರ ಮಗ ವರುಣ್
ಈತನು ತನ್ನ ಮೊಬೈಲ್ ನಂ.7349527791 ನೇದ್ದರಿಂದ ಗೂಗಲ್ ಪೇ ಮೂಲಕ ರೂ.50.000/- ಗಳನ್ನು ಹಾಗೂ ರೂ.25.000/-
ಗಳನ್ನು ಮೊಬೈಲ್ ನಂ.8867308359 ನೇದ್ದಕ್ಕೆ ಫೋನ್ ಪೇ ಮೂಲಕ ಕಳುಹಿಸಿದ್ದು, ಹೀಗೆ ಒಟ್ಟು ರೂ.1.00.000/-
ಗಳನ್ನು ವರ್ಗಾವಣೆ ಮಾಡಿದ್ದು ಇರುತ್ತದೆ.