ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ:11-10-2020 ರಂದು 12-10 ಪಿ.ಎಮ್ ಸಮಯದಲ್ಲಿ ಆರ್.ಹೆಚ್.ಕ್ಯಾಂಪ್ ನಂ.02
ರಲ್ಲಿ ಪ್ರೊಸೇನ್ ದತ್ ಇವರ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ರಿಂದ 06 ರವರು ದುಂಡಾಗಿ
ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದಾಗ, ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ
ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿಯಲು ಆರೋಪಿ 01 ಕುಮಾರೇಶ ಬೈರಾಗಿ ತಂದೆ ಅಮರ್ ಬೈರಾಗಿ, ಇತರೆ 2 ಜನರು ಸಿಕ್ಕಿಬಿದ್ದಿದ್ದು, ಆರೋಪಿ
04 ಸುಶಾಂತೋ ತಂದೆ ನಲಿನಿ, 5)ಸುಸೇನ್ ತಂದೆ
ನಲಿನಿ, 6)ಪ್ರೊಸೇನ್ ದತ್ ಎಲ್ಲರೂ ಸಾ:ಆರ್.ಹೆಚ್.ನಂ.02 ಕ್ಯಾಂಪ್, ತಾ:ಸಿಂಧನೂರು ರವರು ಓಡಿ ಹೋಗಿದ್ದು,
ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಕಣದಲ್ಲಿಂದ ನಗದು ಹಣ ರೂ.5480/-
ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ 1-50 ಪಿ.ಎಮ್ ಕ್ಕೆ ಬಂದು ಮುದ್ದೇಮಾಲು ಮತ್ತು ಸಿಕ್ಕಿಬಿದ್ದ 03 ಜನ ಆರೋಪಿತರನ್ನು, ದಾಳಿ ಪಂಚನಾಮೆ ನನಗೆ ಒಪ್ಪಿಸಿ ದೂರು
ಕೊಟ್ಟಿದ್ದು, ಸದರಿ ದೂರು ಮತ್ತು ದಾಳಿ
ಪಂಚನಾಮೆ ಸಾರಾಂಶದ ಮೇಲಿಂದ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಠಾಣಾ
N.C ಸಂ.38/2020, ಕಲಂ.87 ಕ.ಪೊ ಕಾಯ್ದೆ ರೀತ್ಯ ದಾಖಲಿಸಿಕೊಂಡು, ನಂತರ ಮಾನ್ಯ
ನ್ಯಾಯಾಲಯದಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಪರವಾನಿಗೆ
ಪಡೆದುಕೊಂಡು ಸದರಿ ದೂರು & ದಾಳಿ ಪಂಚನಾಮೆ ಸಾರಾಂಶದ ಮೇಲಿಂದಾ
ಸಿಂಧನುರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.151/2020, ಕಲಂ.87 ಕ.ಪೊ ಕಾಯ್ದೆ ಅಡಿಯಲ್ಲಿ ದಾಖಲಿಸಿ ತನಿಖೆ
ಕೈಗೊಂಡಿರುತ್ತಾರೆ.
ಕೋಳಿ ಪಂದ್ಯ ಪ್ರಕರಣದ ಮಾಹಿತಿ.
ದಿನಾಂಕ
11.10.2020 ರಂದು ಮಧ್ಯಾಹ್ನ 2-00 ಗಂಟೆಗೆ ಇಂದಿರಾನಗರದ ಗುಡ್ಡದ ರಾಮನ ಗುಡಿಯ ಹಿಂದುಗಡೆ ಸಾರ್ವಜನಿಕ
ಸ್ಥಳದಲ್ಲಿ ಕೆಲವು ಜನರು ಕೋಳಿಗಳನ್ನು ಕಾದಟಕ್ಕೆ ಬಿಟ್ಟು ಅವುಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ
ಜೂಜಾಟ ಆಡುತ್ತಿದ್ದಾಗ ಡಿಎಸ್.ಪಿ ರಾಯಚೂರು ಮತ್ತು ಸಿಪಿಐ ಪಶ್ಚಿಮ ವೃತ್ತ ಇವರ ಮಾರ್ಗದರ್ಶನದಲ್ಲಿ
ಪಿ.ಎಸ್.ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮೇಲ್ಕಾಣಿಸಿದ ಆರೋಪಿ 1]
ಓಬಳೇಶ ತಂದೆ ವೆಂಕಟಪ್ಪ, ವಯಾ: 48 ವರ್ಷ, ಕೊರವರ್, ಕಾಯಿಪಲ್ಲೆ ವ್ಯಾಪಾರ, ಸಾ:ಇಂದಿರಾ ನಗರ ರಾಯಚೂರು, 2]. ಬಿ.ಗಂಗೋಲೆಪ್ಪ ತಂದೆ ಕೆಶಪ್ಪ, ವಯಾ:
35 ವರ್ಷ, ಕೊರವರ್, ಕಾಯಿಪಲ್ಲೆ ವ್ಯಾಪಾರ, ಸಾ:ಇಂದಿರಾ ನಗರ, ರಾಯಚೂರು 3]. ಕಿರಣ್ ತಂದೆ ಓಬಳೇಶ,
ವಯಾ: 25 ವರ್ಷ, ಕೊರವರ್, ಕಾಯಿಪಲ್ಲೆ ವ್ಯಾಪಾರ, ಸಾ:ಇಂದಿರಾ ನಗರ ರಾಯಚೂರು. ರವರರಿಂದ ನಗದು ಹಣ
ರೂ. 200/- ರೂ ಗಳು ಮತ್ತು 03 ಹುಂಜಗಳು ಅ.ಕಿ. 2400/-ರೂ. ಜಪ್ತಿ ಮಾಡಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಅಡಿಯಲ್ಲಿ
ಒಳಪಡುತ್ತಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಇಂದು ದಿನಾಂಕ 11.10.2020 ಸಂಜೆ 4-30 ಗಂಟೆಗೆ
ಸದರಿ ಪಂಚನಾಮೆ ಮತ್ತು ವರದಿ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 117/2020, ಕಲಂ
87 {ಬಿ} ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಮನುಷ್ಯ ಕಾಣೆ ಪ್ರರಕಣದ ಮಾಹಿತಿ.