Thought for the day

One of the toughest things in life is to make things simple:

1 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ 31.12.2019 ರಂದು ಬೆಳಿಗ್ಗೆ 10.00 ಗಂಟೆಗೆ ಕೋಠಾ ಗ್ರಾಮದ ವಾಲ್ಮೀಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 69/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  31.12.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂಬರ 165/2019 PÀ®A 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.

ದಿನಾಂಕ:30-12-2019 ರಂದು ರಾತ್ರಿ 10-30 ಗಂಟೆ  ಸುಮಾರಿಗೆ ಸಿಂಧನೂರು ಮಸ್ಕಿ ಮುಖ್ಯ ರಸ್ತೆಯ ಬೂಲತದಿನ್ನಿ ಕ್ಯಾಂಪಿನ ಪಿಕ್ ಆಪ್ ಡ್ಯಾಮ್ ಹತ್ತಿರದ ಮುಂದಿನ ರಸ್ತೆಯಲ್ಲಿ ಇರುವ ಬ್ರೀಜ್ ಮೇಲೆ ಆರೋಪಿ 2 ಈತನು ತನ್ನ ಲಾರಿ ನಂ KA-16-C-8396 ನೇದ್ದನ್ನು ಸಿಂಧನೂರು ಕಡೆಯಿಂದ ಮಸ್ಕಿ ಕಡೆಗೆ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಮಸ್ಕಿ ಕಡೆಯಿಂದ ಸಿಂಧನೂರ ಕಡೆಗೆ ಆರೋಪಿ 1 M.D ಸಮೀರ್ ತಂದೆ ಬಾಷಾ : 31 ವರ್ಷ ಜಾ: ಮುಸ್ಲಿಂ : ಚಾಲಕ ಸಾ:LBS ನಗರ ರಾಯಚೂರು ಈತನು ಕೂಡ ತನ್ನ ಕಾರ ನಂ KA-36-N-5286 ನೇದ್ದನ್ನು ಅತೀವೇಗ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದಿದ್ದರಿಂದ, ಆರೋಪಿ 2 ಶರಣಪ್ಪ ತಂದೆ ನಾಗಪ್ಪ ಕನ್ನಾಳ : 34 ವರ್ಷ ಜಾ: ಲಿಂಗಾಯತ ಸಾ: ಮಟ್ಟೂರು ತಾ: ಲಿಂಗಸೂಗೂರು  ಈತನು ತನ್ನ ಲಾರಿಯನ್ನು ಒಮ್ಮೆಲೇ ಎಡಕ್ಕೆ ತೆಗೆದುಕೊಂಡಿದ್ದರಿಂದ ಆರೋಪಿ 1 ಈತನು ತನ್ನ ಕಾರನು ನಿಯಂತ್ರಿಸದೆ ಲಾರಿಯ ಡಿಸೇಲ್ ಟ್ಯಾಂಕ್ ಹತ್ತಿರ ಟಕ್ಕರ ಕೊಟ್ಟ ಪರಿಣಾಮವಾಗಿ ಕಾರು ಪಲ್ಟಿಯಾಗಿ ಫಿರ್ಯಾದಿದಾರನ ಹೊಲದಲ್ಲಿ ಬಿದ್ದಿದ್ದು,1) ಆರೋಪಿ 2 M.Dಸಮೀರನಿಗೆ ಬಲಗೆ ಮೊಣಕೈಗೆ ಮುರಿದಂತೆ ಭಾರಿ ಗಾಯ,ಹಣೆಗೆ ತೆರಚಿದ ಗಾಯ, 2) ಅಬ್ದುಲಖಾದರ ಜಿಲಾನಿಗೆ ತಲೆಗೆ ಮತ್ತು ಬೆನ್ನಿಗೆ ಒಳಪೆಟ್ಟು,3) ಶಬ್ಬೀರ್ ಬಲಗಡೆ ಭುಜಕ್ಕೆ ತಲೆಗೆ ಒಳಪೆಟ್ಟಾಗಿ,ಹಣೆಗೆ ತೆರಚಿದ ಗಾಯ,4) ಶೇಖಮಹ್ಮದ ಬಾಯಿಯಲ್ಲಿ ಹಲ್ಲು ಮುರಿದು,ಎಡಗೈ,ಭುಜಕ್ಕೆ,ಮೊಣಕೈಗೆ.ಪಕ್ಕೆಗೆ,ಗದ್ದಕ್ಕೆ ಗಾಯಗಳಾಗಿರುತ್ತವೆ, ಅಂತಾ ಫಿರ್ಯಾದಿದಾರನು ತಡವಾಗಿ ಠಾಣೆಗೆ ಬಂದು ಗಣಕೀಕೃತದಲ್ಲಿ ಅಳವಡಿಸಿದ ದೂರು ನೀಡಿದ್ದರ ಸಾರಾಂಶದ ಮೇಲಿಂದ ಸಂಚಾರ ಪೊಲೀಸ್ ಠಾಣೆ ಸಿಂಧನೂರು ಠಾಣಾ ಗುನ್ನೆ ನಂ.73/2019, ಕಲಂ.279,337,338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ:22-09-2019 ರಂದು 7-30 ಪಿ.ಎಮ್ ಸುಮಾರಿಗೆ ಮಸ್ಕಿ-ಸಿಂಧನೂರು ರಸ್ತೆಯಲ್ಲಿ ಮುಳ್ಳೂರು ಇ.ಜೆ ಕ್ರಾಸಿನಲ್ಲಿ ಕುಂಬಾರ್ ಈರಪ್ಪನ ಗೋದಾಮಿನ ಹತ್ತಿರ ಫಿರ್ಯಾದಿ ²æà ¤AUÀ¥Àà @ °AUÀ¥Àà vÀAzÉ CA§æ¥Àà, ªÀAiÀÄ:48ªÀ, G:PÀÆ°PÉ®¸À, ¸Á:¸ÀgÀPÁj ±Á¯É ºÀwÛgÀ K¼ÀÄgÁVPÁåA¥ï ¹AzsÀ£ÀÆgÀÄ ಈತನು  ಪಗಡದಿನ್ನಿಕ್ಯಾಂಪಿನಿಂದ ಏಳುರಾಗಿಕ್ಯಾಂಪಿಗೆ ಸೈಕಲ್ ಸವಾರಿ ಮಾಡಿಕೊಂಡು ನಿಧಾನವಾಗಿ ರಸ್ತೆಯಲ್ಲಿ ಎಡಗಡೆ ಹೋಗುವಾಗ ಆತನಿಂದ ಹಿಂದುಗಡೆಯಿಂದ ಆರೋಪಿತನು ಲಾರಿ ನಂ.AP-29/TA-4660 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರನ ಸೈಕಲಿಗೆ ಹಿಂದುಗಡೆ ಗುದ್ದಿದ್ದರಿಂದ ಫಿರ್ಯಾದಿದಾರನು ರಸ್ತೆಯಲ್ಲಿ ಬಿದ್ದಿದ್ದು, ಲಾರಿಯ ಗಾಲಿ ಫಿರ್ಯಾದಿದಾರನ ಎಡಗೈ ಮೇಲೆ ಹಾದು ಹೋಗಿದ್ದರಿಂದ ಫಿರ್ಯಾದಿದಾರನ ಎಡಗೈ ಮುಂಗೈ ಮತ್ತು 02, 03, 04 ನೇ ಬೆರಳುಗಳಿಗೆ ರಕ್ತಗಾಯಗಳಾಗಿ ನಜ್ಜುಗುಜ್ಜಾಗಿದ್ದು ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ನಂತರ ರಾಯಚೂರಿನ ಧನ್ವಂತರಿ ಆಸ್ಪತ್ರೆಗೆ ಸೇರಿಕೆಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಇರುತ್ತದೆ ಎಂದು ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದು ಸಂ.274/2019 ನೇದ್ದರ ಸಾರಾಂಶದ ಮೇಲಿಂದಾ ಸಿಂಧನುರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ ಗುನ್ನೆ ನಂ.187/2019, ಕಲಂ.279, 337, 338 ಐಪಿಸಿ ರೀತ್ಯ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ-31-12-2019 ರಂದು ಸಂಜೆ 6-00 ಗಂಟೆಗೆ ಫಿರ್ಯಾಧಿ ಶ್ರೀ ಧೇರ್ಬುತೋ ಮಂಡಲ್ ತಂದೆ ಶಿವು ಮಂಡಲ್ ಇವರು ಪೊಲೀಸ್ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದೇನೆಂದರೆ, ದಿನಾಂಕ:30-12-2019 ರಂದು ಸಂಜೆ 4-45 ಗಂಟೆಗೆ ಫಿರ್ಯಾದಿ ಮತ್ತು ಆತನ ಸಂಗಡಿಗರಾದ ಠಾಕೂರ್ ಮಂಡಲ್, ಜತ್ತಿನ ಮಂಡಲ್ , ಗೌರಂಗು ಮಂಡಲ್ ಇವರು ದೇವಸೂಗೂರಿನ ಕೃಷ್ಣಾ ಬ್ರೀಡ್ಜ್ ಹತ್ತಿರ ಕೃಷ್ಣಾ ನದಿಯಲ್ಲಿ ಮೀನು ಹಿಡಿಯುತ್ತಿರುವಾಗ. ಆರೋಪಿ ನಂ 01 ಜಂಗ್ಲಪ್ಪ ತಂದೆ ಬೋಳಬಂಡಿ ವ||46ವರ್ಷ, ಸಾ||ರಾಯಚೂರು  ಹಾಗೂ ಇತರೆ 04 ನೇದ್ದವರು ಸೇರಿಕೊಂಡು ಯಾವೂರಲೇ ಸೂಳೇ ಮಕ್ಕಳೇ ನಮ್ಮ ಊರಿಗೆ ಬಂದು ಮೀನು ಹಿಡಿಯುತ್ತೀರಿ ಅಂತಾ ಅವಾಚ್ಯಶಬ್ದಗಳಿಂದ ಬೈದು  ಬೊಂಬು ಮತ್ತು ಕೈಗಳಿಂದ ಮೈಕೈಗಳಿಗೆ ಹೊಡೆಬಡೆ ಮಾಡಿ ಗಾಯಗೊಳಿಸಿ ಇನ್ನೊಂದು ಸಲ ನದಿಯಲ್ಲಿ ಮೀನು ಹಿಡಿಯಲು ಬಂದರೆ ನಿಮ್ಮನ್ನು ಸಾಯಿಸಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂಬರ 65/2019 ಕಲಂ 143,147,323,324,504,506 ಸಹಿತ 149 ಐಪಿಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.