Thought for the day

One of the toughest things in life is to make things simple:

23 Jun 2019

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟ ಪ್ರಕರದ ಮಾಹಿತಿ.
ದಿನಾಂಕ: 21-06-2019 ರಂದು ಸಾಯಂಕಾಲ 4.45 ಗಂಟೆಗೆ ಸಗಮಕುಂಟಾ ಗ್ರಾಮದ ಬಸ್ನಿಲ್ದಾಣದ ಹತ್ತಿರ ನಾಗರಾಜ ಡಬ್ಬಿಯ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ನಸೀಬಿನ ಮಟಕಾ ಜೂಜಾಟದಲ್ಲಿ ತೊಡಗಿರವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಪಿಐ ರವರ ಮಾರ್ಗದರ್ಶನದಲ್ಲಿ ಅಲ್ಲಿಗೆ ಪಿ.ಎಸ್.ಐ, ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ಮರೆಯಲ್ಲಿ ನಿಂತು ನೋಡಿ  ಮೇಲ್ಕಂಡ ಆರೋಪಿ ZÉÆüÀ¥Àà vÀAzÉ ZÀ¥Áæ¹ £ÀgÀ¸À¥Àà, ªÀAiÀiÁ:28ªÀµÀð, eÁ: £ÁAiÀÄPÀ, G: qÉæöʪÀgÀPÉ®¸À, ¸Á: ¸ÀUÀªÀÄPÀÄAmÁ ಈತನು ಜನರನ್ನು ಕೂಗಿ ನಸೀಬಿನ ಮಟಕಾ ಜೂಜಾಟಕ್ಕೆ ಹಣವನ್ನು ಕಟ್ಟಿರಿ ನಿಮ್ಮ ಜೂಜಾಟದ ನಂಬರ ಬಂದರೆ 1ರೂಗೆ 80 ರೂಪಾಯಿ ಕೊಡತ್ತೇನೆ ಎಂದು ಜನರಿಂದ ಹಣ ಪಡೆದುಕೊಂಡು ನಸೀಬಿನ ಮಟಕಾ ಜೂಜಾಟದಲ್ಲಿ ನಿರತರಾಗಿ ಮಟಕಾ ಜೂಜಾಟದ ಅದೃಷ್ಟದ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಸಾಯಂಕಾಲ 5.30 ಗಂಟೆಗೆ ದಾಳಿ ಮಾಡಿ ಹಿಡಿದು ಅವನಿಂದ  ನಸೀಬಿನ ಮಟಕಾ ಜೂಜಾ ಅದೃಷ್ಟದ ನಗದು ಹಣ 1350/-ರೂ ಒಂದು ಮಟಕಾ ಚೀಟಿ ಹಾಗೂ ಬಾಲ್ ಪೆನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲು ಜ್ಞಾಪನ ಪತ್ರವನ್ನು ನೀಡಿದ ಮೇರೆಗೆ ನಸೀಬಿನ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶವು ಅಸಂಜ್ಞೆಯ ಸ್ವರೂಪದ್ದಾಗಿದ್ದರಿಂದ ಯಾಪಲದಿನ್ನಿ ಠಾಣಾ ಎನ್‍.ಸಿ ಸಂ-05/2019 ಕಲಂ 78(3) ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿತರ ವಿರುದ್ದ ಎಫ್..ಆರ್ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಪಡೆಯುವ ಕುರಿತು ಯಾದಿಯನ್ನು ಬರೆದುಕೊಂಡಿದ್ದು ಇಂದು ದಿನಾಂಕ: 22-06-2019 ರಂದು ಬೆಳಿಗ್ಗೆ 07.00 ಗಂಟೆಗೆ ಅನುಮತಿ ಪಡೆದು ಯಾಪಲದಿನ್ನಿ ಪೊಲೀಸ್ ಠಾಣಾ ಗುನ್ನೆ ನಂಬರ 31/2019  PÀ®A;78(3) PÉ.¦.PÁAiÉÄÝ ಅಡಿಯಲ್ಲಿ ಪ್ರಕರಣವನ್ನು ದಾಖಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
            ದಿನಾಂಕ 22-06-2019  ರಂದು 16.50  ಗಂಟೆ ಸುಮಾರು ಮಸ್ಕಿಯ ಬಳಗಾನೂರು ಕ್ರಾಸನಲ್ಲಿಯ ಬಸ್ ನಿಲ್ದಾಣದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳುತ್ತಾ, ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಪಿ.ಎಸ್.ಐ. ಮಸ್ಕಿ, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸಿಕ್ಕಿಬಿದ್ದವನಿಂದ  ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 1040/- ರೂ ದೊರೆತಿದ್ದು, ಆರೋಪಿ ಲಕ್ಷ್ಮಣ ತಂದೆ ನಾಮದೇವ ಎಗ್ಗರೈಸ್ ಬಂಡಿ, 35 ವರ್ಷ, ದರ್ಜಿಯವರು ಸಾ:ವಾಲ್ಮಿಕ ನಗರ ಮಸ್ಕಿ ಈತನು ಬರೆದ ಮಟ್ಕಾ ಚೀಟಿಯನ್ನು ರಾಜಶೇಖರ ತಂದೆ ಹನ್ಮಂತಪ್ಪ ಲಿಂಗಾಯತ, 20 ವರ್ಷ ಸಾ:ಕಾರಟಗಿ ಉಪ್ಪಾರ ಓಣಿ  ವಾರ್ಡ ನಂ-2 ಈತನಿಗೆ ಕೊಡುವದಾಗಿ ಹೇಳಿದ್ದು, ಝಡ್ತಿ ಮಾಡಲಾದ ಮುದ್ದೆಮಾಲನ್ನು ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಮಸ್ಕಿ ಪೊಲೀಸ್ ಠಾಣಾ ಗುನ್ನೆ ನಂಬರ 71/2019 ಕಲಂ 78 (111)  ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.