ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:
PÉÆ¯É ¥ÀæPÀgÀtzÀ ªÀiÁ»w.
ದಿನಾಂಕ 25.09.2019 ರಂದು 19-00 ಗಂಟೆಗೆ
ಫಿರ್ಯದಿದಾರರಾದ ಪದ್ಮಾವತಿ @
ವಸಂತ
ಇವರು ಠಾಣೆಗ ಬಂದು ಗಣಕಿಕೃತ
ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ `` ದಿನಾಂಕ 25.09.2019 ರಂದು ಬೆಳಿಗ್ಗೆ 9-30 ಗಂಟೆಗೆ ತಮಗೆ ರಾಯಚೂರು ಪೊಲೀಸರು ಫೋನ್ ಮಾಡಿ ತಿಳಿಸಿದ್ದೇನೆಂದರೆ,
ರಾಯಚೂರಿನ ಪೂರ್ಣಿಮಾ ಟಾಕೀಸ್ ಹತ್ತಿರ ಬಲಗಡೆ ಗೋಡೆ ಹತ್ತಿರ ಚರಂಡಿಯಲ್ಲಿ ನಿಮ್ಮ
ಸಂಬಂಧಿಯಾದ ಹರಿಪ್ರಸಾದ್
ಈತನ ಮೃತ ದೇಹ ಪತ್ತೆಯಾಗಿದೆ ನೀವು ಬಂದು ನೋಡಿರಿ ಎಂದು ತಿಳಿಸಿದ ಮೇರೆಗೆ ತಾನು, ತಮ್ಮ ಸಂಬಂಧಿಕರೊಂದಿಗೆ
ರಾಯಚೂರಿನ ರಿಮ್ಸ ಆಸ್ಪತ್ರೆಯ ಶವಗಾರ ಕೋಣೆಗೆ ಪೊಲೀಸರೊಂದಿಗೆ ಹೋಗಿ ಪಿ.ಹರಿಪ್ರಸಾದನ ಶವವನ್ನು ಗುರುತಿಸಿದ್ದು,
ಆತನ ಹಣೆಗೆ, ಬಲಗಣ್ಣಿನ ಕೆಳಗೆ, ಮೂಗಿಗೆ, ಎಡಗಡೆಯ ತಲೆಗೆ ಮತ್ತು ತಲೆಬುರುಡೆಗೆ ಭಾರೀ ರಕ್ತಗಾಯಗಳಾಗಿದ್ದು,
ಕಂಡು ಬಂದಿದ್ದು, ಸದರಿ ಗಾಯಗಳು ಕಲ್ಲಿನಿಂದ ಜಜ್ಜಿ,
ಹೊಡೆದು ಭಾರೀ ಗಾಯಗಳನ್ನು ಮಾಡಿ ಸಾಯಿಸಿದಂತೆ ಕಂಡು ಬರುತ್ತದೆ. ಇದನ್ನು ನೋಡಿದರೆ ತನ್ನ ತಮ್ಮನ ಹತ್ಯೆಯನ್ನು ಆತನ ಹೆಂಡತಿಯಾದ
ಇಂದು @ ಇಂದಿರಾ ಆಕೆಯ ತಾಯಿ ಗೀತಮ್ಮ ಆಕೆಯ ತಮ್ಮಂದಿರಾದ ವಿನೋದ ಮತ್ತು ಅರವಿಂದ ಎಲ್ಲರೂ ಸಾ. ಮ್ಯಾದರವಾಡಿ, ಸಿಯತಲಾಬ್, ರಾಯಚೂರು. ಇವರೆಲ್ಲರೂ
ಸೇರಿ ಇಂದು @ ಇಂದಿರಾ
ಹಾಗೂ ಮಕ್ಕಳನ್ನು ಗಂಡನ ಮನೆಗೆ ಕಳುಹಿಸಲು ಇಷ್ಟವಿಲ್ಲದ ಕಾರಣ ತನ್ನ
ತಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಕಲ್ಲಿನಿಂದ ಜಜ್ಜಿ ಭಾರೀ ರಕ್ತಗಾಯ ಮಾಡಿ, ಕೊಲೆ ಮಾಡಿ ಪೂರ್ಣಿಮಾ ಟಾಕೀಸ್ ಬಲಗಡೆ ಕಾಂಪೌಂಡ್ ಗೋಡೆಯ ಹತ್ತಿರ ಇರುವ ಚರಂಡಿಯಲ್ಲಿ
ಬಿಸಾಡಿ ಹೋಗಿರುತ್ತಾರೆ. ಸದರಿ ಕೊಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು
ಕ್ರಮ ಜರುಗಿಸಲು ವಿನಂತಿ ಮುಂತಾಗಿ
ಇರುವ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆನಂ.71/2019 ಕಲಂ: 302 ರೆ/ವಿ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಕಿರುಕುಣ ಪ್ರಕರಣದ ಮಾಹಿತಿ.
ದಿನಾಂಕ: 17/04/2016 ರಂದು ಆರೋಪಿ ನಂ.1 AiÀĪÀÄ£ÀÆg¥ÀàÀ
¸ÀºÁAiÀÄPÀ ¥ÁæzÁå¥ÀPÀgÀÄ ¸ÀgÀPÁj ¥ÀzÀ« ªÀĺÁ«zÁå®AiÀÄ ¹AzsÀ£ÀÆgÀ ರವರ ಸಂಗಡ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದು,ಮದುವೆ ಸಮಯದಲ್ಲಿ ಪಿರ್ಯಾದಿ ತವರು ಮನೆಯವರು ಆಕೆಯ ಗಂಡನ ಮನೆಯವರಿಗೆ ರೂ.2 ಲಕ್ಷ ನಗದು, ಹಣ ಮೂರು ತೊಲೆ ಬಂಗಾರ ಕೊಟ್ಟಿದ್ದುಇರುತ್ತದೆ ಮದುವೆಯಾಗಿ ನಂತರ ದಿನಗಳಲ್ಲಿ ಆರೋಪಿ ನಂಭರ 01 ನೇದ್ದವನು ಫಿರ್ಯಾಧಿದಾರಳೊಂದಿಗೆ ಸಿಂಧನೂರಿನ ಇಂದಿರಾನಗರದಲ್ಲಿ ಮನೆ ಮಾಡಿಕೊಂಡು ತನ್ನ ತಾಯಿ ಆರೋಪಿ ನಂಬರ 02 ಮತ್ತು ತನ್ನಗಂಡನ ಸಹೋದರರಾದ ಆರೋಪಿ ನಂಭರ 03.& 04 ನೇದ್ದವರೊಂದಿಗೆ ವಾಸವಿದ್ದಳು , ಆರೋಪಿ ನಂಭರ 01
ನೇದ್ದವನಿಗೆ ಸಿಂಧನೂರಿನ ಸರಕಾರಿ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ನೇಮಕಗೊಂಡ ನಂತರ ಫಿರ್ಯಾಧಿದಾರಳಿಗೆ ಆರೋಪಿತನು ಇನ್ನು 10 ಲಕ್ಷ ಕೊಡುವದಾಗಿ ಕೇಳಿದ್ದರಿಂದ ಫಿರ್ಯಾಧಿದಾರಳ ತಂದೆ- ತಾಯಿಯವರು ಮಗಳ ಭವಿಷ್ಯಕ್ಕಾಗಿ 5 ಲಕ್ಷ ನಗದು ಹಣವನ್ನು ಆರೋಪಿ ನಂಬರ 01
ನೇದ್ದವನಿಗೆ ಕೊಟ್ಟಿದ್ದು ಇರುತ್ತದೆ. ನಂತರ ದಿನಗಳಲ್ಲಿ ಫಿರ್ಯಾಧಿದಾರಳು ಗರ್ಭವತಿ ಆದನಂತರ ದಿನಾಂಕ02-9-2017ರಂದು ಫಿರ್ಯಾಧಿದಾರಳ ಗಂಡನ ಮನೆಯಲ್ಲಿಸೀಮಂತ ಕಾರ್ಯಕ್ರಮದ ಸಮಯದಲ್ಲಿ ಆರೋಪಿ. ನಂಬರ01ಮತ್ತು02.03.04
ನೇದ್ದವರು ಕೂಡಿಕೊಂಡು ಫಿರ್ಯಾಧಿದಾರಳಿಗೆ ತಮಗೆ ಮಾರುತಿ ಶಿಪ್ಟ್ ಕಾರ್ ಕೊಡಿಸು ಅಂತಾ ಮಾನಸಿಕವಾಗಿ ತೊಂದರೆ ಕೊಡಲು ಪ್ರಾರಂಬಿಸಿ ಆರೋಪಿತರೆಲ್ಲರು ಸೇರಿ ಫಿರ್ಯಾಧಿದಾರಳಿಗೆ ಎಲೆ ಸೂಳೆ ನಾವು ಕೇಳಿದ ಹಾಗೆ ನಿನ್ನ ತವರು ಮನೆಯಿಂದ ಮಾರುತಿ ಶಿಪ್ಟ್ ಕಾರ್ ತರಲಿಲ್ಲಾ ಅಂದರೆ ನೀನು ನಮ್ಮ ಮನೆಯಲ್ಲಿಇರುವದು ಬೇಡ ಅಂತಾ ಆಕೆ ಗರ್ಭಿಣಿ ಅನ್ನುವದನ್ನು ಲೆಕ್ಕಿಸದೆ ಕೈಯಿಂದ ಹೊಡೆದರು ನಂತರ ಫಿರ್ಯಾಧಿದಾರಳ ತನ್ನ ತವರು ಮನೆಯಾದ ಉಮಲೂಟಿ ಗ್ರಾಮಕ್ಕೆ ಹೆರಿಗೆಗಾಗಿ ಬಂದು ತನ್ನ ತಂದೆ ತಾಯಿಯವರೊಂದಿಗೆ ವಾಸವಾಗಿದ್ದಳು, ದಿನಾಂಕ 18-01-2018 ರಂದು ಪಿರ್ಯಾಧಿದಾರಳು ಗಂಡು ಮಗನಿಗೆ ಜನ್ಮ ನೀಡಿದ್ದು ನಂತರದಿನದಲ್ಲಿ ತನ್ನ ತವರು ಮನೆಯಲ್ಲಿ ವಾಸವಾಗಿದ್ದಳು, ದಿನಾಂಕ 23-09-2019 ರಂದು ಸಾಯಂಕಾಲ
6-00 ಗಂಟೆಯ ಸುಮಾರು ಫಿರ್ಯಾಧಿದಾರಳು ತನ್ನ ತವರು ಮನೆಯಾದ ಉಮಲೂಟಿ ಗ್ರಾಮದಲ್ಲಿ ತನ್ನ ತಂದೆ ತಾಯಿಯೊಂದಿಗೆ ಇರುವಾಗ ಅರೋಪಿ ನಂಬರ 01
ಮತ್ತು 02 .03 04 ನೇದ್ದವರು ಕೂಡಿಕೊಂಡು ಮನೆಗೆ ಬಂದು ಫಿರ್ಯಾಧಿದಾರಳಿಗೆ ನಮ್ಮ ಮೇಲೆ ಕೇಸು ಹಾಕುತ್ತಿಯೇನಲೆ ಅದನ್ನು ವಾಪಸ್ಸು ತೆಗೆದಿಕೊ ಇಲ್ಲಾ ಅಂದರೆ ನಿನ್ನನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ . ಸದರಿ ಆರೋಪಿತರು ಫಿರ್ಯಾಧಿದಾರಳಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು, ಸದರಿ ಅರೊಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ
ಪೊಲೀಸ್ ಠಾಣಾ ಗುನ್ನೆ ನಂಬರ 174/2019 ಕಲಂ 498 (ಎ)
504 323 506 ರೆ/ವಿ 34
ಐಪಿಸಿ ಮತ್ತು and 3, 4
Dowry Prohibition Act-1961. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂರುತ್ತಾರೆ.