Thought for the day

One of the toughest things in life is to make things simple:

17 Apr 2018

Reported Crimes


                                                                                       
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
‘’ಪ್ರಕೃತಿ ವಿಕೋಪದಿಂದ ಸಿಡಿಲು ಬಡಿದು ಸಾವು’’        
ದಿ.15.04.2018 ರಂದು ಸಾಯಂಕಾಲ 5 ಗಂಟೆಗೆ ಪಿ.ಸಿ.300 ರವರು ಪಿ.ಎಸ್, ಸಿಂಧನೂರು ಗ್ರಾ ಠಾಣೆರವರು ಪಿರ್ಯಾದಿ ರಾಜಾನಾಯ್ಕ ಈತನ ಹೇಳಿಕೆಯನ್ನು ಮಾಡಿಕೊಂಡು ಪ್ರಕರಣ ದಾಖಲಿಸುವ ಕುರಿತು ಠಾಣೆಗೆ ಕಳುಹಿಸಿಕೊಟ್ಟಿದ್ದು ಅದರ ಸಾರಾಂಶವೇನೆಂದರೆ, ಪ್ರಕರಣದಲ್ಲಿಯ ಪಿರ್ಯಾದಿ ಮಗ ಮೃತ ಮಹಿಬೂಬಸಾಬ 20 ವರ್ಷ ಈತನು ತಮ್ಮ ಆಡುಗಳನ್ನು ಮೇಯ್ಯಿಸಲು ಸಾಲಗುಂದ ಸೀಮಾಂತರದಲ್ಲಿ ಹೋಗಿರುವಾಗ ಮದ್ಯಾಹ್ನ ವಿಪರೀತ ಬಿರುಗಾಳಿಯಿಂದ ಗುಡುಗು ಸಹೀತ ಮಳೆ ಯಾಗಿದ್ದರಿಂದ ಮೃತನು ಸಾಲಗುಂದ ಸೀಮಾಂತರದಲ್ಲಿ ನಬಿಸಾಬ ಚಿಕ್ಕಗುಡ್ಡ ಇವರ ಹೊಲದ ಬದುವಿನಲ್ಲಿರುವ ತಿರಸಲು ಮರದ ಕೆಳಗೆ ತನ್ನ ಆಡುಗಳ ಸಮೇತ ಆಶ್ರಯ ಪಡೆಯಲು ಗಿಡದ ಕೆಳಗೆ ನಿಂತಾಗ ಬಿರುಗಾಳಿಯಿಂದ ಗುಡುಗು ಸಹೀತ ಭಾರೀ ಮಳೆಯಾಗಿ ಗಿಡಕ್ಕೆ ಸಿಡಿಲು ಬಡಿದು ಗಿಡ ಸೀಳಿ ಗಿಡಿದ ಕೆಳಗೆ ಇದ್ದ ಮೃತನಿಗೂ ಸಹ ಸಿಡಿಲು ತಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಲ್ಲದೆ ಗಿಡದ ಕೆಳಗೆ ಇದ್ದ 3-ದೊಡ್ಡ ಆಡುಗಳಿಗೂ ಸಹ ಸಿಡಿಲು ತಾಗಿ ಹೊಟ್ಟೆ ಹೊಡೆದು ಕರಳುಗಳು ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೊಂದು ಆಡಿನ ಕಾಲುಗಳು ಮುರಿದಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಯುಡಿಆರ್ ನಂ.13/2018. ಕಲಂ 174.ಸಿ.ಆರ್.ಪಿ.ಸಿ.ಮೇಲಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ-15/04/2018 ರಂದು ಸಾಯಂಕಾಲ 16-30 ಗಂಟೆಗೆ .ಎಸ್. ರವರು ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ-15/04/2018 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ  ಆರೋಪಿತರು ತಮ್ಮ ಟ್ರಾಕ್ಟರದಲ್ಲಿ ನಂಜಲದಿನ್ನಿ ಹಳ್ಳದಲ್ಲಿ  ಅಕ್ರಮವಾಗಿ ಕಳ್ಳತನದಿಂದ ಉಸುಕು ತುಂಬುತಿರುವ ಬಗ್ಗೆ  ಬಾತ್ಮಿ ಬಂದ ಮೆರೆಗೆ ಪಂಚರೊಂದಿಗೆ ಮೋಟಾರ ಸೈಕಲಗಳ ಮೇಲೆ ಹೋಗಿ ನಂಜಲದಿನ್ನಿ ಹಳ್ಳದ ದಂಡೆಗೆ ಮರೆಯಾಗಿ ನಿಂತು ನೋಡಲಾಗಿ ಹಳ್ಳದಲ್ಲಿ ಟ್ರಾಕ್ಟರದಲ್ಲಿ ಉಸುಕು ತುಂಬುತ್ತಿದ್ದಾಗ ದಾಳಿ ಮಾಡಲಾಗಿ ಟ್ರಾಕ್ಟರ ಚಾಲಕನು ಓಡಿ ಹೋಗಿದ್ದು ಉಸುಕು ತುಂಬಿದ ಟ್ರಾಕ್ಟರ ನೋಡಲಾಗಿ ಮಹೆಂದ್ರಾ 575 ಟ್ರಾಕ್ಟರ್ - CHESSY NO MBNJAALABJZL00098 AND ENGINE NO-ZJL2MBA0716 ಅಂತಾ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲಾ.  ಟ್ರಾಕ್ಟರ್ ಚಾಲಕ ಮತ್ತು ಮಾಲಿಕನು ಉಸುಕನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-74/2018 ಕಲಂ-.42,44 KMMCR Rule 4(1) 4 (1A) MMRD ACT 379 IPC& 187,177 IMV ACT ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ:15.04.2018 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರು ತಮ್ಮ ಪ್ಲೈಯಿಂಗ್ ಸ್ಕ್ವಾಡ್ ದೊಂದಿಗೆ ಮೇಗಳಪೇಟೆಯಲ್ಲಿ ಚುನಾವಣೆ ಕರ್ತವ್ಯದಲ್ಲಿರುವಾಗ ಮಾಹಿತಿ ಬಂದಿದ್ದೇನೆಂದರೆಮ ಖೈರವಾಡಗಿ ಹತ್ತಿರ ಒಂದು ಟ್ರ್ಯಾಕ್ಟರಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದಾಗ ಪಂಚರು ಮತ್ತು ತಮ್ಮ ತಂಡದೊಂದಿಗೆ ಸರಕಾರಿ ಜೀಪ್ ನಂ. ಕೆಎ-36/ಜಿ-330 ನೇದ್ದರಲ್ಲಿ ಕರೆದುಕೊಂಡು ಹೊರಟು ಖೈರವಾಡಗಿ ಕಡೆ ಹೋದಾಗ ತಾಂಡಾದ ರಸ್ತೆಯ ಬ್ರಿಡ್ಜ ಹತ್ತಿರ ನಮ್ಮ ಮುಂದುಗಡೆ ಒಂದು ಟ್ರ್ಯಾಕ್ಟರಿಯು ಮರಳು ತುಂಬಿಕೊಂಡು ಹೊರಟಿದ್ದು, ಸದರಿ ಟ್ರ್ಯಾಕ್ಟರ ಚಾಲಕನಿಗೆ ಟ್ರ್ಯಾಕ್ಟರ ನಿಲ್ಲಿಸುವಂತೆ ತಿಳಿಸಿದ್ದು ಚಾಲಕನು ತನ್ನ ಟ್ರ್ಯಾಕ್ಟರಿಯನ್ನು ನಿಲ್ಲಿಸಿ ಓಡಿ ಹೋದನು. ಟ್ರ್ಯಾಕ್ಟರಿಯನ್ನು ಪರಿಶೀಲಿಸಲಾಗಿ ಅದರಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರಿಯಲ್ಲಿದ್ದ ಮರಳಿಗೆ ಸಂಬಂದಿಸದಂತೆ ಯಾವುದೆ ದಾಖಲಾತಿಗಳು ಇರದೆ ಇರುವುದರಿಂದ ಟ್ರ್ಯಾಕ್ಟರ ನೋಡಲಾಗಿ ಟ್ರ್ಯಾಕ್ಟರ ನಂ. ಕೆಎ-36/ಟಿ.ಸಿ-2489 ಮತ್ತು ಟ್ರಾಲಿ ನಂ. ಕೆಎ-36/ಟಿ.ಸಿ-5710 ಅಂತಾ ಇದ್ದು ಸದರಿ ಟ್ರ್ಯಾಕಟರಿಯ ಚಾಲಕನು ಟ್ರ್ಯಾಕ್ಟರ ಮಾಲಿಕರು ಹೇಳಿದಂತೆ ಮರಳನ್ನು ಸಾಗಾಟ ಮಾಡಿ ಸರಕಾರಕ್ಕೆ ಯಾವುದೆ ರಾಯಲ್ಟಿ ಕಟ್ಟದೆ ಮತ್ತು ನೈಸರ್ಗಿಕ ಸಂಪತ್ತಾದ ಮತ್ತು ಸರಕಾರಿ ಸ್ವತ್ತಾದ ಮರಳನ್ನು ಅಕ್ರಮವಾಗಿ ಮತ್ತು ಕಳ್ಳತನದಿಂದ ಸಾಗಾಟ ಮಾಡಿದ್ದರಿಂದ ಮರಳು ತುಂಬಿದ ಟ್ರ್ಯಾಕ್ಟರ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ 15-04-2018 ರಂದು ಸಂಜೆ 4-45 ಗಂಟೆಯಿಂದ 5-45 ಗಂಟೆಯವರೆಗೆ ಪೂರೈಸಿಕೊಂಡು ಮರಳು ತುಂಬಿದ ಟ್ರ್ಯಾಕ್ಟರಿಯನ್ನು ಮುಂದಿನ ಕ್ರಮ ಜರುಗಿಸುವ ಕುರಿತು ಇಂದು ದಿನಾಂಕ 15-04-2018 ರಂದು ಸಂಜೆ 6-30 ಗಂಟೆಗೆ ಠಾಣೆಗೆ ಬಂದು ಪಂಚನಾಮೆ ಮತ್ತು ವರದಿ ಮತ್ತು ಮರಳು ತುಂಬಿದ ಟ್ರ್ಯಾಕ್ಟರ ಕೊಟ್ಟು ಡಿ ಹೋದ ಟ್ರ್ಯಾಕ್ಟರ ಚಾಲಕ ಮತ್ತು ಟ್ರ್ಯಾಕ್ಟರ ಮಾಲಿಕನ ಮೇಲೆ ಕಾನೂನು ಕ್ರಮ ಜರುಗಿಸಲು ವರದಿ ನೀಡಿದ ಮೇರೆಗೆ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 152/2018 PÀ®A. 4(1), 4(1A), 21 MMDR ACT-1957 ªÀÄvÀÄÛ 379 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 15/04/18 ರಂದು ಬೆಳಿಗ್ಗೆ 09.15 ಗಂಟೆಗೆ ವೀರನಗೌಡ. .ಎಸ್. ರವರು  ದಾಳಿಯಿಂದ ವಾಪಾಸ್ ಠಾಣೆಗೆ ಬಂದು ತಮ್ಮ ಒಂದು  ವರದಿಯನ್ನು ತಯಾರಿಸಿ ಬೆಳಿಗ್ಗೆ 09.30 ಗಂಟೆಗೆ ಜಪ್ತು ಮಾಡಿಕೊಂಡು ಬಂದ ಮರಳು ತುಂಬಿದ  2 ಟ್ರಾಕ್ಟರ ಮತ್ತು ಟ್ರಾಲಿಗಳನ್ನು   ಹಾಗೂ ಜಪ್ತು ಪಂಚನಾಮೆ ಹಾಗೂ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು  ಸದರಿ ಪಂಚನಾಮೆಯ ಸಾರಾಂಶದಲ್ಲಿ‘’ ರಾಜಲಬಂಡ ಗ್ರಾಮದ ತುಂಗಾಭದ್ರಾ ನದಿಯಲ್ಲಿ ಟ್ರ್ಯಾಕ್ಟರ/ಟ್ರಾಲಿಗಳಲ್ಲಿ ಅಕ್ರಮವಾಗಿ, ಕಳ್ಳತನದಿಂದ ಮರಳನ್ನು ತುಂಬಿಕೊಂಡು ಮಾರಾಟ ಮಾಡುವ ಕುರಿತು ತೆಗೆದುಕೊಂಡು ಹೋಗುತ್ತಾರೆ ಅಂತಾ ಖಚಿತವಾದ ಮಾಹಿತಿ ಮೇರೆಗೆ ವೀರನಗೌಡ. .ಎಸ್. ರವರು ಪಂಚರು ಮತ್ತು ಸಿಬ್ಬಂದಿಯವರಿಗೆ ಕರೆದುಕೊಂಡು ಇಂದು ದಿನಾಂಕ 15/04/18 ರಂದು ಬೆಳಿಗ್ಗೆ 06.45 ಗಂಟೆ ಸುಮಾರಿಗೆ ರಾಜಲಬಂಡ  ಗ್ರಾಮದ ಬಸ್ ಸ್ಟಾಂಡ್ ಹತ್ತಿರ ಮರಳು  ವಾಹನಗಳು ಬರುವುದನ್ನು ಕಾಯುತ್ತಾ ನಿಂತಿರುವಾಗ ಬೆಳಿಗ್ಗೆ 7-00 ಗಂಟೆಗೆ ರಾಜಲಬಂಡ ಗ್ರಾಮದ ತುಂಗಭದ್ರಾ ನದಿಯಲ್ಲಿಂದ ಮೇಲ್ಕಂಡ ಆಪಾದಿತರು ಮೇಲ್ಕಂಢ 2 ಟ್ರ್ಯಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿರುವದನ್ನು ಕಂಡು ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ /ಟ್ರಾಲಿಗಳನ್ನು ನಿಲ್ಲಿಸಲು ಸೂಚಿಸಿದಾಗ ಪೊಲೀಸರನ್ನು ಕಂಡ ಮೇಲ್ಕಂಡ ಟ್ರ್ಯಾಕ್ಟರಗಳ ಚಾಲಕರುಗಳು ಓಡಿ ಹೋಗಿದ್ದು  ಸದರಿ ಟ್ರ್ಯಾಕ್ಟರ / ಟ್ರಾಲಿಯನ್ನು ಪರಿಶೀಲಿಸಿದಾಗ  ಎರಡು ಟ್ರ್ಯಾಕ್ಟರ /ಟ್ರಾಲಿಗಳಲ್ಲಿ ತಲಾ  ಅಂದಾಜು  2 ಘನ ಮೀಟರ್ ನಂತೆ ಒಟ್ಟು 4 ಘನ ಮೀಟರ ಮರಳು  ಅಂ.ಕಿ-2800/- ರೂ. ಬೆಲೆ ಬಾಳುವದು ಇದ್ದು ಕಾರಣ ವಾಹನಗಳನ್ನು ಮರಳು ಸಹಿತ ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ / ಟ್ರಾಲಿಗಳ ಚಾಲಕರು ಮತ್ತು ಮಾಲಿಕರುಗಳ ಮೇಲೆ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ  162/18 ಕಲಂ 3,42,43 ಕೆ.ಎಮ್.ಎಮ್.ಸಿ. ರೂಲ್ಸ, & 4,4(1ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು  ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 14.04.2018 ರಂದು ಸಂಜೆ 6.00 ಗಂಟೆಗೆ ಗುರಗುಂಟಾದ ಗೊಲ್ಲರದೊಡ್ಡಿಯಲ್ಲಿ ಫಿರ್ಯಾದಿಯ ಮತ್ತು ಗಾಯಾಳು ಗೋವಿಂದಪ್ಪ ಇವರು ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಎಲೆ ಸೂಳೇ ಮಕ್ಕಳೆ ನಮ್ಮ ಜಾಗದಲ್ಲಿ ಮನೆ ಕಟ್ಟಿಸಬೇಡ ಅಂತಾ ಹೇಳಿದರು ಕೇಳದೆ ಮತ್ತೆ ನೀವು ಮನೆ ಕಟ್ಟಿಸುತ್ತಿದ್ದೀರಿ ಅಂತಾ ಅವಾಚ್ಯವಾಗಿ ಬೈದಾಡಿ ಆರೋಪಿ ನಂ 2 ನೇದ್ದವನು ಗೋವಿಂದಪ್ಪನಿಗೆ ಅಲ್ಲಿಯೇ ಬಿದ್ದಿದ್ದ ಕಟ್ಟಗೆಯಿಂದ ಎಡಗೈ ಭುಜಕ್ಕೆ ಮತ್ತು ಅಂಗೈಗೆ ಹೊಡೆದು ಒಳಪೆಟ್ಟುಗೊಳಿಸಿದ್ದು, ಶಿವಪ್ಪನಿಗೆ ಲಚುಮಪ್ಪ ತಂದೆ ನರಸಪ್ಪ ಈತನು ಕಟ್ಟಿಗೆಯಿಂದ ತಲೆಗೆ ಮತ್ತು ಬಲಗೈಗೆ ಹೊಡೆದು ಒಳಪೆಟ್ಟುಗೊಳಿಸಿದನು. ಜಗಳವನ್ನು ನೋಡಿ ಬಿಡಿಸಲು ಬಂದ ಫಿರ್ಯಾದಿಗೆ ಆರೋಪಿ ನಂ 2 ನೇದ್ದವನು ಕಟ್ಟಿಗೆಯಿಂದ ಎಡಗೈ ಮುಂಗೈಗೆ ಹೊಡೆದು ರಕ್ತಗಾಯಪಡಿಸಿದ್ದು, ಫಿರ್ಯಾದಿಯ ತಾಯಿಗೆ ಆರೋಪಿ ನಂ 1 ನೇದ್ದವನು ಆಕೆಯ ಸೀರೆ ಹಿಡಿದು ಎಳೆದಾಡಿ ಮಾನಕ್ಕೆ ಧಕ್ಕೆಯನ್ನುಂಟು ಮಾಡಿ ತನ್ನ ಕೈಗಳಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ. ಉಳಿದ ಆರೋಪಿತರು ತಮ್ಮ ತಮ್ಮ ಕೈಗಳಿಂದ ನಮಗೆ ಹೊಡೆ ಬಡೆ ಮಾಡಿ ನೆಲಕ್ಕೆ ಹಾಕಿ ಕಾಲಿನಿಂದ ಒದ್ದು, ಸೂಳೆ ಮಕ್ಕಳೆ ನಮ್ಮ ಜಾಗದಲ್ಲಿ ಮನೆ ಕಟ್ಟಿಸಿದರೆ ನಿಮ್ಮನ್ನು ಮಣ್ಣಲ್ಲಿ ಹಾಕಿ ಮುಚ್ಚಿ ಸಾಯಿಸಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿ ಇದ್ದು ಇರುತ್ತದೆ ಅಂತಾ ಕಂಪ್ಯೂಟರ್ ಮಾಡಿಸಿದ ದೂರನ್ನು ಹಾಜರುಪಡಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 168/2018 PÀ®A: 143, 147, 323, 324, 354(J), 504, 506 ¸À»vÀ 149 L¦¹ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ 11-04-2018 ರಂದು ರಾತ್ರಿ 10:30 ಗಂಟೆಗೆ ಫಿರ್ಯಾದಿದಾರ ರಾಜೇಶ ನಾಯಕ್ ತಂದೆ ಆದೆಪ್ಪ ನಾಯಕ್ ವಯಾ-26 ವರ್ಷ ಜಾತಿನಾಯಕ್ ಸಾ:ಸಿರವಾರ ಈತನು ತನ್ನ ಸ್ನೇಹಿತ ಹನುಮೇಶನೊಂದಿಗೆ ಮಾನವಿ ಕ್ರಾಸಿನಿಂದ ಸಿರವಾರದ ಕಡೆಗೆ ಬರುತ್ತಿರುವಾಗ ಸಿರವಾರದ ನಂದಿನಿ ಬಾರಶಾಪ ಮುಂದೆ ಆರೋಪಿತರು ಫಿರ್ಯಾದಿದಾರನನ್ನು ಕಂಡು ಹೆದರಿಸುವ ಉದ್ದೇಶದಿಂದ ಸಮಾನ ಉದ್ದೇಶಿತರಾಗಿ ಅಕ್ರಮವಾಗಿ ಗುಂಪುಕಟ್ಟಿಕೊಂಡು ಫಿರ್ಯಾದಿದಾರನನ್ನು ತಡೆದು ನಿಲ್ಲಿಸಿ ನೀವು ಎಲ್ಲಿಗೆ ಹೋಗಿದ್ದೀರಲೇ ನಿಮ್ದು ಸಿರವಾರದಲ್ಲಿ ಬಹಳ ಆಗಿದೆ ಲಂಗಾಸೂಳೆ ಮಕ್ಕಳೆ ಎಂದು ಅವಾಚ್ಯಶಬ್ದಗಳಿಂದ ಬೈದಾಡಿ ಇವತ್ತು ನಿಮ್ಮನ್ನು ಕಲಾಸ್ ಮಾಡುತ್ತೇವೆಂದು  ಕೊಲೆ ಬೆದರಿಕೆ ಹಾಕಿ ಕಲ್ಲು ಮತ್ತು ಕಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿ ಫಿರ್ಯಾದಿಯ ಮೋಟಾರ್ ಸೈಕಲ್ ನ್ನು ಜಕಮ್ ಗೊಳಿಸಿ ಲುಕ್ಷಾನ್ ಮಾಡಿರುತ್ತಾರೆಂದು ಮುಂತಾಗಿ ನೀಡಿದ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಅಪರಾಧ ಸಂ.90/2018 ಕಲಂ: 143.147.148.341.323.324.504.506 ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಕೆ ಕೈಕೊಂಡಿದ್ದು ಇರುತ್ತದೆ.
ಪಿರ್ಯಾದಿದಾರ ಹೇಮಂತ ತಂದೆ ಗಂಗಪ್ಪ ವಯ-37ವರ್ಷ ಜಾತಿ-ಲಮಾಣಿ.-ಒಕ್ಕಲುತನ ಕೆಲಸ. ಸಾ:ವಡವಟ್ಟಿ ತಾಂಡಾ  ಮತ್ತು ಕ್ರಿಷ್ಟಪ್ಪ ತಂದೆ ದೇನಪ್ಪ ಹಾಗೂ ಇತರೆ 9 ಜನ ಆರೋಪಿತರ ಮನೆಗಳು ವಡವಟ್ಟಿ ತಾಂಡಾದಲ್ಲಿ ಅಕ್ಕ-ಪಕ್ಕದಲ್ಲಿದ್ದು ಮನೆಯ ಪಕ್ಕ ದಲ್ಲಿ  ಜಾಗವಿದ್ದು ತನ್ನ ಜಾಗವನ್ನು ಬಿಟ್ಟು 5 ಫೀಟ ಹೆಚ್ಚಿಗೆ ಬಂದು ಮನೆ ಕಟ್ಟಿಕೊಂಡಿದ್ದರಿಂದ ಜಾಗ ಬಿಡುವ ಸಂಬಂಧ ತಕರಾರು ಬೆಳೆಯುತ್ತ ಬಂದು ಒಬ್ಬರಿಗೊಬ್ಬರಿಗೆ ಸರಿ ಇರುವದಿಲ್ಲ ಅದೆ ವಿಷಯದಲ್ಲಿ ಆರೋಪಿತರು ಸಮಾನ ಉದ್ದೇಶಿತರಾಗಿ ಅಕ್ರಮಕೂಟ ರಚಿಸಿಕೊಂಡು ಪಿರ್ಯಾದಿದಾರನ ಮನೆ ಹತ್ತಿರಹೋಗಿ ಪಿರ್ಯಾದಿಯೊಂದಿಗೆ ಜಗಳ ತೆಗೆದು ಕಟ್ಟಿಗೆಯಿಂದ ಕೈಗಳಿಂದ ಹೊಡೆದು ಜಗಳ ಬಿಡಿಸಲು ಬಂದ ಪಿರ್ಯಾದಿದಾರನ ಹೆಂಡತಿಗೆ ಮೈಕೈ ಮುಟ್ಟಿ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಬಿಡಿಸಲು ಬಂದ ವರಿಗೆ ಸಹ ಹೊಡೆದು ಮಾಡುವುದಾಗಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತ ಫಿರ್ಯಾದಿದಾರರು ನೀಡಿದ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಅಪರಾಧ ಸಂ. 92/2018 ಕಲಂ: 143.147.148,323,324,354,504.506.R/W 149 IPC ಪ್ರಕಾರ ಪ್ರಕರಣ ದಾಖಲಿಸಿ ತನಿಕೆ ಕೈಕೊಂಡಿದ್ದು ಇರುತ್ತದೆ.


ಮಹಿಳೆಗೆ ಕಿರುಕುಳ ಪ್ರಕರಣದ ಮಾಹಿತಿ.
¢: 15-04-2018 gÀAzÀÄ gÁwæ 8-00 UÀAmÉUÉ ಫಿರ್ಯಾದಿದಾರಳಾದ zÉêÀªÀÄä UÀAqÀ gÁªÀÄ°AUÀAiÀÄå »gÉêÀÄoÀ ªÀAiÀiÁ: 20ªÀµÀð, eÁ: dAUÀªÀÄ G: ªÀÄ£É UÉ®¸À ¸Á: aPÀÄÌ¥ÉàÃj ಈಕೆಯು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದರ ಸಾರಾಂಸವೆನೆಂದರೆ ಆರೋಪಿ gÁªÀÄ°AUÀAiÀÄå vÀAzÉ §¸À°AUÀAiÀÄå »gÉêÀÄoÀ, ನೇದ್ದವನ ಜೊತೆ ಮದುವೆ ಆಗಿದ್ದು ಮದುವೆ ಆದ ನಂತರ ಫಿರ್ಯಾದಿದಾರಳ ಗಂಡ ಮತ್ತು ಆತನ ಮನೆಯವರು ಆರೋಪಿ 2 ರಿಂದ 5 ನೇದ್ದವರು ಫಿರ್ಯಾದಿದಾರಳ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಅನುಮಾನ ಪಡುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ದಿನಾಂಕ 12/04/2018 ರಂಧು ಬೆಳಿಗ್ಗೆ 11-00 ಗಂಟೆ ಸುಮಾರು ನಮೂದಿತ ಆರೋಪಿತರು ಒಂದು ಗೂಡಿ ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ, ಕೈಯಿಂದ ಹೊಡೆದು, ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯ ಸಾರಾಂಸದ ಮೇಲಿಂದ  ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂಬರ 220/2018 PÀ®A 143,147,498J,323,504,506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 15.04.2018 ರಂದು ರಾತ್ರಿ 07.30 ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ, ಆಸ್ಪತ್ರೆಗೆ ಭೇಟಿ ಗಾಯಾಳುಗಳನ್ನು ಪರಿಶೀಲಿಸಿ  ಅಲ್ಲಿಯೇ ಇದ್ದ ಫಿರ್ಯಾದಿದಾರರನ್ನು ವಿಚಾರಿಸಿ, ಹೇಳಿಕೆ ಫಿರ್ಯಾದಿಯನ್ನು ಪಡೆದುದಕೊಂಡು ವಾಪಸ್ ಠಾಣೆಗೆ ದಿನಾಂಕ: 15.04.2018 ರಂದು 2130 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೇನೆಂದರೆ, ದಿನಾಂಕ: 15.04.2018 ರಂದು ಸಂಜೆ 5.40 ಗಂಟೆಯ ಸುಮಾರಿಗೆ ಗಾಯಾಳು ಚಂದ್ರಶೇಖರ್ ಈತನು ತಮ್ಮ ಮನೆಗೆ ಹೋಗುವ ಕುರಿತು HERO HONDA SPLENDOR PLUS M/C No. KA36U4637 ನೇದ್ದನ್ನು ರಾಯಚೂರು-ಬಿಜನಗೇರಾ ರಸ್ತೆಯ ನವೋದಯ ಇಂಜಿನೀಯರಿಂಗ್ ಕಾಲೇಜ್ ಮುಂದಿನ ರಸ್ತೆಯಲ್ಲಿ ನಿಧಾನವಾಗಿ ಬಿಜನಗೇರಾ ಕಡೆಗೆ ಹೋಗುತ್ತಿದ್ದಾಗ, ಆರೋಪಿತನು HERO H.F. DELUX M/C No. KA36EK7504 ನೇದ್ದನ್ನು ಚಲಾಯಿಸಿಕೊಂಡು ಬಿಜನಗೇರಾ ಕಡೆಯಿಂದ ರಾಯಚೂರು ಕಡೆಗೆ ಹೋಗುವಾಗ ಮೋಟಾರ್ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಚಂದ್ರಶೇಖರ್ ರವರು ನಡೆಸುತ್ತಿದ್ದ ಮೋಟಾರ್ ಸೈಕಲ್  ಗೆ ಟಕ್ಕರ್ ಕೊಟ್ಟಿದ್ದರಿಂದ ಚಂದ್ರಶೇಜಖರ್ ಮತ್ತು ಆರೋಪಿತನು ಇಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗಡೆ ಬೀಳಲು ಚಂದ್ರಶೇಖರ್ ರವರಿಗೆ ಬಲಗಡೆ ಕಣ್ಣಿನ ಕೆಳಗಡೆ ಭಾರೀ ರಕ್ತಗಾಯ, ಬಲಹುಬ್ಬಿನ ಮೇಲೆ ರಕ್ತಗಾಯ, ಬಲಭುಜದ ಹತ್ತಿರ ಭಾರೀ ಒಳಪೆಟ್ಟಾಗಿದ್ದು, ಆರೋಪಿತನಿಗೆ ತಲೆಗೆ ಭಾರೀ ರಕ್ತಗಾಯವಾಗಿದ್ದು ಇರುತ್ತದೆ. ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ. 36/2018 ಕಲಂ: 279, 338, .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.04.2018 gÀAzÀÄ 112 ¥ÀææPÀgÀtUÀ¼À£ÀÄß ¥ÀvÉÛ ªÀiÁr 18,500/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.