ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟಕಾ ಜೂಜಾಟ ಪ್ರಕರಣದ
ಮಾಹಿತಿ.
ದಿನಾಂಕ: 18/06/2019 ರಂದು 20-30ಗಂಟೆಯಿಂದ 21-30 ಗಂಟೆಯ ಅವಧಿಯಲ್ಲಿ ಆರೋಪಿಯಾದ ಜಾಕೋಬನು ತಡಕಲ್ ಗ್ರಾಮದ ದುರಗಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್ಐ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1]ನಗದು ಹಣ 2700/-, 2] 01 ಮಟಕಾ ನಂಬರ್ ಬರೆದ ಪಟ್ಟಿ, 3]ಒಂದು ಬಾಲ್ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-19/06/2019 ರಂದು 11-00 ಗಂಟೆಗೆ ಪಡೆದುಕೊಂಡು 13-10 ಗಂಟೆಗೆ ಠಾಣೆಗೆ ಬಂದಿದ್ದರಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂ:62/2019, ಕಲಂ:78[3]ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಇಸ್ಪೇಟ್ ಜೂಜಾಟದಾಳಿ ಪ್ರಪರಣದ ಮಾಹಿತಿ.
ದಿನಾಂಕ.18-06-2019ರಂದು ಸಾಯಂಕಾಲ5-00ಗಂಟೆಗೆ ಆರೋಪಿತರು ನಾರಬಂಡಾ ಗ್ರಾಮದ ಊರ ಹೊರವಲಯದಲ್ಲಿ ರುವ ಹನುಮಂತನ ಬಾರಶಾಪ್
ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ಇಸ್ಪೇಟ್ ಎಲೆಗಳ
ಸಹಾಯ ದಿಂದ ಅಂದರ ಬಾಹರ್
ಎಂಬ ನಸೀಬಿನ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿ ಕೊಂಡ ಪಿ.ಎಸ್.ಐ. ಸಿರವಾರ & ಸಿಬ್ಬಂದಿ
ಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿದಾಳಿ ಮಾಡಿದಾಗ 6 ಜನರು ಓಡಿ ಹೋಗಿ 6 ಜನರು ಸಿಕ್ಕುಬಿದ್ದಿದ್ದು
ಸಿಕ್ಕುಬಿದ್ದ ಆರೋಪಿ ಹನುಮಂತ ರಡ್ಡಿ ತಂದೆ ಬಸನಗೌಡ ಜಾತಿ-ಲಿಂಗಾಯತ, ವಯ-28 ವರ್ಷ, ಉ-ಒಕ್ಕಲುತನ
ಸಾ:ಹುಣಚೇಡ ಹಾಗೂ ಇತರೆ 11 ಜನ ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.11,000/- ಮತ್ತು 52 ಇಸ್ಪೇಟ್
ಎಲೆಗಳು ದೊರೆತಿದ್ದು ಅವುಗಳನ್ನು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಕೊಟ್ಟ ವರದಿ
ಆಧಾರದ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ
ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ
83/2019
ಕಲಂ: 87 ಕ.ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿರುತ್ತಾರೆ