Thought for the day

One of the toughest things in life is to make things simple:

2 Dec 2017

Reported Crimes


                                                     


                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ 01/12/17 ರಂದು ಮದ್ಯಾಹ್ನ 12.30  ಗಂಟೆಗೆ  ಪಿ.ಎಸ್. ಮಾನವಿ ರವರು ತಾವು ಜಪ್ತು ಮಾಡಿಕೊಂಡು ಬಂದ  ಅಕ್ರಮ ಮರಳು ತುಂಬಿದ  ಒಂದು  ಟ್ರ್ಯಾಕ್ಟರ್ /ಟ್ರಾಲಿ ಯೊಂದಿಗೆ ಠಾಣೆಗೆ ಬಂದು ಅದರೊಂದಿಗೆ ಮೂಲ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ '' ದಿನಾಂಕ 1/12/17 ರಂದು ಬೆಳಿಗ್ಗೆ 10.45 ಗಂಟೆಯ ಸುಮಾರಿಗೆ ಚಿಮಲಾಪೂರ ಗ್ರಾಮದ ಹಳ್ಳದಿಂದ ಮಹಿಂದ್ರಾ ಕಂಪನಿಯ ನಂಬರಿಲ್ಲದ ಟ್ರಾಕ್ಟರ ಚೆಸ್ಸಿ /ಇಂಜಿನ್ ನಂ NJDB00672 ಮತ್ತು  ನಂಬರ ಇಲ್ಲದ ಟ್ರಾಲಿಯಲ್ಲಿ  ತಮ್ಮ ಮಾಲಿಕರು ಹೇಳಿದ ಪ್ರಕಾರ ಸ್ವಂತ ಲಾಭಕ್ಕಾಗಿ ಸರಕಾರಕ್ಕೆ ರಾಜಧನ ತುಂಬದೇ ಅಕ್ರಮವಾಗಿ 2 ಘನ ಮೀಟರ ಮರಳು ಅಂ.ಕಿ 1400/- ರೂ ಬೆಲೆ ಬಾಳುವದನ್ನು  ತುಂಬಿಕೊಂಡು ಸಾಗಾಣಿಕೆ ಮಾಡುವ ಕುರಿತು ಟ್ರ್ಯಾಕ್ಟರ ಚಾಲು ಮಾಡಿದಾಗ  ಪಿ.ಎಸ್. ಮಾನವಿಯವರು ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ / ಟ್ರಾಲಿಯ ಮೇಲೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಟ್ರ್ಯಾಕ್ಟರ ಚಾಲಕನು ಓಡಿಹೊಗಿದ್ದು ಇರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ / ಟ್ರಾಲಿಯನ್ನು ಮರಳು ಸಹಿತ ಜಪ್ತು ಮಾಡಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 403/17 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-) ಎಮ್.ಎಮ್.ಡಿ.ಆರ್ 1957  & 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ವರದಕ್ಷಣೆ ಕಾಯ್ದೆ ಪ್ರಕರಣದ ಮಾಹಿತಿ:-
ದಿನಾಂಕ 30/11/17 ರಂದು 17-00 ಗಂಟೆಗೆ ಠಾಣೆಗೆ ಹಾಜರಾಗಿ ಗಣಕಿಕೃತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿ ಶಶಿಕಲಾ @ ರೇಣುಕಮ್ಮ ಗಂಡ ಆಂಜನೇಯ್ಯ 23 ವರ್ಷ ಜಾ:ಕಬ್ಬೇರ್ ಹೊಲಮನೆ ಕೆಲಸ ಸಾ:ಜವಳಗೇರಾ ಹಾ.. ಹೆಡಗಿನಾಳ ಈಕೆಯ  ತವರು ಮನೆ ಹೆಡಗೀನಾಳ ಗ್ರಾಮವಿದ್ದು ಕಳೆದ 2 ವರ್ಷದ ಹಿಂದೆ ಜವಳಗೇರಾ ಗ್ರಾಮದ ಆಂಜನೇಯ್ಯ ಈತನೊಂದಿಗೆ ಮದುವೆಮಾಡಿಕೊಟ್ಟಿದ್ದು ಮದುವೆಕಾಲಕ್ಕೆ ವರದಕ್ಷಿಣೆಯಾಗಿ 50 ಸಾವಿರ ರೂಪಾಯಿ 2 ತೋಲೆ ಬಂಗಾರ ಮತ್ತು 50 ಸಾವಿರ ರೂಪಾಯಿ ಬೆಲೆಬಾಳುವ ಮನೆ ಸಾಮಾನು ಕೊಟ್ಟಿದ್ದು ಇರುತ್ತದೆ. ಮದುವೆಯಾದ ಒಂದು ವರ್ಷದ ವರೆಗೆ ಪಿರ್ಯಾದಿದಾರಳ ಗಂಡ ಮತ್ತು ಮನೆಯವರು ಚನ್ನಾಗಿ ನೋಡಿಕೊಂಡಿದ್ದು ನಂತರ ದಿನಗಳಲ್ಲಿ ಪಿರ್ಯಾದಿ ಗಂಡನು ಹಲವಾರು ಚಟಗಳಿಗೆ ಬಲಿಯಾಗಿ ದಿನಾಲು ರಾತ್ರಿ ಕಡಿದು ಬಂದು ತವರು ಮನೆಯಿಂದ ಒಂದು ಲಕ್ಷ ರೂಪಾಯಿ ವರದಕ್ಷಿಣೆ ಹಣ ತರುವಂತೆ ಒತ್ತಾಯ ಮಾಡುತಿದ್ದು ಇದಕ್ಕೆ ಉಳಿದವರೆಲ್ಲರೂ ಪ್ರಚೋದನೆ ಕೊಡುತ್ತಾ ಬಂದಿರುತ್ತಾರೆ. ಪಿರ್ಯಾದಿ ಗಂಡನು ಪಿರ್ಯಾದಿದಾರಳಿಗೆ ವರದಕ್ಷೀಣೆ ಹಣ ತೆಗೆದುಕೊಂಡು ಬರುವಂತೆ ಕಿರುಕುಳ ನೀಡಿ ಹೊಡೆ ಬಡೆ ಮಾಡಿ ಉಟ ಕೊಡದೆ ಹಿಂಸೆ ಕೊಡುತ್ತಾ ಬಂದಿದ್ದರು ಸಹ ಸಹಿಸಿಕೊಂಡು ಸುಮ್ಮನೆ ಇದ್ದಳು ಕಳೆದ ಮೇ ತಿಂಗಳಿನಲ್ಲಿ ಆರೋಪಿತರೆಲ್ಲರೂ ಒಂದು ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬರುವಂತೆ ಹೊಡೆ ಬಡೆ ಮಾಡಿ ಕಿರುಕುಳ ನೀಡಿದ್ದರಿಂದ ಪಿರ್ಯಾದಿದಾರಳು ಬೇರೆ ದಾರಿ ಕಾಣದೆ ತನ್ನ ತವರು ಮನೆಯಲ್ಲಿ ವಾಸವಾಗಿದ್ದು ಇರುತ್ತದೆ. ದಿನಾಂಕ-30/11/2017 ರಂದು ಬೆಳೆಗ್ಗೆ 11-00 ಗಂಟೆಗೆ ಪಿರ್ಯಾದಿದಾರಳು ತನ್ನ ತವರು ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿ ತವರು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರಳೊಂದಿಗೆ ಜಗಳ ತೆಗೆದು ಲೇ ಸೂಳೆ ನೀನಗೆ ವರದಕ್ಷೀಣೆ ಹಣ ತೆಗೆದುಕೊಂಡು ಬರುವಂತೆ ಕಳುಹಿಸಿದರೆ ನೀನು ಹಣವನ್ನು ತೆಗೆದುಕೊಂಡು ಬಾರದೆ ಇಲ್ಲಿಯೇ ಇದ್ದಿ ಎನಲೇ ಸೂಳೆ ಅನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈದು ಕುದಲು ಹಿಡಿದು ಎಳೆದಾಡಿ ಹೊಡೆ ಬಡೆ ಮಾಡಿದ್ದು ನಂತರ ಉಳಿದವರು ಸೂಳೆದು ಬಹಾಳ ಆಗಿದೆ ಅವಳನ್ನು ಎನು ಕೇಳುತ್ತಿರಿ ಒದ್ದು ಮಾನ ಮರ್ಯಾದೆ ತೆಗೆಯಬೇಕೆಂದು ಎಲ್ಲರು ಪಿರ್ಯಾದಿದಾರಳ ಮೈಮೇಲಿನ ಬಟ್ಟೆ ಹಿಡಿದು ಎಳೆದಾಡಿ ಅವಮಾನಗೋಳಿಸಿದ್ದು ನಂತರ ಆರೋಪಿತರೆಲ್ಲರೂ ಇವತ್ತು ಉಳಿದಿದ್ದಿಯಾ ವರದಕ್ಷೀಣೆ ತೆಗೆದುಕೊಂಡು ಬಾರದೆ ಇದ್ದರೆ ಇನ್ನೊಂದು ಸಲ ಬಂದು ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ  ಅಂತಾ ಕೊಟ್ಟ ದೂರಿನ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ 222/2017. ಕಲಂ, 143,147,498(A) 448,504,323,354,109,506 ಸಹಿತ 149 .ಪಿ.ಸಿ & 3,4 ಡಿ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಕಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
ದಿನಾಂಕ ;30-11-2017 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ಸಿಂಧನೂರ ರಾಯಚೂರ ರಸ್ತೆಯ ಸಂಗಮ ಪ್ಯಾಲೇಶ ಹತ್ತಿರದ ರಸ್ತೆಯಲ್ಲಿ  ಫಿರ್ಯಾದಿ ಖಾದರ ಬಾಷ ತಂದೆ ಹುಸೇನನಾಯ್ಕ ವಯ 35 ಜಾ: ಮುಸ್ಲಿಂ ಉ: ಎತ್ತಿನ ಬಂಡಿ ಹೊಡೆಯುವದು  ಸಾ: ಮುಚ್ಚಳ ಕ್ಯಾಂಪ ಸಿಂಧನೂರು ಈತನು ತನ್ನ ಎರಡೆತ್ತಿನ  ಬಂಡಿಯನ್ನು ಸಿಂಧನೂರಿಗೆ ಗೊಬ್ಬರ ತರಲು ಬರುತಿದ್ದಾಗ  ಹಿಂದಿನಿಂದ ರಾಯಚೂರ ರಸ್ತೆ ಕಡೆಯಿಂದ  ಟವೇರ ಕಾರ ನಂ ಟಿಎಸ್-08-ಯುಎ-1376 ನೆದ್ದರ ಚಾಲಕನಾದ ನರಸಯ್ಯ ಜೆ  ಇತನು ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೋಂಡು ಬಂದು ಮುಂದೆ ಹೊರಟ ಫಿರ್ಯಾದಿಯ ಎತ್ತಿನ ಬಂಡಿಗೆ ಟಕ್ಕರ ಕೊಟ್ಟ ಪರಿಣಾಮ ಬಂಡಿಯ ಹಲಿಗೆಯು ಕಿತ್ತಿಬಂದಿದ್ದು   ಮತ್ತು ಫಿರ್ಯಾದಿಯು ಕೆಳಗೆ ಬಿಳಲು ತೆಲೆಗೆ  ಮತ್ತು ಬಲಗಾಲ ಮೋಣಕಾಲ ಕೆಳಗೆ ಒಳಪೆಟ್ಟಾಗಿದ್ದು  ಮತ್ತು ಎತ್ತಿಗೆ ಬಲಗಡೆಯ ಚೆಪ್ಪಿನ ಮೇಲೆ,ಬಲಗಾಲ ಮೋಣಕಾಲಿನ ಕೆಳಗಡೆ ಪೆಟ್ಟಾಗಿದ್ದು ಇದೆ ಅಂತ ಗಣಕೀಕೃತ ದೂರು ನಿಡಿದ್ದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ  ¸ÀAZÁj ¥Éưøï oÁuÉ ¹AzsÀ£ÀÆgÀ ರವರ ಗುನ್ನೆ ನಂ 95/2017 ಕಲಂ 279,337 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನೀಖೆ ಕೈಕೊಂಡಿರುತ್ತಾರೆ.
J¸ï.¹/ J¸ï.n ¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀಮತಿ ಕರಿಯಮ್ಮ ಗಂಡ ಲಕ್ಷ್ಮಣ, ವಯ: 38 ವರ್ಷ, ಜಾ: ವಡ್ಡರ, : ಮನೆಕೆಲಸ, ಸಾ: ಮಹೆಬೂಬ್ ಕಾಲೋನಿ ಸಿಂಧನೂರು ಇವರ ತಂಗಿ ಹುಲಿಗೆಮ್ಮಳಿಗೆ ಕೆಲವು ವರ್ಷಗಳ ಹಿಂದೆ ಶೇಖರಪ್ಪ, ಜಾ: ಕಂಬಾರ, ಸಾ: ಸುಕಾಲ್ ಪೇಟೆ ಸಿಂಧನೂರು ತನು ಪರಿಚಯವಾಗಿ ಆಕೆಗೆ ಆಗಾಗ ಕಿರಿಕಿರಿ ಮಾಡುತ್ತಿದ್ದು, ಹುಲಿಗೆಮ್ಮ ಈಕೆಯು ದಿನಾಂಕ 30-11-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ತನ್ನ ಎಳೆನೀರು ಅಂಗಡಿಯನ್ನು ಬಂದ ಮಾಡಿಕೊಂಡು ಹೋಗುತ್ತಿದ್ದಾಗ ಆರೋಪಿತನು ಸಿಂಧನೂರು ನಗರದ ತಹಶೀಲ್ ಆಫಿಸ್ ಹತ್ತಿರ ತಡೆದು ನಿಲ್ಲಿಸಿ ನೀನು ನನ್ನ ಜೊತೆಗೆ ಮಾತನಾಡಬೇಕು, ಏಕೆ ಮಾತನಾಡುವದಿಲ್ಲ ಚಿನಾಲಿ ವಡ್ಡರ ಸೂಳೇ ಅಂತಾ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿ, ಸೀರೆಯನ್ನು ಹಿಡಿದು ಎಳೆದಾಡಿ ಕೈಯಿಂದ ಹೊಡೆಯುತ್ತಿದ್ದಾಗ, ವಿರೇಶ ಕೊರವರ ಈತನು ಬಿಡಿಸಲು ಹೋದಾಗ ಆರೋಪಿತನು ಆತನಿಗೂ ಸಹಾ ಕೈಯಿಂದ ಹೊಡೆದಿದ್ದು, ನಂತರ ಆರೋಪಿತನು ಹುಲಿಗೆಮ್ಮಳ ಚೀಲದಲ್ಲಿದ್ದ ಕುಡಗೋಲನ್ನು ತೆಗೆದುಕೊಂಡು ತನ್ನ ಕೈಗೆ ಹೊಡೆದುಕೊಂಡು ನಿಮ್ಮ ಮೇಲೆ ಕೇಸು ಮಾಡುತ್ತೇನೆ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ಅಂತಾ ಹುಲಿಗೆಮ್ಮಳು ಫಿರ್ಯಾದಿದಾರಳಿಗೆ ತಿಳಿಸಿದ್ದು, ನಂತರ ಈ ಬಗ್ಗೆ ಫಿರ್ಯಾದಿದಾರರು ತಮ್ಮ ಮನೆಯಲ್ಲಿ ಹಿರಿಯರಿಗೆ ತಿಳಿಸಿ ವಿಚಾರ ಮಾಡಿಕೊಂಡು ಠಾಣೆಗೆ ಬಂದಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ 265/2017, ಕಲಂ:341, 504, 354, 323, 506 ಐಪಿಸಿ ಮತ್ತು  ಕಲಂ: 3(1) (11) ಎಸ್.ಸಿ/ಎಸ್.ಟಿ (ಪಿ.ಎ) ಕಾಯ್ದೆ-1989 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
ಗಾಯದ ಪ್ರಕರಣದ ಮಾಹಿತಿ:-
ಫಿರ್ಯಾದಿ ಶೇಖರಪ್ಪ ತಂದೆ ಮುದುಕಪ್ಪ, ವಯ: 38 ವರ್ಷ, ಜಾ: ಕಂಬಾರ, : ಪೆಂಟಿಂಗ್ ಕೆಲಸ ಸಾ: ಸುಕಾಲ್ ಪೇಟೆ ಸಿಂಧನೂರು. ಈತನು ಕಳೆದ 08 ವರ್ಷಗಳಿಂದ ಆರೋಪಿ 01 ಹುಲಿಗೆಮ್ಮ ನೇದ್ದವಳ ಜೊತೆಗೆ ಕೂಡಿಕೊಂಡಿದ್ದು, ಈಗ್ಗೆ 01 ವರ್ಷದಿಂದ ಇಬ್ಬರ ನಡುವೆ ವೈಮನಸ್ಸು ಬಂದ್ದರಿಂದ ಬೇರೆ ಬೇರೆಯಾಗಿರುತ್ತಾರೆ. ಫಿರ್ಯಾದಿದಾರರು ದಿನಾಂಕ 30-11-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ತಹಶೀಲ್ ಆಫಿಸಿನ ಕಂಪೌಂಡ ಒಳಗಡೆಯಿಂದ ನಡೆದುಕೊಂಡು ಹೋಗುತ್ತಿರುವಾಗ 1) ಹುಲಿಗೆಮ್ಮ , 2) ವೀರೇಶ, ಇಬ್ಬರೂ ಸಾ: ಸಿಂಧನೂರು ಮಾತನಾಡುತ್ತಾ ನಿಂತುಕೊಂಡಿದ್ದು, ಆಗ ಫಿರ್ಯಾದಿದಾರನು ಆರೋಪಿ 01 ನೇದ್ದವರಿಗೆ ನೀನು ನನ್ನನ್ನು ಹಾಳು ಮಾಡಿದ್ದಿ, ಇನ್ನೆಷ್ಟು ಜನರನ್ನು ಹಾಳು ಮಾಡುತ್ತಿಯಾ ಅಂತಾ ಹೇಳಿದ್ದಕ್ಕೆ, ಲೇ ಸೂಳೇ ಮಗನೇ ನಾನು ಯಾರ ಜೊತೆಯಾದರೂ ಮಾತನಾಡುತ್ತೇನೆ ನೀನು ಯಾರು ಕೇಳಲು ಅಂತಾ ಹೇಳಿದ್ದು, ಆರೋಪಿ 02 ನೇದ್ದವನು ಎನಲೇ ಮಗನೇ ನೀನ್ಯಾರಲೆ ನಮ್ಮ ವಿಷಯದಲ್ಲಿ ಅಡ್ಡಬರುತ್ತಿಯಾ ಅಂತಾ ಹೇಳಿ ಕೈಯಿಂದ ಕಪಾಳಕ್ಕೆ ಹೊಡೆದು, ಮುಂದಕ್ಕೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆರೋಪಿ 01 ನೇದ್ದವಳು ಸೂಳೇ ಮಗನದು ಬಹಳ ಆಗಿದೆ ಅಂತಾ ತನ್ನ ಕೈ ಚೀಲದಲ್ಲಿದ್ದ ಎಳೆನೀರು ಕಡಿಯುವ ಕತ್ತಿಯಿಂದ ಫಿರ್ಯಾದಿಯ ಎಡಗೈ ಮೊಣಕೈ ಕೆಳಗೆ ಮತ್ತು ಎಡಗೈ ಬೆರಳುಗಳಿಗೆ ಹೊಡೆದಿದ್ದರಿಂದ ಎಡಗೈ ಮೊಣಕೈ ಕೆಳಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ: 264/2017, ಕಲಂ: 504, 323, 341, 326, 506 ಸಹಿತ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
            ಅಂಬಾಸ ತಂದೆ ರಂಗೂಸ್ ರಂಗ್ರೇಜಿ, 63 ವರ್ಷ, ಸಾವಜಿ, ಸಾ: ಸರಕಾರಿ ಆಸ್ಪತ್ರೆ ಎದರು ಮಸ್ಕಿ.ತನು ದಿನಾಂಕ 30-11-2017 ರಂದು 18.40 ಗಂಟೆ ಸುಮಾರು ಮಸ್ಕಿ ಪಟ್ಟಣದ  ಸಪ್ತಿಗಿರಿ ಬಾರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಾ ಚೀಟಿ ಬರೆದುಕೊಡುತ್ತಿರುವದಾಗಿ ಬಾತ್ಮಿ ಬಂದ ಮೇರಗೆ ಶ್ರೀ ಅಮರೇಶ ಹುಬ್ಬಳ್ಳಿ ಪಿ,ಎಸ್,ಐ ಮಸ್ಕಿ ಪೊಲೀಸ್ ಠಾಣೆ. ರವರು  ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗಿ ಮರೆಯಲ್ಲಿ ನಿಂತು ಗಮನಿಸಿ ಆರೋಫಿತನು ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ ಸಾರ್ವಜನಕರಿಂದ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳಿ ಜನರಿಂದ ಒಬ್ಬ ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಆತನಿಂದ ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 3250/- ರೂ ದೊರೆತಿದ್ದು, ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿತ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಮಸ್ಕಿ ಪೊಲೀಸ್ ಠಾಣೆ   ಗುನ್ನೆ ನಂ: 244/2017 ಕಲಂ 78 (111)  ಕೆ,ಪಿ ಕಾಯ್ದೆ  ಅಡಿಯಲ್ಲಿ  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 01.12.2017 gÀAzÀÄ 95 ¥ÀææPÀgÀtUÀ¼À£ÀÄß ¥ÀvÉÛ 14,900/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.