ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಇಸ್ಪೇಟ್ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ:
16-02-2020 ರಂದು 1730 ಗಂಟೆಯ ಸಮಯಕ್ಕೆ ಆರೋಪಿತರು ಸಗಮಕುಂಟಾ ಗ್ರಾಮದ ಪರ್ತೊಳಿ ತಿಮ್ಮಾರೆಡ್ಡಿ ಇವರ ಮೊಸಂಬಿ
ತೊಟದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ
ಅಂದರ್ ಬಾಹರ್’ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ
ಹೋಗಿ ದಾಳಿ ಮಾಡಿ ಆರೋಪಿ ²ªÀgÁd vÀAzÉ ®QëöägÉrØ, ªÀAiÀiÁ: 25ªÀµÀð,
eÁw: G¥ÁàgÀ, G: CªÀiÁ°PÉ®¸À, ¸Á: ¸ÀUÀªÀÄPÀÄAmÁ ಹಾಗೂ ಇತರೆ 4 ಜನರನ್ನು ವಶಕ್ಕೆ
ಪಡೆದು, ಆರೋಪಿತರಿಂದ 3100/-, ನಗದು ಹಣ ,ಮತ್ತು 52 ಇಸ್ಪೇಟ್ ಎಲೆಗಳು ಹಾಗೂ ಒಂದು ಬರಕಾವನ್ನು ಜಪ್ತಿ
ಪಡಿಸಿಕೊಂಡು ಪಂಚನಾಮೆಯನ್ನು ಹಾಜರು ಪಡಿಸಿದ್ದರಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ
10.2020 ಕಲಂ 87 ಕೆ.ಪಿ.
CåPÀÖ ಅಡಿಯಲ್ಲಿ ಪ್ರಕರಣದ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ
ಪ್ರಕರಣದ ಮಾಹಿತಿ
ದಿನಾಂಕ:
17.02.2020 ರಂದು ಬೆಳಿಗ್ಗೆ 4.30 ರಿಂದ 5.20 ಗಂಟೆಯ ಮಧ್ಯ ಅವದಿಯಲ್ಲಿ ಫಿರ್ಯಾದಿದಾರಳ ಮಗ
ದೇವೆಂದ್ರ ತಂದೆ ಭೀಮಯ್ಯ ಈತನು ಚಲಾಯಿಸುತ್ತಿದ್ದ ಟ್ರ್ಯಾಕ್ಟರ ನಂ KA36TB6016 ಮತ್ತು ಟ್ರಾಲಿ
ನಂ KA36TB8090 ನೇದ್ದರಲ್ಲಿ ಕಡಲೆ ಹೊಟ್ಟು
ತುಂಬಿಕೊಂಡು ಕಪ್ಗಲ್ ನಿಂದ ಶಕ್ತಿನಗರ ಕಡೆಗೆ ಹೋಗುತ್ತಿರುವಾಗ ರಾಯಚೂರು ಬೈಪಾಸ ರಸ್ತೆಯಲ್ಲಿ ಡಾ|| ಡಾ:ರಾಮಕೃಷ್ಣ ರವರ
ತೋಟದ ಹೊಲದ ಹತ್ತಿರ ಅತೀವೇಗ ಮತ್ತು
ಅಲಕ್ಷ್ಯತನ ದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಬಾಂಡ್ಗಲಿಗೆ ಡಿಕ್ಕಿ ಹೊಡೆದು
ಪಲ್ಟಿಯಾಗಿದರಿಂದ ಟ್ರ್ಯಾಕ್ಟರ ಚಾಲಕನಿಗೆ ಭಾರಿ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು
ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದು ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ £ÀA: 33/2020 PÀ®A. 279, 304(ಎ)
IPC ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಫೀರ್ಯಾದಿಯ ತಂದೆಯಾದ ರಾಮರಡ್ಡಿ ತಂದೆ ತಿಮ್ಮಯ್ಯ,50 ವರ್ಷ, ಜಾ:ನಾಯಕ, ಉ:ಒಕ್ಕಲುತನ
ಹಾಗೂ ಮೊಟಾರ್ ಸೈಕಲ ನಂ KA-36 EF-4241 ನೇದ್ದರ ಸವಾರ ಸಾ:ಅರೋಲಿ ತಾ: ಮಾನ್ವಿ ಜಿ:ರಾಯಚೂರು ಆರೋಪಿ ಈತನು ತನ್ನ ಮೊಟಾರ್ ಸೈಕಲ ನಂ
KA-36 EF-4241 ನೇದ್ದನ್ನು ತೆಗೆದುಕೊಂಡು ದಿನಾಂಕ
17/02/2020 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ
ಅರೋಲಿ ಕಡೆಯಿಂದ ರಾಯಚೂರ ಕಡೆಗೆ ಮಟಮಾರಿ ರಾಯಚೂರು ರಸ್ತೆಯಲ್ಲಿ ನಾಗಲಾಪೂರ ಸೀಮಾದಲ್ಲಿ ತನ್ನ ಮೊಟಾರ್ ಸೈಕನ್ನು ಆರೋಪಿತನು ಜೋರಾಗಿ ನಿರ್ಲಕ್ಷತನದಿಂದ
ನಡಸಿ ಆಯಾ ತಪ್ಪಿ ಸ್ಕಿಡ್ಡಾಗಿ ಕೇಳಗೆ ಬಿದ್ದು, ತಲೆಗೆ ,ಕುತ್ತಿಗೆಯ ಹತ್ತಿರ ಎಡಮೊಣಕಾಲು ಮುಖಕ್ಕೆ
ರಕ್ತಗಾಯವಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೆಲಿಂದ
ಠಾಣಾ ಗುನ್ನೆ ನಂ 17/2020 ಕಲಂ 279.338 ಐ.ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಕೆ
ಕೈಗೊಂಡೆನು. ನಂತರ
ದಿನಾಂಕ 17/02/2020 ರಂದು ಗಾಯಗೊಂಡ ಆರೋಪಿತನನ್ನು ಹೆಚ್ಚಿನ ಉಪಚಾರ ಕುರಿತು ಬಳ್ಲಾರಿ ವಿಮ್ಸ್
ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಪಡೆಯುತ್ತ ರಾತ್ರಿ 8-55 ಗಂಟೆಗೆ ಆಸ್ಪತ್ರೆಯಲ್ಲಿ
ಚೆತರಿಸಿಕೊಳ್ಳದೆ ಮೃತಪಟ್ಟಿರುವದಾಗಿ ಬಳ್ಲಾರಿ ವಿಮ್ಸ್ ಆಸ್ಪತ್ರೆಯಿಂದ ದಿನಾಂಕ 18/02/2020 ರಂದು ಬೆಳಿಗ್ಗೆ 6-15 ಗಂಟೆಗೆ
ಎಂ.ಎಲ್.ಸಿ ನಂ 42071 ವಶುಲಾಗಿದ್ದರಿಂದ ಕಲಂ 304(ಎ) ಐಪಿ.ಸಿಯನ್ನು ಅಳವಡಿಸಿಕೊಳ್ಳಲು ಮಾನ್ಯ
ನ್ಯಾಯಲಯಕ್ಕೆ ಯಾದಿ ನಿವೇದಿಸಿಕೊಂಡಿದ್ದು ಇರುತ್ತದೆ.
ದಿನಾಂಕ 17/02/2020 ರಂದು ಸಾಯಂಕಾಲ 7.15
ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮಾಡಿ 11 ಜನರು ರಸ್ತೆ ಅಪಘಾತದಲ್ಲಿ ಗಾಯಗೊಂಡು
ಚಿಕಿತ್ಸೆಕುರಿತು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದು ಕೂಡಲೇ ನಾನು ಆಸ್ಪತ್ರೆಗೆ ಭೇಟಿ ನೀಡಿ
ಗಾಯಾಳುಗಳನ್ನು ನೋಡಿ ಅವರಲ್ಲಿ ಚಂದ್ರಮ್ಮ ಗಂಡ ಈರಣ್ಣ ಸಿಳ್ಳಿಕ್ಯಾತರ್ ಈಕೆಯನ್ನು ವಿಚಾರಿಸಿ
ಹೇಳಿಕೆಯನ್ನು ಮಾಡಿಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ದಿನಾಂಕ 18/02/2020 ರಂದು ಕುರ್ಡಿಯಲ್ಲಿ
ದ್ಯಾವಮ್ಮ ದೇವತೆ ಜಾತ್ರೆ ಇದ್ದು ಕಾರಣ ದೇವರು ಮಾಡುವ ಸಲುವಾಗಿ ಮಾನವಿಯಲ್ಲಿ
ಕಿರಾಣಿ ಸಾಮಾನುಗಳನ್ನು ಮತ್ತು ಬಟ್ಟೆ ಬರೆ ಹಾಗೂ ಇತರೆ ಸಾಮಾನುಗಳನ್ನು ಖರೀದಿ ಮಾಡಿಕೊಂಡು
ಹೋಗುವ ಕುರಿತು ಕುರ್ಡಿಯಿಂದ ಟಾಟಾ ಏಸ್ ನಂ ಕೆ.ಎ.36/ಎ-1406 ರಲ್ಲಿ ಮೇಲ್ಕಂಡ
ಫಿರ್ಯಾದಿ ಮತ್ತು ಎಲ್ಲಾ ಗಾಯಾಳುಗಳು ಸೇರಿ ಮಾನವಿಗೆ ಬಂದು ಮಾನವಿಯಲ್ಲಿ ಸಾಮಾನುಗಳನ್ನು ಖರೀದಿ
ಮಾಡಿಕೊಂಡು ಸಾಯಂಕಾಲ ಅದೇ ಟಾಟಾ ಏಸ್ ವಾಹನದಲ್ಲಿ ವಾಪಾಸ ಮಾನವಿಯಿಂದ ಕುರ್ಡಿ ಗ್ರಾಮಕ್ಕೆ
ಹೋಗುವಾಗ ಟಾಟಾ ಏಸ್ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ
ನೆಡೆಯಿಸಿಕೊಂನಡು ಹೋಗಿ ಸಾಯಂಕಾಲ 6.00 ಗಂಟೆಯ ಸುಮಾರಿಗೆ ಮಾನವಿ- ರಾಯಚೂರ ರಸ್ತೆಯಲ್ಲಿ , ಮಾನವಿಯ
ESSAR ಪೆಟ್ರೋಲ್ ಬಂಕ್ ದಾಟಿ ಇರುವ ಎಮ್.ಜೆ. ಜ್ಯೂಸ್ ಸೆಂಟರ್ ಹತ್ತಿರ ನಿಯಂತ್ರಣ
ಮಾಡಲಾಗದೇ ಪಲ್ಟಿ ಮಾಡಿದ್ದರಿಂದ ಅದರಲ್ಲಿ ಕುಳಿತಿದ್ದವರೆಲ್ಲಾ ಕೆಳಗೆ ಬಿದ್ದು ತೀವೃ ಹಾಗೂ
ಸಾದಾ ಸ್ವರೂಪದ ಗಾಯಗೊಂಡಿದ್ದು ಇರುತ್ತದೆ. ಘಟನೆಯ ನಂತರ ಚಾಲಕನು ಓಡಿ ಹೋಗಿದ್ದು ಇರುತ್ತದೆ, ಕಾರಣ ಅಪಘಾತಪಡಿಸಿದ ಟಾಟಾ
ಏಸ್ ನಂ ಕೆ.ಎ.36/ಎ-1406 ನೇದ್ದರ
ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ
ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 35/2020
ಕಲಂ 279.337,338. ಐ.ಪಿ,ಸಿ & 187 ಐ.ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ದಿನಾಂಕ
17-02-2020 ರಂದು ಬೆಳಗ್ಗೆ 6-30 ಗಂಟೆಗೆ
ವಿಮ್ಸ ಆಸ್ಪತ್ರೆ ಬಳ್ಳಾರಿ ಎಸ್.ಹೆಚ್.ಒ ಕೌಲ್ ಬಜಾರ್ ಪೊಲೀಸ್
ಠಾಣೆ ಬಳ್ಳಾರಿ ರವರು ಪೋನ್ ಮಾಡಿ ರಸ್ತೆ ಅಪಘಾತದಲ್ಲಿ ಆಶೀಸ್ ತಂದೆ ಶಲೇಶ್ ಠಾಕೂರ್ ಸಾಃ ಬಾಂಚಡಿ
ಗ್ರಾಮಜಿಃ ಚತ್ರ ಜಾರ್ಕಂಡ್ ರಾಜ್ಯ ಗಾಯಗೊಂಡ ಇಲಾಜು ಕುರಿತು ಸೇರಿಕೆಯಾಗಿರುತ್ತಾನೆ ಅಂತಾ ತಿಳಿಸಿದ
ಮೇರೆಗೆ ಹೆಚ್.ಸಿ-213 ರವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಳವನ್ನು ವಿಚಾರಿಸಲು
ಆತನು ಸರಿಯಾಗಿ ಮಾತನಾಡಲು ಬಾರದಿದ್ದರಿಂದ ಹಾಜರಿದ್ದ ಭೀರೇಂದ್ರ ಠಾಕೂರ್ ತಂದೆ ಗ್ಯಾನಿ ಠಾಕೂರ್
ಈತನ ಹೇಳಿಕೆಯ ಫಿರ್ಯಾದಯನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಇಂದು
ರಾತ್ರಿ 10-30 ಗಂಟೆಗೆ ನೀಡಿದ್ದು ಸದರಿ ದೂರಿನ ಸಾರಾಂಶವೆನೆಂದರೆ. ಫಿರ್ಯಾದಿದಾರನು
ಜೆ.ಜಿ.ಬಿ ವಾಹನದ ಡ್ರೈವರ್ ಕೆಲಸ ಮಾಡುತ್ತಿದ್ದು ಗಾಯಾಳು ಸದರಿ ವಾಹನಕ್ಕೆ ಹೆಲ್ಪರ್ ಕೆಲಸ ಮಾಡಿಕೊಂಡಿರುತ್ತಾನೆ
ದಿನಾಂಕ 16-02-2020 ರಂದು ಜೆ,ಜಿ.ಬಿ ವಾಹನವು ರಿಪೇರಿಗೆ ಬಂದಿದ್ದರಿಂದ ಮಾನವಿ ಪಟ್ಟಣದ ಮಾನವಿ-ರಾಯಚೂರು
ರಸ್ತೆಯಲ್ಲಿರುವ ಅಜೀಮ್ ಇಂಜೀನಿಯರ್ ವರ್ಕ್ಸ ಗ್ಯಾರೇಜಿನಲ್ಲಿ ರಿಪೇರಿಗೆ ಬಿಟ್ಟಿದ್ದು ಸಾಯಾಂಕಾಲ
4-00 ಗಂಟೆಯ ಸುಮಾರಿಗೆ ಗಾಯಾಳು ಆಶೀಸ್ ಈತನು ಮೂತ್ರ ವಿಸರ್ಜನೆ ಮಾಡಲು ಅಂಥಾ ಸದರಿ ಗ್ಯಾರೇಜ್
ಮುಂದಿನ ಮಾನವಿ-ರಾಯಚೂರು ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಅದೇ ವೇಳೆಗೆ ಆರೋಪಿ ವಿರುಪಾಕ್ಷಿ
ಈತನು ಮಾನವಿ ಕಡೆಯಿಂದ ರಾಯಚೂರು ಕಡೆಗೆ ತನ್ನ ಮೋಟರ್ ಸೈಕಲ್ ನಂ ಕೆ,ಎ 36-ಈಸಿ 7968 ನೇದ್ದನ್ನು
ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಆಶೀಸ್ ಈತನಿಗೆ ಟಕ್ಕರ್
ಮಾಡಿದ್ದು ಪರಿಣಾಮ ಆಶೀಸ್ ಈತನು ರಸ್ತೆ ಮೇಲೆ ಬಿದ್ದು ತಲೆಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ
ಕಾರಣ ಅಪಘಾತಕ್ಕೆ ಕಾರನಾದ ವಿರುಪಾಕ್ಷಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ
ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 36/2020
ಕಲಂ 279.338. ಐ.ಪಿ,ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.