Thought for the day

One of the toughest things in life is to make things simple:

11 Aug 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಮಟಕಾ ಜೂಜಾಟ ಪ್ರಕರಣದ ಮಾಹಿತಿ:

1) ದಿನಾಂಕ 10.08.2020 ರಂದು 05-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಬಪ್ಪೂರು ರಸ್ತೆ ವೃತ್ತದ ಹತ್ತಿರ ಐಡಿಬಿಐ ಬ್ಯಾಂಕ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಶ್ರೀನಾಥ ತಂದೆ ನರಸಯ್ಯ ಮಸ್ಕಿ, ವಯಾ: 48 ವರ್ಷ, ಜಾ: ಆರ್ಯವೈಶ್ಯ, : ಕಿರಾಣಿ ಅಂಗಡಿ, ಐಡಿಬಿಐ ಬ್ಯಾಂಕ್ ಹತ್ತಿರ, ಸಾ: ಮೊದಲನೇ ಗೇಟ್ ಹತ್ತಿರ, ಹೊಸ ಎಪಿಎಂಸಿ, ಸಿಂಧನೂರು  ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ 01 ಈತನಿಂದ ಮಟಕಾ ಜೂಜಾಟದ ನಗದು ಹಣ ರೂ 4210/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ 02 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ: 68/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

2)  ದಿನಾಂಕ 10.08.2020 ರಂದು 4-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ವಿ.ವಿ ನಗರದ ಒಳಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಬಸವರಾಜ ತಂದೆ ತಂದೆ ಮಂಜುನಾಥ, 21 ವರ್ಷ, ಜಾ: ನಾಯಕ, : ಅಕ್ಕಿ ಅಂಗಡಿಯಲ್ಲಿ ಕೆಲಸ, ಸಾ: ಜಾಲವಾಡಗಿ, ತಾ: ಮಸ್ಕಿ  ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ 01 ಈತನಿಂದ ಮಟಕಾ ಜೂಜಾಟದ ನಗದು ಹಣ ರೂ 1480/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ಮಟಕಾ ಪಟ್ಟಿ ಮತ್ತು ಹಣವನ್ನು ಆರೋಪಿ 02 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ: 67/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :

        ದಿನಾಂಕ 10/08/2020  ರಂದು ಅಡವಿ ಅಮರೇಶ್ವರ ಗ್ರಾಮದ ಸರಕಾರಿ ಹೈಸ್ಕೂಲ್ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ತಾವು  ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಾಯಂಕಾಲ 5.00 ಗಂಟೆಗೆ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ 1] ಮೌಲಪ್ಪ ತಂದೆ ಹನುಮಂತ, 60 ವರ್ಷ, ಚಲುವಾದಿ, ಒಕ್ಕಲುತನ ಸಾ: ಅಡವಿ ಅಮರೇಶ್ವರ 2] ಮಲ್ಲಪ್ಪ ತಂದೆ ಅಮರಪ್ಪ, 58 ವರ್ಷ, ಕುರುಬರ, ಕೂಲಿ ಸಾ: ಅಮರೇಶ್ವರ ಕ್ಯಾಂಪ್  3] ತಿಮ್ಮಣ್ಣ ತಂದೆ ಅಯ್ಯಪ್ಪ, 35 ವರ್ಷ, ಉಪ್ಪಾರ, ಒಕ್ಕಲುತನ ಸಾ: ಹಿರೆಕೊಟ್ನೆಕಲ್ 4] ಸಂಗಮೇಶ ತಂದೆ ದೇವೇಂದ್ರಪ್ಪ , 25 ವರ್ಷ, ಲಿಂಗಾಯತ, ಹೋಟೆಲ್ ಕೆಲಸ ಸಾ: ಪೋತ್ನಾಳ ರವರುಗಳ ಮೇಲೆ ದಾಳಿ ಮಾಡಿ  4 ಜನ ಆರೋಪಿತರನ್ನು ಹಿಡಿದುಕೊಂಡು ಸದರಿಯವರಿಂದ  ನಗದು ಹಣ  7340/- ರೂ ಗಳು ಮತ್ತು  52 ಇಸ್ಪಿಟ್ ಎಲೆಗಳನ್ನು  ಜಪ್ತು ಮಾಡಿಕೊಂಡು ಸಾಯಂಕಾಲ 5.00 ಗಂಟೆಯಿಂದ 6.00 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ 4 ಜನ ಆರೋಪಿತರು. ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯೊಂದಿಗೆ ವಾಪಾಸ ಸಾಯಂಕಾಲ 6.45 ಗಂಟೆಗೆ  ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ  ಸೂಚಿಸಿ ಮೂಲ ದಾಳಿ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರಿಗೆ ವಶಕ್ಕೆ  ನೀಡಿದ್ದು ಇರುತ್ತದೆ.  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ ಎನ್.ಸಿ.ಆರ್. ನಂ 33/2020 ರಲ್ಲಿ ನೊಂದಾಯಿಸಿಕೊಂಡಿದ್ದು ಇರುತ್ತದೆ. ಕಾರಣ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ರಾತ್ರಿ 8.00 ಗಂಟೆಗೆ ಮಾನವಿ ಠಾಣೆ  ಗುನ್ನೆ ನಂ 124/2020 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.