ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :
ದಿನಾಂಕ: 02.08.2020
ರಂದು 08-10 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯ ಡೋಂಗ್ರಿ ಮೆಹೆಬೂಬ ಇವರ
ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1) ಸುರೇಶ ತಂದೆ ವಿಜಯ ಭಾಸ್ಕರ,
40 ವರ್ಷ, ಜಾ: ಕಮ್ಮಾ, ಉ: ಇನ್ಸೂರೆನ್ಸ ಏಜೆಂಟ್, ಸಾ: ನಾಡಗೌಡ ಅರ್ಪಾಟಮೆಂಟ್, ವೆಂಕಟೇಶ್ವರ ನಗರ, ಸಿಂಧನೂರು.
2) ರಾಮಕೃಷ್ಣ ತಂದೆ ರಾಮಪ್ಪ, 31 ವರ್ಷ, ಜಾ: ನಾಯಕ, ಉ: ಬಟ್ಟೆ ಅಂಗಡಿ, ಸಾ: ವೆಂಕಟೇಶ್ವರ ಕಾಲೋನಿ, ಸಿಂಧನೂರು 3) ರಾಘವೇಂದ್ರ ತಂದೆ ಸತ್ಯ
ನಾರಾಯಣ, 35 ವರ್ಷ, ಜಾ: ಚೌದರಿ, ಉ; ಒಕ್ಕಲುತನ, ಸಾ: ವೆಂಕಟೇಶ್ವರ ನಗರ, ನಾಡಗೌಡ ಅರ್ಪಾಟಮೆಂಟ್
ಹತ್ತಿರ, ಸಿಂಧನೂರು 4) ನಾಗರಾಜ ತಂದೆ ಮುನಯ್ಯ,
35 ವರ್ಷ, ಜಾ: ಪದ್ಮಶಾಲಿ, ಉ: ಬಟ್ಟೆ ಅಂಗಡಿ, ಸಾ: ವೆಂಕಟೇಶ್ವರ ನಗರ, ನಾಡಗೌಡ ಅರ್ಪಾಟಮೆಂಟ್
ಹತ್ತಿರ, ಸಿಂಧನೂರು 5) ಶ್ರೀನಿವಾಸ ತಂದೆ ರಾಮಣ್ಣ,
46 ವರ್ಷ, ಜಾ: ಕಮ್ಮಾ, ಒಕ್ಕಲುತನ, ಸಾ: ವೆಂಕಟೇಶ್ವರ ನಗರ, ನಾಡಗೌಡ ಅರ್ಪಾಟಮೆಂಟ್
ಹತ್ತಿರ, ಸಿಂಧನೂರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು
ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು
ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್
ಜೂಜಾಟದ ನಗದು ಹಣ ರೂ. 6130/- ಮತ್ತು 52
ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ
ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು
ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮೂಲಕ ಸೂಚಿಸಿದ್ದರಿಂದ ಮಾನ್ಯ
ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣಾ ಗುನ್ನೆ ನಂ:
63/2020, ಕಲಂ: 87 ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.