ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
zsÀgÉÆÃqÉ
¥ÀæPÀgÀtzÀ ªÀiÁ»w.
ದಿನಾಂಕ: 19-01-2019 ರಂದು 7-15 Am ಕ್ಕೆ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಠಾಣಾ ಪಿಸಿ-53 ರವರು ಒಂದು ನ್ಯಾಯಾಲಯದ ಖಾಸಗಿ ಪಿರ್ಯಾದು ಸಂ.08/2018 ನೇದ್ದನ್ನು ತಂದು ಹಾಜರುಪಡಿಸಿದ್ದನ್ನು ಸ್ವೀಕೃತ ಮಾಡಿಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ,
ಪಿರ್ಯಾದಿದಾಯು ಅರ್ಜುನ ಕರ್ವಾಸರ ತಂದೆ ಫೋಜಾಜಿ ಕರ್ವಾಸರ, ಉ: ಸಿಎನ್
ಎಕ್ಸ ಕಾರ್ಪೋರೇಷನ ಲಿಮಿಟೆಡ, ಇನಕಾರ್ಪೋರೆಟೆಡ ( ಇಂಡಿಯನ್
ಕಂಪನೀಸ್
ಕಾಯ್ದೆಗೊಳಪಟ್ಟಿದೆ ) ಎಂಬಾಸೀ ಸೆಂಟರ, ನಾರಿಮನ
ಪಾಯಿಂಟ್ ಮುಂಬೈ-400021 , ಸಾ:#125/31 ಸಂತಸೇನಾ
ಮಹಾರಾಜ ಮಾರ್ಗ, 2 ನೇ
ಕುಂಭಾರವಾಡ, ಮುಂಬೈ ( ಮಹಾರಾಷ್ಟ್ರ ) ತಮ್ಮ ಮಾಲೀಕತ್ವದ CNX ಕಂಪನಿಯಿಂದ ಕೃಷಿ ಉತ್ಪನ್ನ ಸರಕುಗಳ ಸಂಗ್ರಹಣೆ ಹಾಗೂ ಇತರೆ ವ್ಯವಹರಣೆ ಮಾಡಿಕೊಂಡಿದ್ದು, ಈ ಕಂಪನಿಯು ಠಾಣಾ ವ್ಯಾಪ್ತಿಯ ಗುಡಗಲದಿನ್ನಿ ಸೀಮಾ ಸರ್ವೆ ನಂ.50 ರಲ್ಲಿರುವ EVBG ಗೋದಾಮನ್ನು ಎನ್. ಅಮ್ಮಿರಾಜ ಸಾಸಲಮರಿ ಕ್ಯಾಂಪ ತಾ:ಸಿಂಧನೂರು ಇವರ ಕಡೆಯಿಂದ ಒಪ್ಪಂದ ಮಾಡಿಕೊಂಡು, ಇದರಲ್ಲಿ ಸಿರುಗುಪ್ಪ ಸಿಂಡಿಕೇಟ ಬ್ಯಾಂಕಿನಲ್ಲಿ 23 ವಿವಿಧ ಖಾತೆ ಹೊಂದಿದ ರೈತರು ಸದರಿ ಬ್ಯಾಂಕಿನಿಂದ ಪ್ಲೆಡ್ಜ ಮೂಲಕ ಸಾಲ ಪಡೆದು ತಮ್ಮ ಕೃಷಿ ಉತ್ಪನ್ನ ಸರಕುಗಳನ್ನು ಪಿರ್ಯಾದಿಯ ಗೋದಾಮಿನಲ್ಲಿ ಬಾಡಿಗೆ ಆಧಾರದಲ್ಲಿ ಸಂಗ್ರಹಿಸಿದ್ದು, ಅದರಂತೆ ದಿನಾಂಕ: 28-07-2018 ಕ್ಕೆ ಸದರಿ ಗೋದಾಮಿನಲ್ಲಿ ಒಟ್ಟು 12,600 ಚೀಲಗಳಿದ್ದು,ಅದರಲ್ಲಿ 7400 ಭತ್ತದ ಚೀಲಗಳು ಹಾಗೂ 600 ಅಡಕೆ ಚೀಲಗಳನ್ನು ಒಂದು ಕೋಣೆಯಲ್ಲಿ ಮತ್ತು 4600 ಭತ್ತದ ಚೀಲಗಳನ್ನು ಇನ್ನೊಂದು ಕೋಣೆಯಲ್ಲಿ ಸಂಗ್ರಹಿಸಿಟ್ಟಿದ್ದು ಇದೆ.
ದಿನಾಂಕ: 28-07-2018 ರಂದು ಮೇಲ್ಕಂಡ ಆರೋಪಿತರೆಲ್ಲರೂ )
Driver of Lorry No . KA-12/8776 2)
Driver of Lorry No. AP-21/X-4985.
3) Driver of Lorry No. KA-36/A-2874 4)
Driver of Lorry No. KA-36/7732. 5)
Driver of Lorry No. KA-01/AA-9660. 6)
Driver of Lorry No. AP-04/V-9045. 7)
Driver of Lorry No. AP-21/X-4988. All
of Name & Address no known, ನಂಬರ್ ಗಳ ತಮ್ಮ ಲಾರಿಗಳನ್ನು ತೆಗೆದುಕೊಂಡು ಬಂದು ಸದರಿ ಗೋದಾಮಿನ ಶೆಟರ ಬಾಗಿಲ ಮುರಿದು ಒಳಪ್ರವೇಶಿಸಿದ್ದು, ಆಗ ಸದರಿ ಗೋದಾಮಿನ ವಾಚಮೆನ್ ಆರೋಪಿತರಿಗೆ ತಡೆಯಲು ಪ್ರಯತ್ನಿಸಿದ್ದಾಗ್ಯೂ ಆತನಿಗೆ ಕೈಯಿಂದ ಹೊಡೆದು ಗೋದಾಮಿನಿಂದ ಹೊರಗೆ ಹಾಕಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಚೀಲಗಳಲ್ಲಿ, 7400 ಭತ್ತದ ಚೀಲಗಳು ಅಕಿರೂ. 1,36,44,311 ಹಾಗೂ 600 ಅಡಕೆ ಚೀಲಗಳು ಅಕಿರೂ. 1,53,60,000 ಒಟ್ಟು ಅಕಿರೂ. 2,90,04,311 ಗಳಷ್ಟು ಬೆಲೆಬಾಳುವ ಭತ್ತ & ಅಡಕೆ ಚೀಲಗಳನ್ನು ದರೋಡೆ ಮಾಡಿಕೊಂಡು ತಮ್ಮ ಲಾರಿಗಳಲ್ಲಿ ತೆಗೆದುಕೊಂಡು ಹೋಗಿದ್ದು, ಆಗ ವಾಚಮೆನ್ ಸದರಿ ಆರೋಪಿತರ ಹಾಗೂ ಲಾರಿಗಳ ಫೋಟೋ, ವಿಡಿಯೋ ತೆಗೆದು ತನ್ನ ಮೇಲ್ವಿಚಾರಕರಿಗೆ ತಿಳಿಸಿದ್ದರಿಂದ ನಂತರ ದಿನಾಂಕ:29-07-2018 ರಂದು ಪಿರ್ಯಾದಿಗೆ ಮಾಹಿತಿ ತಿಳಿದು ಸ್ಥಳೀಯ ಸೂಪರ ವೈಸರಗಳಿಂದ ಸ್ಥಳ ಪರಿಶೀಲನೆ ಮಾಡಿಸಿ, ನಂತರ ನಡೆದ ಘಟನೆ ಕುರಿತು ವಿಡಿಯೋ, ಫೋಟೋವನ್ನು ಪರಿಶೀಲಿಸಿ ಸಂಪೂರ್ಣ ಮಾಹಿತಿಯನ್ನು ದಿನಾಂಕ:10-08-2018 ರಂದು ಪಿರ್ಯಾದಿ ಮಾಹಿತಿ ಪಡೆದು ಸದರಿ ಆರೋಪಿತರ ಪತ್ತೆಗಾಗಿ ಸಾಕಷ್ಟು ಪ್ರಯತ್ನಿಸಿದ್ದಾಗ್ಯೂ ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ನಂತರ ಮಾನ್ಯ ನ್ಯಾಯಾಲಯದ ಮೂಲಕ ಖಾಸಗಿ ಪಿರ್ಯಾದು ಸಲ್ಲಿಸಿದ್ದು ಅದರ ಸಾರಂಶದ ಮೇಲಿಂದ ತುರುವಿಹಾಳ ಪೊಲಿಸ್ ಠಾಣೆ ಗುನ್ನೆ ನಂ. 09/2019 U/s 323, 379, 392 R/w 34 IPC ಅಡಿಯಲ್ಲಿ ಪ್ರಕರಣದ ದಾಖಾಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.