¥ÀwæPÁ ¥ÀæPÀluÉ
-:: ಇಬ್ಬರು ಕುಖ್ಯಾತ ಅಂತರ ರಾಜ್ಯ ಮನೆಗಳ್ಳರ ಬಂಧನ ::-
ರಾಯಚೂರು ಜಿಲ್ಲೆಯ ಯಾಪಲದಿನ್ನಿ ಪೊಲೀಸ್ ಠಾಣೆಯ
ಪೊಲೀಸರು ಇಬ್ಬರು ಕುಖ್ಯಾತ
ರಾಯಚೂರು ಜಿಲ್ಲೆಯ ಯಾಪಲದಿನ್ನಿ ಪೊಲೀಸ್ ಠಾಣೆಯ
ಹದ್ದಿಯ ಯಾಪಲದಿನ್ನಿ, ನಾಗನದೊಡ್ಡಿ, ಸರ್ಜಾಪೂರು, ರಾಳ್ಳದೊಡ್ಡಿ ಹಾಗೂ ಕಲವಲದೊಡ್ಡಿ
ಗ್ರಾಮಗಳಲ್ಲಿ ಕಳೆದ
ತಿಂಗಳಿನಿಂದ ಜರುಗುತ್ತಿದ್ದ ಮನೆಗಳ್ಳತನಗಳ ಪತ್ತೆಗಾಗಿ ಡಾ||ಅನೂಪ್ ಶೆಟ್ಟಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ, ಪ್ರಭಾರಿ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಎಸ್.ಬಿ. ಪಾಟೀಲ್ ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್
ಅಧೀಕ್ಷಕರು ರಾಯಚೂರು ರವರು, ಜಿ.ಹರೀಶ ಮಾನ್ಯ ಪೊಲೀಸ್ ಉಪಾಧೀಕ್ಷರು ರಾಯಚೂರು ರವರ
ಮಾರ್ಗದರ್ಶನದಲ್ಲಿ ಹನುಮರಡ್ಡೆಪ್ಪ ಸಿ.ಪಿ.ಐ. ಗ್ರಾಮೀಣ
ವೃತ್ತ ರಾಯಚೂರು, ಮಲ್ಲಿಕಾರ್ಜುನ
ಇಕ್ಕಳಕಿ ಪಿ.ಎಸ್.ಐ. ಯಾಪಲದಿನ್ನಿ
ಪೊಲೀಸ್ ಠಾಣೆ, ಹಾಗೂ
ಸಿಬ್ಬಂದಿಯವರಾದ ಜಿಲಾನಿಪಾಶಾ ಎ.ಎಸ್.ಐ, ನಾಗಪ್ಪ
ಹೆಚ್.ಸಿ 74, ನರಸಿಂಗಪ್ಪ
ಹೆಚ್.ಸಿ 273, ರವಿರಾಜ
ಹೆಚ್.ಸಿ 320, ಬಸವರಾಜ ಸಿಪಿಸಿ ಇಡಪನೂರು ಠಾಣೆ, ಡಾಕಪ್ಪ ಸಿಪಿಸಿ 391, ರಾಘವರೆಡ್ಡಿ ಸಿಪಿಸಿ 416, ಆನಂದ
ಪಿಸಿ 90 ಇವರನ್ನೊಳಗೊಂಡ ವಿಶೇಷ
ತಂಡವನ್ನು ರಚಿಸಿದ್ದರು.
ಈ ತಂಡವು ಹಗಲಿರಳು ಶ್ರಮಿಸಿ ಈ ಕೆಳಕಂಡ ಇಬ್ಬರು
ಕುಖ್ಯಾತ
ಮನೆಗಳ್ಳರನ್ನು
ಬಂಧಿಸುವಲ್ಲಿ ಯಶಸ್ವಿಯಾಗಿ ಅವರಿಂದ 3,46,500/- ರೂ. ಬೆಲೆಬಾಳುವ
ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ ಒಂದು ಟಿ.ವಿ.ಎಸ್. ಅಪಾಚಿ ಮೋಟಾರ ಸೈಕಲ್ ಅಂ.ಕಿ ರೂ. 50,000/- ಹಾಗೂ 02 ಮೊಬೈಲ್ ಫೋನ್ ಗಳು ಅ.ಕಿ.ರೂ.8000/- ಹೀಗೆ
ಒಟ್ಟು ಎಲ್ಲಾ ಸೇರಿ ರೂ.4,04,500/- ರೂ. ಬೆಲೆಬಾಳುವುಗಳನ್ನು
ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
1) ದೊಡ್ಡ ನರಸಿಂಹಲು @ ಕುಂಟ ನರಸಿಂಹಲು @ ಬೋಯ ನರಸಿಂಹಲು ತಂದೆ ಲಕ್ಷ್ಮಣ ವ||27ವರ್ಷ, ಜಾ||ನಾಯಕ, ಉ||ಒಕ್ಕಲುತನ ಸಾ|| ತಾಟಿಕುಂಟ, ಮಂಡಲ:ಮಂದಕಲ್, ತಾ||ಜಿ||ಗದ್ವಾಲ್, ರಾಜ್ಯ:ತೆಲಂಗಾಣ
2) ಸಣ್ಣ ನರಸಿಂಹಲು ತಂದೆ ರಾಮುಡು ವ||20ವರ್ಷ, ಜಾ||ನಾಯಕ, ಉ||ಒಕ್ಕಲುತನ ಸಾ||ಸರಕಾರಿ ಶಾಲೆ ಹತ್ತಿರ, ತಾಟಿಕುಂಟ, ಮಂಡಲ:ಮಂದಕಲ್, ತಾ||ಜಿ||ಗದ್ವಾಲ್, ರಾಜ್ಯ:ತೆಲಂಗಾಣ