Thought for the day

One of the toughest things in life is to make things simple:

17 Jan 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÉÆý dÆeÁl ¥ÀæPÀgÀtzÀ ªÀiÁ»w.
ಸಂಕ್ಷಿಪ್ತ ಸಾಂರಾಂಶ- ದಿನಾಂಕ 15/01/2019 ರಂದು ಕವಿತಾಳ ಠಾಣೆ ವ್ಯಾಪ್ತಿಯ ಹಿರೇದಿನ್ನಿ ಸೀಮಾದಲ್ಲಿ ಕೋಳಿ ಪಂದ್ಯಾಟದ ಜೂಜಾಟ  ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಕಾರಣ ಸಿ.ಪಿ. ಮಾನವಿ ರವರ ಮಾರ್ಗದರ್ಶನದಲ್ಲಿ ಪಂಚರು, ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಟದಲ್ಲಿ ತೊಡಗಿದ್ದ ಜನರ ಮೇಲೆ ದಾಳಿ ಮಾಡಿ ಅವರ 02 ಜೀವಂತ ಹುಂಜ ಅಂ.ಕಿ 600/- ರೂ ಮತ್ತು 11 ಮೋಟಾರ್ ಸೈಕಲ್ ಗಳು  ಅಂ.ಕಿ 3,32,000/- ರೂ ಗಳು ಬೆಲೆ ಭಾಳುವವಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು  ವಾಪಾಸ  20-30 ಗಂಟೆಗೆ ಸೆರೆಸಿಕ್ಕ ಮೋಟಾರು ಸೈಕಲ್ ಗಳೊಂದಿಗೆ ಠಾಣೆಗೆ ಬಂದು ದಾಳಿ ಪಂಚನಾಮೆ, ಜಪ್ತು ಮಾಡಿದ ಮುದ್ದೆ ಮಾಲು ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ.  ಕಾರಣ ಆಪಾದಿತರು ಕಲಂ 78(VI) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಲು ಪರವಾನಿಗೆಯನ್ನು ಪಡೆದುಕೊಂಡು ದಿನಾಂಕ 16/01/2019 ರಂದು 11-30 ಗಂಟೆಗೆ  ಬಂದು ಕವಿತಾಳ ಠಾಣೆ ಗುನ್ನೆ ನಂ 08/2019 ಕಲಂ- 78 (VI) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

-  ದಿನಾಂಕ 16.01.2019 ರಂದು ಮಧ್ಯರಾತ್ರಿ 1.00 ಗಂಟೆಯಿಂದ 2.00 ಗಂಟೆಯ ನಡುವಿನ ಅವಧಿಯಲ್ಲಿ ಫಿರ್ಯಾದಿದಾರರು ತಮ್ಮ ಮನೆಯ ಮುಂದೆ ಸ್ಟಿಫ್ಟ ಕಾರ್ ನಂ ಕೆ. 36 ಎನ್ 8750 ನೇದ್ದನ್ನು ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದಾಗ್ಗೆ ಕಾರಿನ ಹಿಂಬದಿಯ ಟೈರ್ ಬ್ಲಾಸ್ಟ ಆದ ಶಬ್ದದಿಂದ ಬಂದು ನೋಡಲಾಗಿ ಕಾರಿಗೆ ಬೆಂಕಿ ಹತ್ತಿದ್ದು,  ಕಾರಿನ ಮೇಲೆ ನೀರು ಹಾಕಿ ಬೆಂಕಿ ನಂದಿಸಿ, ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಕಾರಿಗೆ ಬೆಂಕಿ ಹಚ್ಚಿದ್ದು ಇರುತ್ತದೆ ಅಂತಾ ಫಿರ್ಯಾದಿದಾರರು ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ ಪ್ರ..ವರದಿ ಜರುಗಿಸಲಾಗಿದೆ.