ಕಳುವಿನ
ಪ್ರರಕರಣ ಮಾಹಿತಿ.
ದಿನಾಂಕ
03-03-2019 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಪ್ರಕಾಶ ಕಮಲಾಪುರಕರ್ ತಂದೆ ದಿ:ಅನಂತರಾವ್
ಕಮಲಾಪುರಕರ್ , ವ: 67 ವರ್ಷ, ಜಾತಿ: ಬ್ರಹ್ಮಣ, ಉ: ರಿಟೈರ್ಡ ಕೆ.ಪಿ.ಸಿ ಎಂಪ್ಲಾಯ್ ಸಾ: ಮನೆ ನಂ.4-4-223/149 ಸತ್ಯನಾಥ ಕಾಲೋನಿ ರಾಯಚೂರು ರವರು ಠಾಣೆಗೆ ಹಾಜರಾಗಿ ಗಣಿಕಿಕೃತ
ಮಾಡಿದ ದೂರನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ತಮ್ಮ ಮಗ ಅಜಿತ್ ಕುಮಾರ್
ಇವರು ಬೆಂಗಳೂರಿನಲ್ಲಿ ಸಫ್ಟವೇರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರಿಂದ ಆಗಾಗ ಬೆಂಗಳೂರಿಗೆ ಹೋಗಿ ಬರುತ್ತಿದ್ದು ಅದರಂತೆ ದಿನಾಂಕ 22.02-2019 ರಂದು
ಸಾಯಂಕಾಲ 7-00 ಗಂಟೆಗೆ ಬೆಂಗಳೂರುಗೆ ಹೋಗಿದ್ದು ಇರುತ್ತದೆ. ದಿ :02-03-2019 ರಂದು ಬೆಳಿಗ್ಗೆ
7-30 ಗಂಟೆಯ ಸುಮಾರಿಗೆ ಅವರ ಪಕ್ಕದ ಮನೆಯರಾದ
ಅಶೋಕ ಕುಲಕರ್ಣಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರ, ನಿಮ್ಮ
ಮನೆ ಕಳ್ಳತನ, ಆಗಿದೆ ಅಂತಾ ತಿಳಿಸಿದ್ದು ಪಿರ್ಯಾದಿದಾರರು
ಬೆಂಗಳೂರಿನಿಂದ ಬಂದು ನೋಡಿದ್ದು ದಿನಾಂಕ 2-03-2019 ರ ಬೆಳಗಿನ ಜಾವ ಸುಮಾರು 3-50 ಗಂಟೆಯಿಂದ
5-00 ಗಂಟೆಯ ಅವಧಿಯಲ್ಲಿಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಮನೆಯ ಬೆಡರೂಂನಲ್ಲಿಟ್ಟಿದ್ದ
ಆಲ್ಮೇರಾ ಲಾಕರನಲ್ಲಿದ್ದ ಮೇಲೆ ನಮೂದಿಸಿದ ಬಂಗಾರ
ಮತ್ತು ಬೆಳ್ಳಿಯ ಆಭರಣಗಳು ಹಾಗೂ ನಗದು ಹಣ 2000 ಒಟ್ಟು ಸೇರಿ 22000/- ಬೆಲೆ ಬಾಳುವವುಗಳನ್ನು ಮತ್ತು ಎಸ್.ಬಿ.ಐ ಬ್ಯಾಂಕ್. & ಸಿಂಡಿಕೇಟ್ ಬ್ಯಾಂಕ್
ಲಾಕರ್ ಕೀ ಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಲಿಖಿತ ಪಿರ್ಯಾದಿ
ಸಾರಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂಬರ 17/2017
PÀ®A 457,380 L.¦.¹ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.