Thought for the day

One of the toughest things in life is to make things simple:

14 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿ.13-01-2020 ರಂದು ರಾತ್ರಿ 9-40 ಗಂಟೆಗೆ ಪಿರ್ಯಾದಿ ಹುಸೇನಪ್ಪ ತಂದೆ ಸಾಯಿಬಣ್ಣ 21 ವರ್ಷ, ಜಾ;-ಪಿಂಜಾರ್,ಉ;-ಒಕ್ಕಲುತನ ಸಾ:- ರವುಡಕುಂದ ಗ್ರಾಮ ತಾ;-ಸಿಂಧನೂರು ದಾರನು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಪಿರ್ಯಾದಿಯನ್ನು ಹಾಜರಪಡಿಸಿದ್ದು. ಸಾರಾಂಶವೇನೆಂದರೆ, ವಿಜಯಕುಮಾರ ಈತನು ನಡೆಸುತ್ತಿದ್ದ  ರವುಡಕುಂದ ಗ್ರಾಮದ ರಂಗಣ್ಣ ಇವರ ಮಹಿಂದ್ರಾ ಟ್ರಾಕ್ಟರ್ Engine & Chassis Number NKZCO2478  ಇದಕ್ಕೆ ಅಳವಡಿಸಿದ ಟ್ರಾಲಿ Chassis Number  33/2014 ನೇದ್ದರಲ್ಲಿ ಮೃತ ಸಾಯಿಬಣ್ಣ ಮತ್ತು ಗಾಯಾಳು ಹನುಮಂತ ಇವರು ಕೂಡಿ ಹುಡಾ ಸೀಮಾಂತರದಲ್ಲಿ ವಿರುಪಾಕ್ಷಪ್ಪ ಡಮಾಣಿ ಇವರ ಹೊಲಕ್ಕೆ  ಒಕ್ಕಲುತನದ ಕೂಲಿಕೆಲಸಕ್ಕೆ ಹೋಗಿ ಕೂಲಿಕೆಲಸ ಮುಗಿಸಿಕೊಂಡು ಸದರಿ ಟ್ರಾಕ್ಟರದಲ್ಲಿ ಸಾಯಂಕಾಲ ಮರಳಿ ಊರಿಗೆ ಬರುತ್ತಿರುವಾಗ ಚಾಲಕ ವಿಜಯಕುಮಾರನು ಟ್ರಾಕ್ಟರ್ ನ್ನು ಹುಡಾ ಗ್ರಾಮದ ಕಡೆಯಿಂದ ಸೋಮಲಾಪೂರು ಕಡೆಗೆ ಅತೀ ಜೊರಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಸೋಮಲಾಪೂರು ಗ್ರಾಮ ಇನ್ನು ಸ್ವಲ್ಪ ಮುಂದೆ ಇರುವಾಗ ರಸ್ತೆಯ ಎಡಭಾಗದಲ್ಲಿರುವ ಈರಣ್ಣ ಸೋಮಲಾಪೂರು ಇವರ ಹೊಲದ ಹತ್ತಿರ ತಗ್ಗಿನಲ್ಲಿ ಟ್ರಾಕ್ಟರನ್ನು ನಿಯಂತ್ರಣಗೊಳಿಸದೆ ಪಲ್ಟಿಗೊಳಿಸಿದ್ದರಿಂದ ಟ್ರಾಲಿಯಲ್ಲಿದ್ದ ಮೃತ ಸಾಯಿಬಣ್ಣ ಮತ್ತು ಗಾಯಾಳು ಹನುಮಂತ ಇಬ್ಬರು ಕೆಳಗಡೆ ಬಿದ್ದಿದ್ದು ಸಾಯಿಬಣ್ಣನು ಇಂಜೀನಿನ ದೊಡ್ಡ ಗಾಲಿಯ ಕೆಳಗಡೆ ಸಿಕ್ಕಿಹಾಕಿಕೊಂಡು ಹೊಟ್ಟೆಗೆ, ಎದೆಗೆ, ಭಾರೀ ಒತ್ತುಗಾಯಗಳಾಗಿ, ಕಿವಿ, ಮೂಗು,ಬಾಯಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹನುಮಂತನಿಗೆ ಸಣ್ಣಪುಟ್ಟ ತೆರೆಚಿದ ಗಾಯಗಳಾಗಿದ್ದು. ಚಾಲಕ ವಿಜಯಕುಮಾರನಿಗೆ ಗಾಯಗಳು ಆಗಿರುವುದಿಲ್ಲಾ.ಅಪಘಾತದ ನಂತರ ಚಾಲಕ ಓಡಿ ಹೋಗಿರುತ್ತಾನೆಂದು ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ.009/2020.ಕಲಂ. 279, 337, 304(A) IPC & 187 IMV  ACT ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:13.01.2020 ರಂದು ರಾತ್ರಿ 7.30 ಗಂಟೆಗೆ ಫಿರ್ಯಾದಿ PÀÄ®¸ÀÄA© UÀAqÀ ¸À§Ó°¸Á§ ªÀAiÀĸÀÄì:34 ªÀµÀð eÁ: ªÀÄĹèA G: PÀÆ°PÉ®¸À ¸Á: ªÉÄùÛç ¥ÉÃmÉ ªÀÄÄzÀUÀ¯ï vÁ:°AUÀ¸ÀÆÎgÀÄ. ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಗಂಡ ಮೃತ ಸಬ್ಜಲಿಸಾಬ ಇತನು ಇಂದು ದಿನಾಂಕ:13.01.2020 ರಂದು ತನ್ನ ಮೋಟಾರ ಸೈಕಲ್ ನಂ. KA-36/Y-2309 ನೇದ್ದನ್ನು ಬೆಂಗಳೂರು ಕ್ವಾರಿಯಿಂದ ತಗೆದುಕೊಂಡು ಅದರ ಹಿಂದೆ ಮೃತ ಕಲ್ಲಪ್ಪ ಇತನನ್ನು ಕೂಡ್ರಿಸಿಕೊಂಡು ಮುದಗಲ್ಲಿಗೆ ಬರುತ್ತಿದ್ದಾಗ ಮುದಗಲ್ ತಾವರಗೇರಾ ರಸ್ತೆ ಹತ್ತಿರ ತನ್ನ ಮೋಟಾರ ಸೈಕಲ್ಲನ್ನು ನಿಲ್ಲಿಸಿ ರಸ್ತೆಯ ಎರಡು ಬಾಜು ವಾಹನಗಳು ಬರುವುದನ್ನು ನೋಡುತ್ತಿದ್ದಾಗ ಇಂದು ದಿನಾಂಕ:13.01.2020 ರಂದು ಸಂಜೆ 6.30 ಗಂಟೆ ಸುಮಾರಿಗೆ ಮುದಗಲ್ ಕಡೆಯಿಂದ ಖಾಸಗಿ ಬಸ್ ನಂ. KA-16/B-6372 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ಗಂಡ ಮೃತ ಸಬ್ಜಲಿಸಾಬ ಇತನ ಮೋಟಾರ ಸೈಕಲ್ಲಿಗೆ ಟಕ್ಕರ ಮಾಡಿದ್ದರಿಂದ ಮೋಟಾರ ಸೈಕಲ್ ಮೇಲಿದ್ದ ಸಬ್ಜಲಿಸಾಬ ಇತನಿಗೆ ತಲೆಗೆ ಬಾರಿ ರಕ್ತಗಾಯವಾಗಿದ್ದು, ಬಲಗಡೆ ಮೊಣಕೈ ಹತ್ತಿರ ಮುರಿದು ಬಾರಿ ರಕ್ತಗಾಯವಾಗಿದ್ದು ಹಾಗೂ ಬಲಗಾಲು ಮೊಣಕಾಲು ಕೆಳಗಡೆ ಮುರಿದು ಬಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅದೇ ರೀತಿ ಮೋಟಾರ ಸೈಕಲ್ ಹಿಂದೆ ಕುಳಿತುಕೊಂಡಿದ್ದ ಮೃತ ಕಲ್ಲಪ್ಪನಿಗೆ ತಲೆಗೆ ಬಾರಿ ರಕ್ತಗಾಯವಾಗಿ ತಲೆ ಹೊಡೆದು ಮಾಂಸ ಖಂಡ ಹೊರಗಡೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಈ ಅಪಘಾತವಾದ ಮೇಲೆ ಅಪಘಾತ ಮಾಡಿದ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದರಿ ಅಪಘಾತವು ಖಾಸಗಿ ಬಸ್ಸ ನಂ. KA-16/B-6372 ನೇದ್ದರ ಚಾಲಕನಿಂದ ನಡೆದಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 04/2020 PÀ®A 279, 304 (J) L.¦.¹ & 187 L JA « PÁAiÉÄÝ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರತ್ತಾರೆ.