Thought for the day

One of the toughest things in life is to make things simple:

3 Feb 2021

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 ಮಟಕಾ ಜಪ್ತಿ ಪ್ರಕರಣದ ಮಮಾಹಿತಿ.

     ದಿನಾಂಕ:02.02.2021 ರಂದು ರಾತ್ರಿ 8.40 ಗಂಟೆಗೆ ಪಿ.ಎಸ್.ಐ (ಕಾ.ಸು) ನೇತಾಜಿನಗರ ಠಾಣೆ ರಾಯಚೂರು ರವರು, ಆರೋಪಿ ಶೇಖ್ ಶಾಲಮ್ @ ಖಾನ್ ತಂದೆ ಶೇಖ್ ಮಹೆಬೂಬ್ ವ:34, ಜಾ: ಮುಸ್ಲಿಂ, ಉ: ಅಟೋ ಡ್ರೈವರ್ ಸಾ: ಜಹೀರಾಬಾದ ರಾಯಚೂರು ಈತನನ್ನು ಮತ್ತು ಮುದ್ದೆಮಾಲು ಮತ್ತು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದ ನೀಡಿದ್ದರ ಮೇರೆಗೆ ಸ್ವೀಕರಿಸಿಕೊಂಡು ಸದರಿ ಪ್ರಕರಣವು ಅಂಜ್ಞೆಯ ಅಪರಾದ ಆಗುತ್ತಿದ್ದರಿಂದ ಎನ್.ಸಿ 01/2021 ರಲ್ಲಿ ದಾಖಲಿಸಿ ಸದರಿ ಎನ್ .ಸಿ ಪ್ರಕರಣವನ್ನು ತನಿಖೆ ನಡೆಸಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ರಾತ್ರಿ  8.40 ಗಂಟೆಗೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆಯ ವಿವರದ ಸಾರಂಶವೇನಂದರೆ ಇಂದು ದಿನಾಂಕ:02.02.2021 ರಂದು ಸಾಯಂಕಾಲ 6.30 ಗಂಟೆಗೆ ಠಾಣಾ ಹದ್ದಿಯ ಶ್ರೀ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ ಅಶೋಕನಗರಕ್ಕೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನು ಮಟಕಾ  ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ  ಪಿಎಸ್ಐ ನೇತಾಜಿ ಠಾಣೆ ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಾಯಂಕಾಲ 7.30 ಗಂಟೆಗೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು  ಶೇಖ್ ಶಾಲಮ್ @ ಖಾನ್ ತಂದೆ ಶೇಖ್ ಮಹೆಬೂಬ್ ವ:34, ಜಾ: ಮುಸ್ಲಿಂ, ಉ: ಅಟೋ ಡ್ರೈವರ್ ಸಾ: ಜಹೀರಾಬಾದ ರಾಯಚೂರು  ಅಂತಾ ಹೇಳಿದ್ದು ಇವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 2010/- ರೂಪಾಯಿಗಳು  ಮತ್ತು ಒಂದು ಮಟಕಾ ನಂಬರ್ ಚೀಟಿ ಹಾಗೂ ಒಂದು ಬಾಲ್ ಪೆನ್ನು ಸಿಕ್ಕಿದ್ದು, ದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದರ ಮೇರೆಗೆ  ನೇತಾಜಿ ನಗರ ಪೊಲೀಸ್ ಠಾಣಾ ಅಪರಾಧ ಸಂ:05/2021  ಕಲಂ.78 (3)  ಕೆ.ಪಿ ಕಾಯ್ದೆ ಪ್ರಕಾರ  ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ 01.02.2021 ರಂದು 17.30 ಗಂಟೆಗೆ ರೋಡಲಬಂಡಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಂಗಪ್ಪ ತಂದೆ ಹೂವಪ್ಪ ವಯಾ: 30 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ರೋಡಲಬಂಡಾ ಗ್ರಾಮ ತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿತನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 05/2021 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 02.02.2021 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 20/2021  ಕಲಂ: 78(3)  ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.