ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟಕಾ ಜಪ್ತಿ ಪ್ರಕರಣದ ಮಮಾಹಿತಿ.
ದಿನಾಂಕ:02.02.2021 ರಂದು ರಾತ್ರಿ 8.40 ಗಂಟೆಗೆ ಪಿ.ಎಸ್.ಐ
(ಕಾ.ಸು) ನೇತಾಜಿನಗರ ಠಾಣೆ ರಾಯಚೂರು ರವರು, ಆರೋಪಿ ಶೇಖ್ ಶಾಲಮ್ @
ಖಾನ್ ತಂದೆ ಶೇಖ್ ಮಹೆಬೂಬ್ ವ:34, ಜಾ: ಮುಸ್ಲಿಂ, ಉ: ಅಟೋ ಡ್ರೈವರ್ ಸಾ: ಜಹೀರಾಬಾದ ರಾಯಚೂರು ಈತನನ್ನು ಮತ್ತು ಮುದ್ದೆಮಾಲು ಮತ್ತು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ
ಜ್ಞಾಪನ ಪತ್ರದ ನೀಡಿದ್ದರ ಮೇರೆಗೆ ಸ್ವೀಕರಿಸಿಕೊಂಡು ಸದರಿ ಪ್ರಕರಣವು ಅಂಜ್ಞೆಯ ಅಪರಾದ
ಆಗುತ್ತಿದ್ದರಿಂದ ಎನ್.ಸಿ 01/2021 ರಲ್ಲಿ ದಾಖಲಿಸಿ ಸದರಿ ಎನ್ .ಸಿ ಪ್ರಕರಣವನ್ನು ತನಿಖೆ
ನಡೆಸಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ರಾತ್ರಿ 8.40 ಗಂಟೆಗೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ದಾಳಿ
ಪಂಚನಾಮೆಯ ವಿವರದ ಸಾರಂಶವೇನಂದರೆ ಇಂದು ದಿನಾಂಕ:02.02.2021 ರಂದು ಸಾಯಂಕಾಲ 6.30 ಗಂಟೆಗೆ ಠಾಣಾ ಹದ್ದಿಯ ಶ್ರೀ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ
ಅಶೋಕನಗರಕ್ಕೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ನೇತಾಜಿ ಠಾಣೆ ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ
ಸಾಯಂಕಾಲ 7.30 ಗಂಟೆಗೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲಾಗಿ ಸದರಿಯವನು ತನ್ನ
ಹೆಸರು ಶೇಖ್ ಶಾಲಮ್ @
ಖಾನ್ ತಂದೆ ಶೇಖ್ ಮಹೆಬೂಬ್ ವ:34, ಜಾ: ಮುಸ್ಲಿಂ, ಉ: ಅಟೋ ಡ್ರೈವರ್ ಸಾ: ಜಹೀರಾಬಾದ ರಾಯಚೂರು ಅಂತಾ ಹೇಳಿದ್ದು ಇವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 2010/- ರೂಪಾಯಿಗಳು ಮತ್ತು ಒಂದು ಮಟಕಾ ನಂಬರ್ ಚೀಟಿ ಹಾಗೂ ಒಂದು ಬಾಲ್ ಪೆನ್ನು
ಸಿಕ್ಕಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ
ಜ್ಞಾಪನ ಪತ್ರವನ್ನು ನೀಡಿದ್ದರ ಮೇರೆಗೆ ನೇತಾಜಿ ನಗರ ಪೊಲೀಸ್ ಠಾಣಾ ಅಪರಾಧ ಸಂ:05/2021 ಕಲಂ.78
(3) ಕೆ.ಪಿ ಕಾಯ್ದೆ ಪ್ರಕಾರ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.