Thought for the day

One of the toughest things in life is to make things simple:

19 Feb 2017

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-



ªÀÄ»¼ÉAiÀÄgÀ ªÉÄÃ¯É zËdð£Àå ¥ÀæPÀgÀtUÀ¼À ªÀiÁ»w.
    
     ದಿನಾಂಕ 18/02/17 ರಂದು 13-00 ಗಂಟೆಗೆ   ಫಿರ್ಯಾದಿದಾರಳಾದ ಶ್ರೀಮತಿ ಮಲ್ಲಮ್ಮ ಗಂಡ ಬಸ್ಸಯ್ಯ 55 ವರ್ಷ, ಜಾತಿ ಚಲುವಾದಿ ಕೂಲಿ ಕೆಲಸ ಸಾ: ಜನತಾ ಕಾಲೋನಿ ಪೋತ್ನಾಳ ಈಕೆಯು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಈಗ್ಗೆ 2 ದಿವಸಗಳ ಹಿಂದೆ ಫಕೀರಮ್ಮಳ ಮಗನಾದ ಶೇಖರಪ್ಪ ಈತನು ತನ್ನ ಮನೆಯ ಹತ್ತಿರ ಮೂತ್ರ ವಿಸರ್ಜನೆ ಗೆಂದು ಹೋದಾಗ ಅದೇ ಸಮಯಕ್ಕೆ ಅವರ ಮನೆಯ ಹತ್ತಿರ ಆರೋಪಿತರ ಯಲ್ಲಪ್ಪ ತಂದೆ ಹನುಮಂತ ಮಾದಿಗ ಹಾಗೂ ಇತರೆ 5 ಜನರು .   ಯಶೋದಮ್ಮ ಈಕೆಯು ಸಂಡಾಸಿಗೆಂದು ಬಂದಾಗ ಯಲ್ಲಪ್ಪನನ್ನು  ನೋಡಿ ,  ಹೆಣ್ಣು ಮಕ್ಕಳು ಸಂಡಾಸು ಮಾಡುವ ಕಡೆಗೆ ಬಂದು ಮೂತ್ರ ವಿಸರ್ಜನೆ ಮಾಡುತ್ತಿಯೇನು, ಅಂತಾ ಬಾಯಿ ಮಾಡುಕೊಂಡಿದ್ದು ಇರುತ್ತದೆ. ನಂತರ ಅದೇ ವಿಷಯವಾಗಿ ನಿನ್ನೆ ದಿನಾಂಕ 17-2-2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆರೋಪಿತರು ಕೂಡಿಕೊಂಡು ಫಕೀರಮ್ಮಳ ಮನೆಯ ಹತ್ತಿರ ಬಂದು ಅವರೊಂದಿಗೆ ಜಗಳಾ ತೆಗೆದು ಬಾಯಿ ಜಗಳ ಮಾಡುವಾಗ ಆಗ ಫಿರ್ಯಾದಿ ಮತ್ತು ಫಿರ್ಯಾದಿ ಮಗ ಲಕ್ಷ್ಮಯ್ಯ ಇವರು ಜಗಳ ಬಿಡಿಸಲು ಹೋದಾಗ ಎಲ್ಲಾರು ಕೂಡಿ " ಲೇ ಬ್ಯಾಗಾರ ಸೂಳೇರೆ ಒಂದು ಬಾಟಲಿ ಕುಡಿಸಿದರೆ ಅಡ್ಡ ಮಲಗೋ ಸೂಳೇರೇ , ಅಂತಾ ಅವಾಚ್ಚವಾಗಿ ಬೈದು ಆರೋಪಿ ಯಲ್ಲಪ್ಪ ಮತ್ತು ಕರಿಯಪ್ಪ ಇವರು ಫಿರ್ಯಾದಿಗೆ ಮತ್ತು ಫಕೀರಮ್ಮಳಿಗೆ ಮೈಕೈ ಮುಟ್ಟಿ ಎಳೆದಾಡಿ ಮಾನಭಂಗ ಮಾಡಿ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ  ಮೇಲಿಂದ ಮಾನವಿ ಠಾಣೆ ಗುನ್ನೆ ನಂ 57/2017 ಕಲಂ 143,147,504,354,323,506 ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು