,
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ:13-07-2018 ರಂದು ರಾತ್ರಿ 22.30 ಗಂಟೆಗೆ ಫೋನ್ ಮೂಲಕ ರಿಮ್ಸ್ ಆಸ್ಪತ್ರೆಯಿಂದ ಸೈಯದ್ ಅತೀಕ್ ಅಹ್ಮದ್ ಎಂಬುವವನು ಹಲ್ಲೆಯಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿರುವ ಬಗ್ಗೆ
ಎಮ್.ಎಲ್.ಸಿ ಸ್ವೀಕೃತಿಯಾಗಿದ್ದು, ನಾನು ರಿಮ್ಸ್ ಆಸ್ಪತ್ರೆಗೆ ಹೋಗಿ ನೋಡಲಾಗಿ ಗಾಯಾಳು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಅಲ್ಲಿಯೇ ಹಾಜರಿದ್ದ ಪಿರ್ಯಾಧಿ ಶ್ರೀ ಸೈಯದ್ ಅಹ್ಮದ್ ಹುಸೇನ್ ತಂದೆ ಸೈಯದ್ ಜಹೀರ್ ಅಹ್ಮದ್, 24 ವರ್ಷ, ಕಾರ್ ಚಾಲಕ, ಸಾ:ಮೀರ್ ಹುಸೇನ್ ಬಾಬಾ ದರ್ಗಾದ ಹತ್ತಿರ, ಅಂದ್ರೂನ್ ಖಿಲ್ಲಾ, ರಾಯಚೂರು. (ಗಾಯಾಳುವಿನ ಅಣ್ಣ)ಈತನ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು,
ಸಾರಾಂಶವೇನೆಂದರೆ, ತನ್ನ ತಮ್ಮನಾದ ಸೈಯದ್ ಅತೀಕ್ ಅಹ್ಮದ್, 19 ವರ್ಷ ಈತನು ಮಾಡಿದ ಆರೋಪಿ ನಂಬರ್ 1 ಖಲೀಫಾ, ಸಾ:ಲಾಲ್ ಪಹಾಡಿ, ರಾಯಚೂರು ಈತನ ಸಂಬಂಧಿಕರ ಹುಡುಗಿಗೆ ಛೇಡಿಸುತ್ತಾನೆಂದು ದ್ವೇಷತಾಳಿ ದಿನಾಂಕ:13-07-2018 ರಂದು ರಾತ್ರಿ 21.30 ಗಂಟೆಗೆ ಡಿ.ಸಿ ಆಫೀಸ್ ಹತ್ತಿರವಿರುವ ಟಿಪ್ಪುಸುಲ್ತಾನ ಗಾರ್ಡನ್ ಹತ್ತಿರ ಮೇಲೆ ನಮೂದು ಮಾಡಿದ ಆರೋಪಿತರು ಪಿರ್ಯಾಧಿದಾರನ ತಮ್ಮನಿಗೆ ಕೊಲೆ ಮಾಡುವ ಉದ್ದೇಶದಿಂದ ಆರೋಪಿ ನಂಬರ್ 1 ಇವನು ಪಂಚ್ ನಿಂದ ತನ್ನ ತಮ್ಮನ ತಲೆಯ ಮುಂಭಾಗಕ್ಕೆ ಹೊಡೆದಿದ್ದು, ಮತ್ತು ಆರೋಪಿ ನಂಬರ್ 2. ಜಾಫರ್, ಸಾ:ಲಾಲ್ ಪಹಾಡಿ, ರಾಯಚೂರು ಹಾಗೂ ಇತರ 2-3 ಜನರು ಇವನು ಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಗೊಳಿಸಿದ್ದು ತಾನು ಮತ್ತು ತನ್ನ ಸಹೋದರ ಮಾವ ಸೈಯದ್ ಮೈನುದ್ದೀನ್ ಬಿಡಿಸಲು ಹೋದಾಗ ಇನ್ನುಳಿದ 2 -3 ಜನ ಆರೋಪಿತರು ತಮ್ಮಬ್ಬರಿಗೆ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ್ದು ತನ್ನ ತಮ್ಮನ ತಲೆಗೆ ಭಾರಿ ಪೆಟ್ಟಾಗಿದ್ದರಿಂದ ಆತನು ಮಾತಾನಾಡುವ ಸ್ಥಿತಿಯಲ್ಲಿರುವುದಿಲ್ಲ. ಇನ್ನುಳಿದ 2 -3 ಜನರಿಗೆ ಪುನ: ನೋಡಿದಲ್ಲಿ ತಾನು ಗುರುತಿಸುವುದಾಗಿ ಮತ್ತು ತನ್ನ ತಮ್ಮನು ಎಚ್ಚರವಾದ ನಂತರ ಅವರು ಯಾರೆಂಬುದು ಗೊತ್ತಾಗುತ್ತದೆ. ಖಲೀಫಾ, ಜಾಫರ್ ಹಾಗೂ ಇನ್ನುಳಿದ 2- 3 ಜನರ ವಿರುದ್ಧ ಕಾನೂನು ಪ್ರಕಾರ ಕೇಸ್ ಮಾಡಬೇಕೆಂದು ಮುಂತಾಗಿ ನೀಡಿದ ಹೇಳಿಕೆ ಪಿರ್ಯಾಧಿಯನ್ನು ಪಡೆದುಕೊಂಡು ಇಂದು
ದಿನಾಂಕ:14-07-2018 ರಂದು 00:15
ಗಂಟೆಗೆ ವಾಪಸ್ ಠಾಣೆಗೆ ಬಂದು ಸದರ ಬಜಾರ್ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 81/2018 ಕಲಂ: 504, 323, 324, 307, 506 ಸಹಿತ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:
14/07/2018 ರಂದು 11-00 ಎ.ಎಮ್ ದ ಸುಮಾರಿಗೆ ಪಿರ್ಯಾದಿ ಕಟ್ಟೆಪ್ಪ ತಂದೆ ರಂಗಪ್ಪ ವ:
45 ವರ್ಷ
ಜಾ: ನಾಯಕ ಉ:
ಒಕ್ಕಲುತನ
ಸಾ: ಬಾಗಲವಾಡ
ಕಟ್ಟೆಪ್ಪ ತಂದೆ ರಂಗಪ್ಪ ವ: 45 ವರ್ಷ ಜಾ: ನಾಯಕ ಉ:
ಒಕ್ಕಲುತನ
ಸಾ: ಬಾಗಲವಾಡ
ತಾ: ಮಾನವಿ
ರವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ನೀಡಿದ್ದರ ಸಾರಾಂಶವೇನೆಂದರೇ ದಿನಾಂಕ:
13/07/2018 ರಂದು 01-30 ಪಿ.ಎಮ್ ದ ಸುಮಾರಿಗೆ ಸಿಂಧನೂರ
ಗಂಗಾವತಿ ರಸ್ತೆಯ ಎ.ಕೆ ಗೋಪಾಲ ನಗರ ಕ್ರಾಸ್ ಹತ್ತಿರದ ತ್ರಿಭವನ ಹೊಂಡಾ ಶೋ ರೂಂ ಮುಂದಿನ ರಸ್ತೆಯಲ್ಲಿ ಮೋಟರ್ ಸೈಕಲ್ ನಂ-ಕೆ.ಎ-36-ಇಎಮ್-8392 ನೇದ್ದನ್ನು ಫಿರ್ಯಾದಿಯ ಅಳಿಯನಾದ ಕನಕರಾಯ ತನ್ನ
ಮೋಟರ ಸೈಕಲ್ ಹಿಂದುಗಡೆ ಬೊಸರಾಜನನ್ನು ಕೂಡಿಸಿಕೊಂಡು ಚಲಾಯಿಸಿಕೊಂಡು ರಸ್ತೆಯ ಎಡಗಡೆಯಲ್ಲಿ
ಹೋಗುತ್ತಿರುವಾಗ ಹಿಂದಿನಿಂದ ಕಂಟೆನರ್ ಟ್ರಕ್ಕ್ ಲಾರಿ ನಂ ಕೆ.ಎ-51-ಎ-5484
ನೇದ್ದರ
ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಮೋಟರ್ ಸೈಕಲಿಗೆ ಹಿಂದಿನಿಂದ ಟಕ್ಕರ ಕೊಟ್ಟ ಪರಿಣಾಮ
ಫಿರ್ಯಾದಿಯ ಮಗ ಬೊಸರಾಜ ಮತ್ತು ಕನಕರಾಯ ಇಬ್ಬರೂ ಮೋಟರ್ ಸೈಕಲ್ ಸಮೇತ ಕೆಳಗೆ ಬಿಳಲು
ಕನಕರಾಯನಿಗೆ ಎಡಗೈ ತೋಳಿಗೆ.ಎಡಗಾಲ ಮೋಣಕಾಲಿಗೆ ರಕ್ತಗಾಯವಾಗಿದ್ದು ಬೊಸರಾಜನಿಗೆ ತಲೆಗೆ,ಎದೆಗೆ,ಒಳಪೆಟ್ಟು
ಬಲಗೈಯ ಮೌಂಸ ಕಿತ್ತಿಹೋಗಿದ್ದು ಎಡಗಾಲಿ ತೊಡೆಗೆ ರಕ್ತಗಾಯಗಳಾಗಿದ್ದು ಇರುತ್ತದೆ. ಅಂತ
ನೀಡಿದ ಗಣಕೀಕೃತ ದೂರಿನ ಮೇಲಿಂದ ಠಾಣಾ ಸಿಂಧನೂರು ಪೊಲೀಸ್ ಠಾಣೆ ಗುನ್ನೆ
ನಂ 40/2018 ಕಲಂ 279 ,337 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿರುತ್ತಾರೆ.