-:: ಪತ್ರಿಕಾ ಪ್ರಕಟಣೆ
::-
-:: ಕುಖ್ಯಾತ ಅಂತರ್ ರಾಜ್ಯ ಕಳ್ಳರ ಬಂಧನ ::-
ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ವೃತ್ತದ ಹದ್ದಿಯ ಯರಮರಸ್ ಕ್ಯಾಂಪ್, ಚಿಕ್ಕಸೂಗೂರು, ಮನ್ಸಲಾಪೂರು ಸೀಮಾಂತರಗಳಲ್ಲಿ ಮತ್ತು ರಾಯಚೂರು ನಗರದ ಮಾರ್ಕೆಟ್ ಯಾರ್ಡ್ ಠಾಣಾ ಹದ್ದಿಯ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚಿಗೆ ಜರುಗಿದ ಕಳ್ಳತನಗಳ ಪತ್ತೆಗಾಗಿ ಡಿ.ಕಿಶೋರ ಬಾಬು IPS ಜಿಲ್ಲಾ ಪೊಲೀಸ್
ಅಧೀಕ್ಷಕರು ರಾಯಚೂರು, ಎಸ್.ಬಿ. ಪಾಟೀಲ್ ಹೆಚ್ಚುವರಿ
ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಜಿ.ಹರೀಶ ಪೊಲೀಸ್ ಉಪಾಧೀಕ್ಷರು ರಾಯಚೂರು ರವರ ಮಾರ್ಗದರ್ಶನದಲ್ಲಿ
ಹನುಮರಡ್ಡೆಪ್ಪ ಸಿ.ಪಿ.ಐ. ಗ್ರಾಮೀಣ ವೃತ್ತ ರಾಯಚೂರು ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ನಾಗಪ್ಪ ಸಿ.ಹೆಚ್.ಸಿ.74, ರವಿರಾಜ ಸಿ.ಹೆಚ್.ಸಿ.320, ಗೋಪಾಲ ಹೆಚ್.ಸಿ.135, ಡಾಕಪ್ಪ ಸಿಪಿಸಿ 391 ಹಾಗೂ ವಿಜಯೇಂದ್ರ ರೆಡ್ಡಿ ಸಿಪಿಸಿ 494 ಇವರನ್ನೊಳಗೊಂಡ ವಿಶೇಷ
ತಂಡವನ್ನು
ರಚಿಸಿದ್ದರು.
ಈ ತಂಡವು ಹಗಲಿರಳು
ಶ್ರಮಿಸಿ ಈ ಕೆಳಕಂಡ ಇಬ್ಬರು ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ
ಯಶಸ್ವಿಯಾಗಿ ಅವರಿಂದ 64 ಗ್ರಾಮ್ ಬಂಗಾರದ ಆಭರಗಳು ಅ.ಕಿ.ರೂ.1,92,000/-, 250 ಗ್ರಾಮ್ ಬೆಳ್ಳಿ ಆಭರಣಗಳು ಅ.ಕಿ.ರೂ.15000/- ಮತ್ತು ನಗದು ಹಣ ರೂ.1,70,000/- ಹೀಗೆ ಎಲ್ಲಾ ಸೇರಿ ಒಟ್ಟು 3,77,000/- ಬೆಲೆ ಬಾಳುವ
1] ಬಾಲು ದೇವಿದಾಸ್ ಕಾಳೆ ತಂದೆ ದೇವಿದಾಸ್ ಕಾಳೆ ವ||38ವರ್ಷ, ಜಾ||ಹಿಂದು ಪಾರ್ಧಿ, ಉ||ತೂಫಾನ್ ಕ್ರೂಜರ್ ಚಾಲಕ ಕೆಲಸ ಸಾ||ತಳೆ ಹಿಪ್ಪರಗ, ತಾ||ಉತ್ತರ ಸೋಲಾಪೂರು, ಜಿ||ಸೋಲಾಪೂರು ಫೋನ್ ನಂ:8862016175
2] ಸಾಗರ ಭಾರತ್ ಪವಾರ್ ತಂದೆ ಭಾರತ್ ಪವಾರ್ ವ||24ವರ್ಷ, ಜಾ||ಹಿಂದು ಪಾರ್ಧಿ, ಉ||ಸಫಾಯಿ ಕರ್ಮಚಾರಿ ಸಾ||ಮಾಹಿ ನಗರ, ತಾ||ಮಾಳೀಸಿರಸ್, ಜಿ||ಸೋಲಾಪೂರು ರಾಜ್ಯ||ಮಹಾರಾಷ್ಟ್ರ, ಫೋನ್ ನಂ: 8600907765
ಇವರು ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ
ವ್ಯಾಪ್ತಿಯಲ್ಲಿ ಬರುವ ಯರಮರಸ್ ಕ್ಯಾಂಪ್ ನ ಮನೆಗಳ, ಚಿಕ್ಕಸೂಗೂರು, ಮನ್ಸಲಾಪೂರು ಸೀಮಾಂತರಗಳಲ್ಲಿಯ ಫ್ಯಾಕ್ಟರಿಗಳ ಹಾಗೂ ರಾಯಚೂರು ನಗರದ ಮಾರ್ಕೆಟ್ ಯಾರ್ಡ್ ಠಾಣಾ ಹದ್ದಿಯ ಕೈಗಾರಿಕಾ ಪ್ರದೇಶದಲ್ಲಿಯ ಕಾರ್ ಶೋ ರೂಮ್, ಗ್ರಾನೈಟ್ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡಿದ್ದು ಒಟ್ಟು 13 ಪ್ರಕರಣಗಳು ಪತ್ತೆಯಾಗಿದ್ದು ಇವರಿಂದ ಕದ್ದ ಮಾಲನ್ನು
ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ಎಸ್.ಪಿ. ಮತ್ತು ಹೆಚ್ಚುವರಿ ಎಸ್.ಪಿ. ರಾಯಚೂರು ರವರು
ಶ್ಲಾಘಿಸಿದ್ದಾರೆ.