Thought for the day

One of the toughest things in life is to make things simple:

19 Oct 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

     ದಿನಾಂಕ: 18.10.2020 ರಂದು 5-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಹಟ್ಟಿ ವಿರುಪಾಪೂರು ರಸ್ತೆಯಲ್ಲಿ ಬರುವ ಕೆನಾಲ್ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 1) ಖೈಯುಮ ಸಾಬ್ ತಂದೆ ಖಾದರಸಾಬ್, ವಯಾ: 38 ವರ್ಷ, ಸಾ: ಏಕಮಿನಾರ ಮಸೀದಿ ಹತ್ತಿರ, ಪಟೇಲವಾಡಿ, ಸಿಂಧನೂರು ಹಾಗೂ ಇತರೆ 5 ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ ನಂ 01 ರಿಂದ 04 ಜನ ಸಿಕ್ಕಿ ಬಿದ್ದಿದ್ದು, ಆರೋಪಿ ನಂ 05 ಮತ್ತು 06 ರವರು ಓಡಿ ಹೋಗಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 5120/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 89/2020, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಕರ್ನಾಟಕ ಪ್ರೀವೆಷನ್ ಆಫ್ ಕೌ ಸ್ಟಾಟರ್ & ಕ್ಯಾಟಲ್ ಪ್ರೀಜರ್ ವೇಷನ್ ಕಾಯ್ದೆ ಪ್ರರಕಣದ ಮಾಹಿತಿ.

            ದಿನಾಂಕ 18.10.2020 ರಂದು ರಾತ್ರಿ 7.30 ಗಂಟೆಗೆ ಗುರಗುಂಟಾದ ಪವನ್ ಡಾಬಾದ ಹತ್ತಿರ ಆರೋಪಿ ಅನ್ನು ತಂದೆ ನಬಿಸಾಬ ಗುಡಗುಂಟಿ ವಯಾ: 32 ವರ್ಷ ಜಾ: ಮುಸ್ಲಿಂ ಉ: ಚಾಲಕ ಸಾ: ವನದುರ್ಗಾ ತಾ: ಶಹಾಪೂರು ಈತನು ಅಶೋಕ್ ಲೈಲ್ಯಾಂಡ್ ಗಾಡಿ ನಂ ಕೆ.ಎ 33 ಎ 2537 ನೇದ್ದರಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಎತ್ತುಗಳನ್ನು ಸಾಗಿಸಲು ಅನುಮತಿ ಪಡೆಯದೇ, ಹಾಗೂ ಯಾವುದೇ ಸಮರ್ಪಕ ದಾಖಲಾತಿಗಳು ಇಲ್ಲದೇ 5 ಎತ್ತುಗಳನ್ನು ಅಕ್ರಮವಾಗಿ ತುಂಬುಕೊಂಡು ಬರುತ್ತಿದ್ದಾಗ ಪಿ.ಎಸ್.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿ ಚಾಲಕನಿಗೆ ಮತ್ತು ಗಾಡಿಯನ್ನು ವಶಕ್ಕೆ ಪಡೆದುಕೊಂಡು ವಾಪಾಸ್ ಠಾಣೆಗೆ ಬಂದು ಜಪ್ತಿ ಪಂಚನಾಮೆ, ಒಬ್ಬ ಆರೋಪಿ ಮತ್ತು ವರದಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 139/2020 ಕಲಂ 5,8,11. ಕರ್ನಾಟಕ ಪ್ರೀವೆಷನ್ ಆಫ್ ಕೌ ಸ್ಟಾಟರ್ & ಕ್ಯಾಟಲ್ ಪ್ರೀಜರ್ ವೇಷನ್ ಕಾಯ್ದೆ ಪ್ರರಕಣದ 1964 ರ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.