Thought for the day

One of the toughest things in life is to make things simple:

4 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:
   ಆರೋಪಿ ರವಿ ತಂದೆ ರಾಮಜಪ್ಪ -24 ವರ್ಷ,  ಜಾ: ಮರಾಠ, :ಸಿಂಧನೂರಿನ ಅಮರದೀಪ್ ಬಟ್ಟೆ ಅಂಗಡಿಯಲ್ಲಿ ಕೆಲಸ , ಸಾ: ಗುಂಜಳ್ಳಿ, ಮೊಬೈಲ್ ನಂ. 9880547125 ಬಳಕೆದಾರನಾದ ಇತನು ಸಿಂಧನೂರಿನ ಅಮರದೀಪ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆಗೆ , ದಿನಾಂಕ :24-06-2020 ರಂದು ಕೋವಿಡ್-19 ಸೊಂಕು ದೃಢಪಟ್ಟಿದ್ದರಿಂದ ಕರ್ನಾಟಕ ಸರಕಾರವು ಹೊರಡಿಸಿರುವ ನಿಯಾಮವಳಿ ಅನುಸಾರವಾಗಿ ಅಂಗಡಿಯನ್ನು ಸೀಲ್ ಮಾಡಿದ್ದಲ್ಲದೇ  ಕೆಲಸಗಾರರಿಗೆ ಗಂಟಲು ದ್ರವವನ್ನು ಪರೀಕ್ಷೆ ಕುರಿತು ತೆಗೆದುಕೊಂಡು ಮನೆಯಲ್ಲಿ ಕ್ವಾರೇಂಟೈನ್ ನಲ್ಲಿ ಇರುವಂತೆ ಆದೇಶ ಮಾಡಿದರೂ ಸಹ  ಈತನು ರಾಜ್ಯ ಸರಕಾರವು ತೆಗೆದುಕೊಂಡಿರುವ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿ ದಿನಾಂಕ : 28-06-2020 ರಂದು ಮತ್ತು  29-06-2020 ರಂದು ಹಾಗೂ ದಿ-30-06-2020 ರಂದು 3 ದಿವಸ ಹೋಂ ಕ್ವಾರೆಂಟೈನ್ ನಿಂದ ಹೊರಗಡೆ ಹೋಗಿ ಸಾರ್ವಜನಿಕರ ಮದ್ಯೆ ಸಂಚರಿಸಿ ಮದುವೆ ಹಾಗೂ ಇತರೆ ಸಾರ್ವಜನಿಕ ಸಮಾರಂಭದಲ್ಲಿ ಬಾಗವಹಿಸಿ ಕೃತ್ಯವೆಸಗಿದ್ದು ಮತ್ತು ಆತನಿಗೆ ದಿನಾಂಕ: 01-07-2020 ರಂದು ಕೋವಿಡ್ -19  ಇರುವುದು ದೃಡಪಟ್ಟಿದ್ದುದರಿಂದ ಚಿಕಿತ್ಸೆ  ಕುರಿತು ರಾಯಚೂರು ಕೋವಿಡ್  -19 ಆಸ್ಪತ್ರೆಗೆ ಸ್ಥಳಾಂತರಿಸಿ ಮನೆ & ಏರಿಯಾವನ್ನು ಸೀಲಡೌನ್  ಮಾಡಿದ್ದು ಇರುತ್ತದೆ . ಸದರಿ ವ್ಯಕ್ತಿಯು ಹೋಂ ಕ್ವಾರೆಂಟೈನ್  ನಿಯಮ ಉಲ್ಲಂಘನೆ ಮಾಡಿದ್ದರಿಂದ ಸದ್ರಿಯವನ ವಿರುದ್ದ ಪ್ರ ..ವರದಿ ಜಾರಿ ಮಾಡಿ  ತುರುವಿಹಾಳ್ ಠಾಣೆಯಲ್ಲಿ 94/2020 U/s  269 IPC  ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಮಟಕಾ ಪ್ರಕರಣದ ಮಾಹಿತಿ :
       ಇಂದು ದಿನಾಂಕ  03-07-2020 ರಂದು ರಾತ್ರಿ 7-30 ಗಂಟೆಗೆ ಪಿ.ಎಸ್, ಸಾಹೇಬರು ಒಬ್ಬ ಆರೋಪಿ ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 7-45 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ  03-07-2020 ರಂದು ಮಾನವಿ ಠಾಣಾ ವ್ಯಾಪ್ತಿಯ ಪೋತ್ನಾಳ ಗ್ರಾಮದ ಜ್ಞಾನ ಭಾರತಿ ಶಾಲೆ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ  ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಅಮರೇಶ ತಂದೆ ಈರಪ್ಪ ವಯಾಃ 65 ವರ್ಷ ಜಾತಿಃ ಲಿಂಗಾಯತ ಉಃ ಹೊಟೇಲ್ ಕೆಲಸ ಸಾಃ ಜನತಾ ಕಾಲೋನಿ ಪೋತ್ನಾಳ ತಾಃ ಮಾನವಿ ಈತನ ಮೇಲೆ ಇಂದು ಸಂಜೆ 6-00 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಂದ  1] ಮಟಕಾ ಜೂಜಾಟದ ನಗದು ಹಣ ರೂ  2270/-  2]  ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು  ಪಿ.ಎಸ್.  ಜಪ್ತಿ ಮಾಡಿಕೊಂಡು ಇಂದು ಸಂಜೆ 6-00 ಗಂಟೆಯಿಂದ ರಾತ್ರಿ 7-00 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತನ ಮೇಲೆ ಠಾಣೆ ಎನ್.ಸಿ.ಆರ್. ನಂ 32/2020 ರಲ್ಲಿ ನೊಂದಾಯಿಸಿಕೊಂಡು ಪಿ.ಎಸ್.ಐ  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಪಿ.ಎಸ್.ಐ ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ರಾತ್ರಿ 8-30 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 111/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಗೊಂಡಿರುತ್ತಾರೆ

            ದಿನಾಂಕ:03-07-2020 ರಂದು 21-00 ಗಂಟೆಗೆ ಪಿಎಸ್ಐ [ಅವಿ] ರವರು ಮೂಲ ದಾಳಿ ಪಂಚನಾಮೆಯೊಂದಿಗೆ, ಮುದ್ದೆಮಾಲು, ಆರೋಪಿತರನ್ನು ಹಾಜರುಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ದೂರುನೀಡಿದ್ದು, ಸಾರಾಂಶವೇನೆಂದರೆ, ತಾವು ದಿನಾಂಕ: 03.06.2020 ರಂದು 18-45 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯಲ್ಲಿಯ ಮಡ್ಡಿಪೇಟೆಯ ವೀರಗೌಡ ಕಾಲೋನಿ ಕಡೆ ಹೋಗುವ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 1] ] ನಾಗಪ್ಪ 2] ಶ್ರೀನಿವಾಸ ಹಾಗು ಸಿಬ್ಬಂದಿಯಾದ ಹೆಚ್.ಸಿ 58, ಪಿ.ಸಿ.423,479 ರವರೊಂದಿಗೆ 19-15 ಗಂಟೆಗೆ ಲ್ಯಾಪಟಾಪ, ಪ್ರಿಂಟರ್ ತೆಗೆದುಕೊಂಡು ಅವರವರ ಬೈಕ್ ಗಳಲ್ಲಿ  ಕರೆದುಕೊಂಡು ಹೋಗಿ 19-30 ಗಂಟೆಗೆ ಮಡ್ಡಿಪೇಟೆಯ ವೀರನಗೌಡ ಕಾಲೋನಿ ಕಡೆ ಹೋಗುವ ರಸ್ತೆ ತಲುಪಿ ಅಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ವೀರನಗೌಡ ಕಾಲೋನಿ ಕಡೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ಜನರಿಗೆ ಮಟಕಾ ನಂಬರ್ ಬರೆಯಿಸಿರಿ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗಿ ಕರೆದು ಜನರಿಂದ ಹಣವನ್ನು ಪಡೆದು ನಂಬರ್ ಬರೆದು ಕೊಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಎಲ್ಲಾರು ಸೇರಿ 19-45 ಗಂಟೆಗೆ ದಾಳಿ ಮಾಡಿ ಸದರಿಯವನನ್ನು  ವಿಚಾರಿಸಲು ತನ್ನ ಹೆರು ಶಾಹೀದ್ @ ಅಸ್ಲಾಂ ತಂದೆ ವಾಹೀದ್, ವಯಾ:25 ವರ್ಷ, ಜಾ: ಮುಸ್ಲೀಂ, : ಚಿಕನ್ ಅಂಗಡಿಯಲ್ಲಿ ಕೆಲಸ, ಸಾ: ಗದ್ವಾಲ್ ರೋಡ್ ಮಡ್ಡಿಪೇಟೆ ರಾಯಚೂರು ಅಂತಾ ತಿಳಿಸಿದ್ದು ಸದರಿಯವನ  ಅಂಗ ಜಡ್ತಿ ಮಾಡಲಾಗಿ ಇವನ ಹತ್ತಿರ 1) ನಗದು ಹಣ 2640 /-ರೂ, 2) ಒಂದು ಮಟ್ಕಾ ಚೀಟಿ 3) ಒಂದು ಬಾಲಪೆನ ದೊರೆತಿದ್ದುಇರುತ್ತದೆ. ಸದರಿ ಮಟಕಾ ಚೀಟಿಯನ್ನು ಬಾಬು ಪಿಂಜಾರವಾಡಿ ಇವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ,ನಂತರ ಪಂಚರ ಸಮಕ್ಷಮದಲ್ಲಿ ಒಟ್ಟು ನಗದು ಹಣ 2640/- ರೂ ಗಳನ್ನು ಮತ್ತು 1 ಮಟಕಾ ಚೀಟಿ,  1 ಬಾಲ್ ಪೆನ್ ಗಳನ್ನು ಒಂದು ಕವರಿನಲ್ಲಿ ಹಾಕಿ ಸೀಲ್ ಮಾಡಿ ಪಂಚರ ಸಹಿ ಚೀಟಿಯನ್ನು ಅಂಟಿಸಿ, ಜಪ್ತಿ ಮಾಡಿಕೊಂಡು ಮುಂದಿನ ಕಾನೂನು ಕ್ರಮ ಕುರಿತು ಆರೋಪಿತನನ್ನು ವಶಕ್ಕೆ ತೆಗೆದುಕೊಂಡರು. ದಿನಾಂಕ: 03.07.2020 ರಂದು 19-45 ಗಂಟೆಯಿಂದ 20-45 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 21-00 ಗಂಟೆಗೆ ವಾಪಸ್ ಠಾಣೆಗೆ ಬಂದು ಮೂಲದಾಳಿ ಪಂಚನಾಮೆಯೊಂದಿಗೆ ಆರೋಪಿತನನ್ನು ಹಾಗು ಮುದ್ದೆಮಾಲು ಮುಂದಿನ ಕಾನೂನು ಕ್ರಮ ಕುರಿತು ಹಾಜರುಪಡಿಸಿ ದೂರನ್ನು ನೀಡಿದ್ದು ಇರುತ್ತದೆ, ಅಂತಾ ಮುಂತಾಗಿ ಇರುವ ದೂರಿನ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ.18/2020 ಪ್ರಕಾರ ದಾಖಲಿಸಿಕೊಂಡು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ 22-25  ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣಾ ಗುನ್ನೆನಂ.72/2020 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಮಾರ್ಕೆಟಯಾರ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.