ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtzÀ ªÀiÁ»w.
ದಿನಾಂಕ 22-07-2018 ರಂದು
13-30 ಗಂಟೆಗೆ ಫಿರ್ಯಾದಿ
ಮಹಾಂತೇಶ ತಂದೆ ರಾಮಲಿಂಗಪ್ಪ ವಯಾಃ
31 ವರ್ಷ ಜಾತಿಃ ಲಿಂಗಾಯತ ಉಃ ವ್ಯಾಪಾರ ಸಾಃ ಕರೆಗುಡ್ಡ ತಾಃ ಮಾನವಿ ಹಾಃವ ನೆಲಮಂಗಲ ಬೆಂಗಳೂರು. ಈತನು
ಠಾಣೆಗೆ ಹಾಜರಾಗಿ
ಒಂದು ಗಣಕೀಕೃತ
ಫಿರ್ಯಾದಿಯನ್ನು ತಂದು
ಹಾಜರಪಡಿಸಿದ್ದು ಅದರ
ಸಾರಾಂಶವೆನೆಂದರೆ ಫಿರ್ಯಾದಿದಾರನು ಬೆಂಗಳೂರಿನಲ್ಲಿ ಕಬ್ಬಿಣ ಕಂಪನಿಯ
ಕಚ್ಚಾ ಪೌಡರನ್ನು ಲಾರಿಗಳ ಮುಖಾಂತರ ಹೊಸಪೇಟೆಯ ಕಲ್ಯಾಣ ಸ್ಟಿಲ್ ಎಸ್.ಎಲ್.ಆರ್
ಕಂಪನಿಗೆ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು ಈ
ಕಂಪನಿಯ ಆಫೀಸ್ ಬಳ್ಳಾರಿಯ ಮಹಾವೀರ ಟ್ರಾನ್ಸಪೋರ್ಟನಲ್ಲಿ ಇದ್ದು ಸದರಿಯವರು ಫಿರ್ಯಾದಿದಾರನಿಗೆ ಕಚ್ಚಾ
ಪೌಡರ್ ಸಾಗಿಸಿದ ಲಾರಿ ಬಾಡಿಗೆ ಮತ್ತು ಜೆ.ಸಿ.ಬಿ ಲೊಂಡಿಗ್ ಖರ್ಚು 6 ಲಕ್ಷ
ರೂಪಾಯಿ ಕೊಡುವುದು ಇದ್ದುದ್ದರಿಂದ ದಿನಾಂಕ 21-07-2018 ರಂದು
ಟ್ರಾನ್ಸಪೋರ್ಟನವರು ತನಗೆ ಕೊಡಬೇಕಾದ 6 ಲಕ್ಷ ರೂಪಾಯಿ ಹಣ ಕೊಡುವುದಾಗಿ ತಿಳಿಸಿದ್ದರಿಂದ ಆತನು ಬೆಂಗಳೂರಿನಿಂದ
ತನ್ನ ಕ್ರಿಯೆಟಾ ಕಾರ್ ನಂ
ಕೆ.ಎ 02 ಎಮ್.ಎಮ್-1498 ನೇದ್ದನ್ನು ತಾನೇ
ಚಾಲನೇ ಮಾಡಿಕೊಂಡು ಬಳ್ಳಾರಿಗೆ ರಾತ್ರಿ 8-30 ಗಂಟೆಯ
ಸುಮಾರಿಗೆ ಬಂದು ಬಳ್ಳಾರಿಯ ಮಹಾವೀರ ಟ್ರಾನ್ಸ
ಪೋರ್ಟನಲ್ಲಿ ನಗದು ಹಣ 6 ಲಕ್ಷ
ರೂಪಾಯಿಯನ್ನು ಪಡೆದುಕೊಂಡು ತನ್ನ ಕಾರಿನಲ್ಲಿ
ಇಟ್ಟುಕೊಂಡು ಬಳ್ಳಾರಿಯಿಂದ ಮಾನವಿ ತಾಲುಕಿನ ಕರೆಗುಡ್ಡ ಗ್ರಾಮಕ್ಕೆ ಸಿಂದನೂರು- ರಾಯಚೂರು ಮುಖ್ಯ ರಸ್ತೆಯ ಮೇಲೆ ತನ್ನ ಕಾರಿನಲ್ಲಿ ಬರುತ್ತಿರುವಾಗ ನಿದ್ದೆ
ಬರುತಿದ್ದರಿಂದ ದಿನಾಂಕ 22-07-2018 ರಂದು
ರಾತ್ರಿ 01-00 ಗಂಟೆಯ ಸುಮಾರಿಗೆ
ಜವಳಗೇರಾ ಗ್ರಾಮದ ನಿರಾವರಿ ಇಲಾಖೆಯ ಪಕ್ಕದ ಬಯಲು ಜಾಗೆಯಲ್ಲಿ ತನ್ನ ಕಾರನ್ನು ನಿಲ್ಲಿಸಿ 6
ಲಕ್ಷ ರೂಪಾಯಿ ನಗದು ಹಣವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ
ಹಾಕಿ ಡ್ರೈವರ್ ಕುಳಿತುಕೊಳ್ಳುವ ಸೀಟಿನ ಕೆಳಗಡೆ ಇಟ್ಟು ಕಾರಿನ ಗ್ಲಾಸ್ ಸ್ವಲ್ಪ
ಇಳಿಸಿ ಕಾರಿನಲ್ಲಿಯೇ ಮುಂದಿನ ಸಿಟಿನಲ್ಲಿ ಮಲಗಿಕೊಂಡಿರುವಾಗ ರಾತ್ರಿ 1-20 ಗಂಟೆಯ ಸುಮಾರಿಗೆ ಯಾವುದೋ ಶಬ್ದಕ್ಕೆ ಎಚ್ಚರವಾಗಿ
ಎದ್ದು ನೋಡಲಾಗಿ ಯಾರೊ ತನ್ನ
ಕಾರಿನ ಪಕ್ಕದಲ್ಲಿಂದ ಹೊಲದ ಕಡೆಗೆ ಹೋಗುತ್ತಿದ್ದಂತೆ ಕಂಡು ಬಂದಿದ್ದರಿಂದ ಅನುಮಾನಗೊಂಡು
ಸೀಟಿನ ಕೆಳಗಡೆ ತಾನು ಇಟ್ಟಿದ್ದ 6 ಲಕ್ಷ ರೂಪಾಯಿ ಹಣವನ್ನು ನೋಡಿಕೊಳ್ಳಲಾಗಿ ಇರಲಿಲ್ಲ ಆಗ
ಗಾಬರಿಯಾಗಿ ಎಲ್ಲ ಕಡೆಗೆ ಹುಡುಕಾಡಲಾಗಿ ಎಲ್ಲಿಯೂ
ತಾನು ಇಟ್ಟಿದ್ದ 6 ಲಕ್ಷ ರೂಪಾಯಿ ಹಣ ಇರಲಿಲ್ಲ.
ದಿನಾಂಕ 22-07-2018 ರಂದು
ರಾತ್ರಿ 1-00 ಗಂಟೆಯಿಂದ ರಾತ್ರಿ 1-20 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಾರಿನ ಡ್ರೈವರ್ ಸೀಟಿನ ಕೆಳಗಡೆ
ಇಟ್ಟಿದ್ದ 6 ಲಕ್ಷ ರೂಪಾಯಿ ನಗದು
ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ . ಕಾರಣ
ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಠಾಣಾ ಗುನ್ನೆ ನಂ 102/2018 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ಪಿರ್ಯಾದಿ ±ÁAvÀªÀÄä
UÀAqÀ §¸ÀªÀgÁd 30 ªÀµÀð eÁ-«ÃgÀ±ÉʪÀ °AUÁAiÀÄvÀ G-ºÉÆ®ªÀÄ£É PÉ®¸À ¸Á-PÀªÀÄ䮢¤ß ಈಕೆಗೆ ಕಮಲದಿನ್ನಿ ಸೀಮಾಂತರದಲ್ಲಿ ಹೊಲವಿದ್ದು, ಸದರಿ ಹೊಲದಲ್ಲಿ ಇರುವ ಬಾವಿಗೆ ವಿದ್ಯುತ್ ಪಂಪ್ ಸೆಟ್ ಅಳವಡಿಸಿ ಬೆಳೆಯನ್ನು ಬೆಳೆಯುತ್ತಿದ್ದು, ನಿನ್ನೆ ದಿನಾಂಕ.21.07.2018 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಪಿರ್ಯಾದಿದಾರಳ ಗಂಡನಾದ ಮೃತ ಬಸವರಾಜನು ಪಂಪ್ ಸೆಟ್ ಚಾಲುವು ಮಾಡಿ ಬರಲು ಹೊಲಕ್ಕೆ ಹೋಗಿ ಬರುತ್ತೆನೆಂದು ಪಿರ್ಯಾದಿದಾರಳಿಗೆ ಹೇಳಿ ಹೋಗಿದ್ದು, ಮನಗೆ ಮರಳಿ ಬಂದಿರುವದಿಲ್ಲ. ಇಂದು ದಿನಾಂಕ.22.07.2018 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರಳು ತಮ್ಮ ಹೊಲಕ್ಕೆ ಹೋಗಿ ನೋಡಲಾಗಿ ತನ್ನ ಗಂಡನು ಹೊಲದಲ್ಲಿಯ ಬಾವಿಯ ಹತ್ತಿರ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದು ಇರುತ್ತದೆ. ಮೃತನ ಮರಣದ ಬಗ್ಗೆ ಯಾರ ಮೇಲೆ ಸಂಶಯವಿರುವದಿಲ್ಲ ಅಂತಾ ಇತ್ಯಾದಿಯಾಗಿ
ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 10/2018 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತರೆ.