ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ದಿನಾಂಕ:03-09-2018
ರಂದು ರಾತ್ರಿ 20.00 ಗಂಟೆಗೆ ಪಿರ್ಯಾದಿದಾರರಾದ ಚಂದ್ರಶೇಖರ್ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ,
ವಾರ್ಡ ನಂಬರ್ 14 ರ ಕಾಂಗ್ರೇಸ್ ಅಭ್ಯರ್ಥಿಯಾದ ಪ್ರಶಾಂತಕುಮಾರ ಜಾ:ಕಬ್ಬೇರ್ (ಬೆಸ್ತರು)
ಈತನ ಸೋಲಿನಿಂದ ಈತನ ಬಲಗೈ ಬಂಟರಾದ ವಾಸುದೇವ ಹಾಗೂ ಇತರೆ
7 ಜನ ಆರೋಪಿತರೆಲ್ಲರೂ ಕೂಡಿಕೊಂಡು ಇಂದು ಮಧ್ಯಾಹ್ನ
3.00 ಗಂಟೆಗೆ ಪಿರ್ಯಾಧಿದಾರರ ಹೊಟೇಲ್ ಗೆ ಬಂದು,
ಪಿರ್ಯಾಧಿದಾರನಿಗೆ ದೊಣ್ಣೆಗಳಿಂದ ಹೊಡೆದು ಆತನ ಚಿಕ್ಕಮ್ಮಳಾದ ಶಂಶಾಲಮ್ಮಳಿಗೆ ಆರೋಪಿತರ ಪೈಕಿ ರಾಕೇಶ ಹಾಗೂ ಉಪ್ಪಿ ಇವರುಗಳು ಸೀರೆಯನ್ನು ಎಳೆದಾಡಿ ಸೂಳೇ ಎಂದು ಅವಾಚ್ಯವಾಗಿ ಬೈದಾಡಿ, ನಿನ್ನ ಬಿಡುವುದಿಲ್ಲವೆಂದು ಹೆದರಿಸಿ ಹೊಡೆದಿದ್ದಲ್ಲದೇ ಹೊಟೇಲ್ ದಲ್ಲಿದ್ದ ಗ್ರಾಹಕರಿಗೆ ಹೊಡೆದು, ಟೇಬಲ್ ಮೇಲಿದ್ದ ಗ್ಲಾಸ್,
ಅನ್ನ ಎಸೆದು ದಾಂಧಲೆ ಮಾಡಿರುತ್ತಾರೆ. ಪ್ರಶಾಂತ ಕುಮಾರ ರವರ ಕುಮ್ಮಕ್ಕಿನಿಂದ ತನಗೆ ಕೊಲೆ ಮಾಡಲು ಸಂಚು ಮಾಡಿದ್ದು,
ತಮಗೆ ಮತ್ತು ತಮ್ಮ ಕುಟುಂಬದವರಿಗೆ ರಕ್ಷಣೆ ನೀಡಿ ಎಸ್.ಸಿ ಕೇಸ್ ಮಾಡಬೇಕೆಂದು ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಆರೋಪಿತರ ವಿರುದ್ದ ಠಾಣಾ ಅಪರಾಧ ಸಂ:
94/2018 ಕಲಂ: 143, 147, 148, 324,
504, 506, 354 ಸಹಿತ 149 ಐ.ಪಿ.ಸಿ. ಮತ್ತು 3 (1) (r) (s), 3 (1) (w) (i), 3 (2)
(5a) SC/ST (P.A) Act – 1989, Amendment Ordinance – 2014
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.