ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ 07.06.2019 ರಂದು ರಾತ್ರಿ 7.00 ಗಂಟೆಗೆ ಹಟ್ಟಿ ಪಟ್ಟಣದ ಕಾಕಾನಗರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿ ಮೈಬೂಬ
ತಂದೆ ಮೌಲಾಸಾಬ ನಗನೂರು ವಯಾ: 59 ವರ್ಷ ಜಾ: ಮುಸ್ಲಿಂ ಉ: ಸೈಕಲ್ ಶಾಫ್ ಸಾ: ಹಳೆ ಪಂಚಾಯತಿ ಹತ್ತಿರ
ಹಟ್ಟಿ ಪಟ್ಟಣ ಈತನು ಮಟಕಾ ಪ್ರವೃತ್ತಿಯಲ್ಲಿ
ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ
ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ
ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ
ದಾಳಿ ಪಂಚನಾಮೆ,
ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 29/2019 ರಲ್ಲಿ
ತೆಗೆದುಕೊಂಡು,
ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ
ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 08.06.2019
ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 83/2019 PÀ®A 78(111) PÉ.¦.
PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ:08/06/2019 ರಂದು 10-40 ಗಂಟೆಯಿಂದ 11-40 ಗಂಟೆಯ ಅವಧಿಯಲ್ಲಿ ಆರೋಪಿಯಾದ ರಾಮಣ್ಣ ಈತನು ಗೂಗೇಬಾಳ ಗ್ರಾಮದ ಬಸ್ಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್ಐ ಕವಿತಾಳ ರವರು & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1]ನಗದು ಹಣ 1090/-, 2]01 ಮಟಕಾ ನಂಬರ್ ಬರೆದ ಪಟ್ಟಿ, 3]ಒಂದು ಬಾಲ್ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-08/06/2019 ರಂದು ಪಡೆದುಕೊಂಡು 16-00 ಗಂಟೆಗೆ ಬಂದಿದ್ದರಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂ:55/2019, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ
ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ :08-06-2019
ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿ ಬಸವರಾಜ
ತಂದೆ ನಿಂಗಪ್ಪ ಗಾಳಿ ವಯಾ 22
ವರ್ಷ ಜಾ;ಕುರುಬರು ಉ;ಆಟೋ ಚಾಲಕ ಸಾ;3 ನೇ ಮೈಲ್ ಕ್ಯಾಂಪ್ ತಾ;ಸಿಂಧನೂರು ರವರು ಠಾಣೆಗೆ
ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ;08-06-2019 ರಂದು
ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಸಿಂಧನೂರು-ಕುಷ್ಠಿಗಿ ರಸ್ತೆಯ ಕಾನಿಹಾಳ ಮಲ್ಲನಗೌಡ ಕೋಲ್ಡ ಸ್ಟೋರೇಜ್ ಗೋದಾಮಿನ ಹತ್ತಿರದ
ಮುಂದಿನ ರಸ್ತೆಯಲ್ಲಿ ಎಡಗಡೆ
ಸೈಡಿನಲ್ಲಿ ನಿಲ್ಲಿಸಿದ್ದ ಫಿರ್ಯಾಧಿ ಆಟೋ ನಂ-ಕೆಎ-36/ಬಿ-0095 ನೇದ್ದಕ್ಕೆ ಆರೋಪಿತನಾದ ಲಾರಿ ನಂ-ಎಪಿ-21/ಡಬ್ಲೂ-9901 ನೇದ್ದರ
ಚಾಲಕನಾದ ನಾರಾಯಣ ಈತನು ತನ್ನ ಲಾರಿಯನ್ನು ಕುಷ್ಠಿಗಿ ಕಡೆಯಿಂದ ಅತೀವೇಗವಾಗಿ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮುಂದಿನ ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ರಸ್ತೆ
ಸೈಡಿನಲ್ಲಿ ನಿಲ್ಲಿಸಿದ ಫಿರ್ಯಾದಿ ಆಟೋನೇದ್ದಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಆಟೋ ಪಲ್ಟಿಯಾಗಿ
ಆಟೋದಲ್ಲಿ ಕುಳಿತಿದ್ದ ಹೊನ್ನಪ್ಪರವರಿಗೆ ಬಲಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯ,ಬಲಗಾಲ ತೊಡೆಗೆ ಬಾರೀ ಒಳಪೆಟ್ಟಾಗಿ ಎಲುಬು ಮುರಿದಿದ್ದು, ಎಡಗಾಲ ಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು ಇರುತ್ತದೆ. ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಹಾಜರುಪಡಿಸಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರ ಪೊಲೀಸ್ ಠಾಣಾ
ಗುನ್ನೆ ನಂ: 42/2019 ಕಲಂ:279,338 ಐಪಿಸಿ
ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.