ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 27-02-2020 ರಂದು ಬೆಳಿಗ್ಗೆ 7-00 ಗಂಟೆಗೆ ಫಿರ್ಯಾದಿ ಕಾರ್ತಿಕ್
ತಂದೆ ಗೋಪಾಲರೆಡ್ಡಿ ವಯಾಃ 28 ವರ್ಷ ಜಾತಿಃ ರೆಡ್ಡಿ ಉಃ ಟಿ.ವಿ.ಎಸ್ ಶೋ ರೂಮನಲ್ಲಿ ಮ್ಯಾನೇಜರ್ ಸಾಃ ಶ್ರೀಧರ್ ಗಟ್ಟ ಮಂಡಲಂ ಬೊಮ್ಮನಾಳ ತಾಃ ರಾಯದುರ್ಗ
ಜಿಃ ಅನಂತಪೂರ ಹಾಃವ ಆಂದ್ರಾ ಬ್ಯಾಂಕ್ ಎದುರುಗಡೆ ಗಂಗಾವತಿ ರೋಡ್ ಸಿಂದನೂರು
ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿ/ಗಾಯಾಳು
ಕಾರ್ತಿಕ್ ಈತನು ಸಿಂದನೂರಿನ ಟಿ.ವಿ.ಎಸ್ ಶೋ ರೂಮ್ ನಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿದ್ದು ಮೃತ ಶಮೀರ್
ಹುನಶಾಳ ಈತನು
ಸದರಿ ಶೋ ರೂಮಿನಲ್ಲಿ ಹೆಲ್ಪರ್ ಕೆಲಸ ಮಾಡಿಕೊಂಡಿರುತ್ತಾನೆ ನಿನ್ನೆ ದಿನಾಂಕ
26-02-2020 ರಂದು ಫಿರ್ಯಾದಿ ಮತ್ತು ಮೃತನು ಇಬ್ಬರು ರಾಯಚೂರಿನ ಜಿಲ್ಲಾಧಿಕಾರಿಗಳ
ಕಾರ್ಯಾಲದಲ್ಲಿ ಅಂಗವಿಕಲರಿಗೆ ವಿತರಿಸುವ ತ್ರಿ ಚಕ್ರವಾಹನಗಳ ಟೆಂಡರ್ ಪ್ರಕ್ರಿಯೆ ಇದ್ದ ಕಾರಣ
ವಾಹನದ ಡೆಮೋ ತೋರಿಸಲು ಇನ್ನೂ ನಂಬರ್ ಬಾರದ ಟಿ,ವಿ.ಎಸ್
ಜುಪೀಟರ್ ಸ್ಕೂಟಿ ಚೆಸ್ಸಿ ನಂ MD62 6E G4 9K1H 28972 ಇಂಜಿನ್ ನಂ EG4HK1221514 ನೇದ್ದನ್ನು
ತೆಗೆದುಕೊಂಡು ರಾಯಚೂರಿಗೆ ಹೋಗಿ ಡೆಮೋ ತೋರಿಸಿ ವಾಪಸ್ ಪುನಾಃ ಸಿಂದನೂರಿಗೆ ಹೊಗಲು ರಾಯಚೂರು-ಮಾನವಿ
ಮುಖ್ಯ ರಸ್ತೆ ಹಿಡಿದು ಹೊರಟಿದ್ದಾಗ ನಿನ್ನೆ ಮದ್ಯಾಹ್ನ
2-30 ಗಂಟೆ ಸುಮಾರಿಗೆ ಮೃತನು ಮೇಲ್ಕಂಡ ವಾಹನದಲ್ಲಿ ಫಿರ್ಯಾದಿಯನ್ನು
ಕೂಡಿಸಿಕೊಂಡು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬೈಲ್ ಮರ್ಚೆಡ್ ಏತ
ನೀರಾವರಿ ಯೋಜನೆಯ ಕಟ್ಟಡದ ಬ್ರೀಡ್ಜ ಹತ್ತಿರ ಆರೋಪಿ ನಂ 2 ನೆದ್ದವನು
ತನ್ನಟಿಪ್ಪರ್ ನಂ KA01-AF 3815 ನೆದ್ದನ್ನು
ರಸ್ತೆಯ ಮೇಲೆ ಮಾನವಿ ಕಡೆಗೆ ಮುಖಮಾಡಿ ಯಾವುದೇ ಮುಂಜಾಗ್ರತ ಸೂಚನೆಗಳಿಲ್ಲದೇ ಆರೋಪಿ
ನಿಲ್ಲಿಸಿದ್ದಕ್ಕೆ ಮೃತ ಶಮೀರನು ತನ್ನ ವಾಹನವನ್ನು ಟಿಪ್ಪರಿಗೆ ಹಿಂದುಗಡೆ ಜೋರಾಗಿ ಟಕ್ಕರ್
ಮಾಡಿದ್ದು ಪರಿಣಾಮ ಫಿರ್ಯಾದಿ ಮತ್ತು ಶಮೀರ್ ಇಬ್ಬರು ರಸ್ತೆಯ ಮೇಲೆ ವಾಹನ ಸಮೇತ ಬಿದ್ದು ಶಮೀರ್
ಈತನಿಗೆ ಎಡಗಡೆ ಎದೆಯ ಕೆಳಭಾಗದಲ್ಲಿ ಭಾರಿ ಒಳಪೆಟ್ಟಾಗಿದ್ದು ಫಿರ್ಯಾದಿಗೆ ಕೆಳತುಟಿಗೆ
ರಕ್ತಗಾಯವಾಗಿದ್ದು ಶಮೀರ್ ಈತನನ್ನು ಚಕಿತ್ಸೆ ಕುರಿತು ಮಾನವಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ
ಮಾಡಿದ್ದು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ರಿಮ್ಸ ಆಸ್ಪತ್ರೆಗೆ ಕರೆದುಕೊಂಡು
ಹೋಗುವಾಗ ಶಮೀರನು ರಿಮ್ಸ ಆಸ್ಪತ್ರೆಯ ಸಮೀಪ ತನಗಾದ ಗಾಯದ ಬಾದೇಯಲ್ಲಿ ನಿನ್ನೆ
ಸಂಜೆ 4-30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ
ಹೇಳಿಕೆಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ
41/2020 ಕಲಂ 279,337.283, 304 (ಎ) ಐ.ಪಿ.ಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.