ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ
¥ÀæPÀgÀtzÀ ªÀiÁ»w.
ದಿನಾಂಕ:19-01-2019 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಸಿಂಧನೂರು-ಗಂಗಾವತಿ ರಸ್ತೆಯ ಮನ್ನತ್ ಸರ್ವಿಸ್ ಸೆಂಟರ್ ಅಂಗಡಿಯ
ಮುಂದಿನ ರಸ್ತೆಯಲ್ಲಿ ಫಿರ್ಯಾದಿದಾರ ರಾಚಪ್ಪ ತಂದೆ ಪಂಪಣ್ಣ ವ: 35 ವರ್ಷ ಜಾ: ಲಿಂಗಾಯತ ಉ: ಆಟೋ ಡ್ರೈವರ ಸಾ: ಮಹಿಬೂಬ ಕಾಲೋನಿ ಸಿಂಧನೂರು ಇವರ ಮಾವ ಮೃತ ಶರಣಪ್ಪ ಇತನು ಎಮ್.ಜಿ ವೃತ್ತದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಮೋಟರ್ ಸೈಕಲ್ ನಂ AP-04-AQ-9220 (ಚೆಸ್ಸಿ.ನಂ.MD2A14AZ4DWM17639 ಇಂಜನ.ನಂJBZWDM28764) ನೇದ್ದರ ಸವಾರನ್ನು ತನ್ನ ಮೋಟರ್ ಸೈಕಲ್ ನ್ನು ಗಂಗಾವತಿ ರಸ್ತೆ ಕಡೆಯಿಂದ ಸಿಂಧನೂರಿನ ಎಮ್.ಜಿ ವೃತ್ತದ ಕಡೆಗೆ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಶರಣಪ್ಪನಿಗೆ ಟಕ್ಕರ ಕೊಟ್ಟ ಪರಿಣಾಮವಾಗಿ ತಲೆಯ ಹಿಂದೆ ಭಾರಿ ರಕ್ತಗಾಯ, ಒಳಪೆಟ್ಟು ಬಲಗಾಲ ಮೊಣಕಾಲ ಕೆಳಗೆ ಮುರಿದು ಭಾರಿಗಾಯ ಮತ್ತು ಎಡಗಾಲ ಹಿಮ್ಮಡಿ ಹತ್ತಿರ ರಕ್ತಗಾಯವಾಗಿದ್ದು. ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿ:20-01-2019 ರಂದು ಬೆಳ್ಳಗಿನ ಜಾವ 1-30 ಗಂಟೆ ಸುಮಾರಿಗೆ ಮೃತ ಪಟ್ಟಿದ್ದು ಇರುತ್ತದೆ ಅಂತ ಫಿರ್ಯಾದಿಯವರ ನಿಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ಗುನ್ನೆ ನಂ 05/2019 ಕಲಂ 279,304(ಎ) ಐಪಿಸಿ ರೆ/ವಿ 187 ಐ.ಎಮ್.ವಿ ಕಾಯ್ದೆ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿರುತ್ತಾರೆ.