ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಐ.ಪಿ.ಸಿ. ಪ್ರಕರಣದ ಮಾಹಿತಿ.
ದಿನಾಂಕ:24-04-2019
ರಂದು 13.00 ಗಂಟೆಗೆ
ಫಿರ್ಯಾದಿ ಶ್ರೀಮತಿ ಉಷಾರಾಣಿ
ಗಂಡ ನಾಗರಾಜ ಸಾ: ರಾಂಪೂರು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ
ಬರೆದ ಫಿರ್ಯಾದಿ ಸಲ್ಲಿಸಿದ್ದು, ಅದರಲ್ಲಿ ಫಿರ್ಯಾದಿದಾರಳ ಗಂಡ ನಾಗರಾಜ ಈತನು ಬೆಂಗಳೂರಿನಲ್ಲಿ ಪೊಲೀಸ್
ಇಲಾಖೆಯಲ್ಲಿ ಎ.ಎಸ್.ಐ ಅಂತಾ ಸೇವೆ ಸಲ್ಲಿಸುತ್ತಿದ್ದು, ಫಿರ್ಯಾದಿದಾರಳು ತನ್ನ ಮಕ್ಕಳೊಂದಿಗೆ ರಾಂಪೂರದಲ್ಲಿ
ವಾಸವಾಗಿದ್ದು ಫಿರ್ಯಾದಿಯ ಗಂಡ ತನ್ನ ಅಣ್ಣ ತಿಮ್ಮಾರೆಡ್ಡಿ ಇವರ ಮಾತು ಕೇಳುತ್ತಿದ್ದು ಇದೇ ವಿಷಯದಲ್ಲಿ
ಫಿರ್ಯಾದಿ ಮತ್ತು ತಿಮ್ಮಾರೆಡ್ಡಿ ಇವರ ಮದ್ಯ ಮನಸ್ತಾಪ ಇದ್ದು, ಈ ಬಗ್ಗೆ ತಿಮ್ಮಾರೆಡ್ಡಿ ಮತ್ತು ಆತನ
ಮನೆಯವರು ಸುಮಾರು ಸಲ ಫಿರ್ಯಾದಿಯೊಂದಿಗೆ ಬಾಯಿ ಮಾತಿನ ಜಗಳ ಮಾಡಿದ್ದು ಇರುತ್ತದೆ. ದಿನಾಂಕ:18.04.2019
ರಂದು ರಾತ್ರಿ 10.30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಮನೆಯ ಮುಂದಿನ ನೀರಿನ ನಳದಲ್ಲಿ ನೀರು
ತುಂಬುತ್ತಿರುವಾಗ ತಿಮ್ಮಾರೆಡ್ಡಿಯ ಮಗ ನರೇಂದ್ರನು ಅಲ್ಲಿಗೆ ಬಂದು ಮೇಲಿನ ವಿಷಯದಲ್ಲಿ ಫಿರ್ಯಾದಿಯೊಂದಿಗೆ
ಜಗಳ ತೆಗೆದು ಅವಾಚ್ಯವಾಗಿ ಬೈದು ಕುತ್ತಿಗೆ ಹಿಡಿದು
ನೆಲಕ್ಕೆ ದಬ್ಬಿದ್ದು, ಆಗ ಫಿರ್ಯಾಧಿದಾರಳು ಚೀರಾಡುವದನ್ನು ಕೇಳಿ ಮನೆಯಲ್ಲಿದ್ದ ಫಿರ್ಯಾದಿಯ ಮಗಳು
ಸೋನಿ ಈಕೆಯು ಓಡಿ ಬಂದು ಫಿರ್ಯಾದಿಯನ್ನು ಎಬ್ಬಿಸಿದ್ದು, ಅಷ್ಟರಲ್ಲಿ ಆರೋಪಿ 2 ರಿಂದ 4 ರವರು ಅಲ್ಲಿಗೆ
ಬಂದು ಅವರು ಸಹ ಫಿರ್ಯಾದಿಯೊಂದಿಗೆ ಜಗಳ ತೆಗೆದು ಈ ಸೂಳೇಯನ್ನು ಮೆನಯಿಂದ ಓಡಿಸಬೇಕು ಇಲ್ಲದಿದ್ದರೆ
ಇವಳನ್ನು ಪೆಟ್ರೋಲ್ ಹಾಕಿ ಸುಟ್ಟು ಬಿಡೋಣ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದಲ್ಲದೆ
ಫಿರ್ಯಾದಿಯ ಸೀರೆ ಹಿಡಿದು ಎಳೆದಾಡಿ, ಕೈಗಳಿಂದ ಕಪಾಳಕ್ಕೆ
ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿದ್ದ ತನ್ನ ಮಕ್ಕಳಿಗೆ
ತಿಳಿಸಿ ಅವರು ಬಂದ ನಂತರ ವಿಚಾರಿಸಿ ಇಂದು ತಡವಾಗಿ
ಠಾಣೆಗೆ ಬಂದು ದೂರು ಕೊಟ್ಟಿದ್ದು ಸದರಿ ನಾಲ್ಕು ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಮುಂತಾಗಿದ್ದ ಫಿರ್ಯಾದಿಯ ಮೇಲಿಂದ ರಾಯಚೂರು
ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂ: 24/2019 ಕಲಂ
323. 354, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.