ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ದಿನಾಂಕ: 12.02.2021 ರಂದು ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಿರ್ಯಾದಿ ಗುಂಡುರಾವ್ ತಂದೆ ದೇವಯ್ಯ ಕೊಲಮಿ ಸಾ: ರಾಮ್ ರಾವ್ ಕ್ಯಾಂಪ್ ರವರು ದೂರನ್ನು ನೀಡಿದ್ದು ತನ್ನ ಮಗನಾದ ಚಿನ್ನ ತಂದೆ ಗುಂಡುರಾವ್ 10 ವರ್ಷ 4ನೇ ತರಗತಿ ಮತ್ತು ಪ್ರವೀಣ್ ಕುಮಾರ್ ತಂದೆ ಶಾಂತಪ್ಪ 8 ವರ್ಷ 2ನೇ ತರಗತಿ ಇವರುಗಳು ಬೆಳಿಗ್ಗೆ 9 ಗಂಟೆಗೆ ಸರಕಾರಿ ಕಿರಿಯ ಪ್ರರ್ಥಮಿ ಶಾಲೆಗೆ ಹೋಗಿ ಮದ್ಯಾಹ್ನ 2ಗಂಟೆಯ ಸುಮಾರು ಝಂಢಾ ಕಟ್ಟೆಯ ಮೇಲೆ ಬ್ಯಾಗಗಳನ್ನುಟ್ಟು ಹೊರಗಡೆ ಹೋಗಿ ಸಂಜೆಯಾದರು ಇಬ್ಬರು ವಾಪಸ್ಸ್ ಮನೆಗೆ ಬಾರದೆ ಇರುವುದರಿಂದ ಕಾಣೆಯಾಗಿರುವ ಕುರಿತು ಪತ್ತೆ ಹಚ್ಚುವಂತೆ ನೀಡಿರುವ ದೂರಿನ ಆಧಾರದ ಮೇಲೆ ಇಡಪನೂರು ಪೊಲೀಸ್ ಠಾಣೆಯ ಗುನ್ನೆ ನಂಬರ 08/2021 ಕಲಂ 363 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ಇಂದು ದಿನಾಂಕ: 13.02.2021 ರಂದು ತಲಮಾರಿ ಗ್ರಾಮ ವ್ಯಾಪ್ತಿಯ ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಪ್ರಮೀಣ ಕುಮಾರ 8ವರ್ಷ ಈತನ ಮೃತದೇವ ಪತ್ತೆಯಾಗಿರುತ್ತದೆ. ಅದೇ ರೀತಿ ಚಿನ್ನ ತಂದೆ ಗುಂಡುರಾವ್ 10 ವರ್ಷ ಈತನ ಮೃದೇಹವು ಗಾಣದಾಳ ಗ್ರಾಮ ವ್ಯಾಪ್ತಿಯ ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಪತ್ತೆಯಾಗಿರುತ್ತದೆ. ಈ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.