ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದೊಂಬಿ
ಪ್ರಕರಣದ ಮಾಹಿತಿ.
ದಿನಾಂಕ 10/04/19 ರಂದು 20.30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ಸಂಗಾಪೂರ ಗ್ರಾಮದಲ್ಲಿ ಹಲ್ಲೆಗೊಳಗಾಗಿ
ಕೆಲವು ಜನರು ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ
ತಿಳಿಸಿದ್ದು ಕಾರಣ ಕೂಡಲೇ ಎ.ಎಸ್.ಐ ವೀರನಗೌಡ ರವರಿಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು
ಸದರಿ ಎ.ಎಸ್.ಐ ರವರು ಮಾನವಿ ಸರಕಾರಿ ಆಸ್ಪತ್ರೆಗೆ ಹೋಗಿ ಗಾಯಗೊಂಡವರಿಗೆ ನೋಡಿ ವಿಚಾರಿಸಿಕೊಂಡು ನಂತರ ಅಲ್ಲಿಯೇ ಇದ್ದ ಗಾಯಾಳು ತಿಮ್ಮಾರೆಡ್ಡಿ ಈತನು
ಆಸ್ಪತ್ರೆಯಲ್ಲಿಯೇ ತಾನು ಒಂದು ದೂರನ್ನು ಬರೆದುಕೊಟ್ಟಿದ್ದನ್ನು ತೆಗೆದುಕೊಂಡು ರಾತ್ರಿ 22.15
ಗಂಟೆಗೆ ವಾಪಾಸ ಠಾಣೆಗೆ ಬಂದು ತಿಮ್ಮಾರೆಡ್ಡಿ ಈತನು ನೀಡಿದ ಸದರಿ
ಲಿಖಿತ ದೂರನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ,
ಇಂದು ದಿನಾಂಕ 10/04/19 ರಂದು ಸಾಯಂಕಾಲ ಫಿರ್ಯಾದಿ ಅತ್ತೆಯಾದ ಕಮಲಮ್ಮ ಹಾಗೂ ಹೆಂಢತಿ ಸುಮಲತಾ
ಇವರುಗಳು
ಬಯಲು ಕಡೆಗೆ ಅಂತಾ ಸಾಯಂಕಾಲ ತಮ್ಮ ಮನೆಯಿಂದ ನಾಯಕ ಮನೆಗಳ
ಮುಖಾಂತರ ಹೋಗಬೇಕಾಗಿದ್ದು ಕಾರಣ
ವೀರೇಶ ಮಾದಿಗ
ಇವರ ಮನೆಯ ಮುಂದೆ ಹೊರಟಾಗ ಅಲ್ಲಿಯೇ ಇರುವ ನಾಯಕ ಜನಾಂಗದ ಮನೆಗಳ ಮುಂದೆ ಮೇಲ್ಕಂಡ ಆರೋಪಿ ನಂ
1 ರಿಂದ 6 ರವರು (ಹೆಣ್ಣು ಮಕ್ಕಳು) ಕುಳಿತಿದ್ದು ಅವುರಗಳು ಕಮಲಮ್ಮ ಹಾಗೂ ಸುಮಲತಾ ಇವರಿಗೆ ನೋಡಿ ‘’ ಈ ಮಾದಿಗ ಸೂಳೇರು ಇಲ್ಲೇ ನಮ್ಮ ಓಣಿಯಲ್ಲಿಯೇ ತಿರುಗಾಡುತ್ತಾರ,
ಈ ಸೂಳೇರು ಸೊಕ್ಕ ಜಾಸ್ತಿಯಾಗಿದೆ ‘’ ಅಂತಾ ಅಂದಿದ್ದು ಕಾರಣ ಕಮಲ್ಲಮ ಈಕೆಯು ಅವರಿಗೆ ‘’ಯಾಕೆ ಬೈಯ್ಯುತ್ತೀರಿ’’ ಅಂತಾ ಕೇಳಿದ್ದಕ್ಕೆ ಅವರೆಲ್ಲರೂ ಕೂಡಿ ಓಡಿ ಬಂದು ಕಮಲಮ್ಮಳಿಗೆ ಎಳೆದಾಡುತ್ತಾ ಕೈಗಳಿಂಧ
ಹೊಡೆ ಬಡೆ ಮಾಡ ಹತ್ತಿದ್ದು ಕಾರಣ ಸುಮಲಾತಾ ಈಕೆಯು ಅಲ್ಲಿಂದ ಮನೆಗೆ ಹೋಗಿ ತನ್ನ ಗಂಡ ತಿಮ್ಮಾರೆಡ್ಡಿ (ಫಿರ್ಯಾದಿ)
ಗೆ ತಿಳಿಸದ್ದಕ್ಕೆ ತಿಮ್ಮಾರೆಡ್ಡಿ ಈತನು ತಮ್ಮ ಜನಾಂಗದ ಮೇಲ್ಕಂಡ
ಗಾಯಾಳು ನಂ
2 ರಿಂದ 6 ರವರಿಗೆ ಕರೆದುಕೊಂಡು ಸ್ಥಳಕ್ಕೆ ಹೋಗಿದ್ದು ಕಮಲ್ಲಮ್ಮಳಿಗೆ ಹೊಡೆ ಬಡೆ ಮಾಡುವದನ್ನು
ಕಂಡು ಬಿಡಿಸಲು ಹೋದಾಗ ಅಲ್ಲಿಗೆ ಅವರ ಕಡೆಯವರು ಬಹಳ ಜನರು ಬಂದಿದ್ದು ಅವರಲ್ಲಿ ಲಿಂಗಾಯತ ಜನಾಂಗದ ಾರೋಪಿ ನಂ 7 ರಿಂದ 9 ರವರು ಹಾಜರಿದ್ದು ಅವರು ಈ ಮಾದಿಗ ಸೂಳೆ ಮಕ್ಕಳದು ಜಾಸ್ತಿ ಆಗಿದೆ ಇವತ್ತು ಇವರಿಗೆ
ಮುಗಿಸಿಬಿಡ್ರಲೇ ಅಂತಾ ಜಾತಿ ನಿಂದನೆ ಮಾಡಿ ಪ್ರಚೋದನೆ ಮಾಡಿದ್ದರಿಂದ ಆರೋಪಿನಂ
10 ರಿಂಧ 22 ಮತ್ತು ಆರೋಪಿ ನಂ 1 ಹನುಮಂತಿ ಗಂಡ ಹಂಪಯ್ಯ ನಾಯಕ ಸಾ: ಸಂಗಾಪೂರ ಹಾಗೂ ಇತರೆ 21 ಸೇರಿ ಅಕ್ರಮಕೂಟ ರಚಿಸಿಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿ ಹಾಗೂ ಮೇಲ್ಕಂಡ ಗಾಯಾಳು ನಂಬರ 2 ರಿಂಧ 6 ರವರಿಗೆ ಕೊಡ್ಲಿ, ಕಟ್ಟಿಗೆ ಹಾಗೂ ಕೈಗಳಿಂಧ ಹೊಡೆ ಬಡೆ ಮಾಡಿ ರಕ್ತಗಾಯ ಮತ್ತು
ಒಳಪೆಟ್ಟುಗೊಳಿಸಿ ದ್ದು ಅಲ್ಲದೇ ಇನ್ನು ಮುಂದೆ ಊರಲ್ಲಿ ಇದ್ದು ಹೇಗೆ ಬಾಳ್ವೆ ಮಾಡುತ್ತೀರಿ ಅಂತಾ ಜೀವದ
ಬೆದರಿಕೆಯನ್ನು ಹಾಕಿದ್ದು
ಇರುತ್ತದೆ ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ
ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 84/2019
ಕಲಂ
143,147,148,114,307,323,324,354,504,506 ಸಹಿತ
149 ಐ.ಪಿ.ಸಿ. ಮತ್ತು ಕಲಂ
3(1) (r) (s) (w) (i), 3(2) (Va) ಎಸ್.ಸಿ. / ಎಸ್ ಟಿ
. ತಿದ್ದುಪಡಿ ಕಾಯ್ದೆ- 2015 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.