ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
ಮಟಕಾ ಜೂಜಾಟ ಪ್ರಕರಣದ ಮಾಹಿತಿ
1) ದಿನಾಂಕ : 31-07-2020 ರಂದು ಸಾಯಂಕಾಲ 3-30 ಗಂಟೆಯ ಸುಮಾರು ಯು.ಬೊಮ್ಮನಾಳ ಗ್ರಾಮದ ಅಗಸಿ ಕಟ್ಟೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಬ್ರಹ್ಮಾನಂದ ತಂದೆ ಹನುಮಂತ ಕ್ಯಾಡೇದರ ವ. 21, ಜಾ:ನಾಯಕ, ಉ: ಮಟಕಾ ಬರೆದುಕೊಳ್ಳುವುದು, ಸಾ: ಯು.ಬೊಮ್ಮನಾಳ ಬಸವರಾಜ ತಂದೆ ಕನಕರಾಯಪ್ಪ ಆಡೀನ್, ವ-25 ವರ್ಷ ಜಾತಿ-ನಾಯಕ ಉ: ಮಟಕಾ ಬರೆದುಕೊಳ್ಳುವುದು, ಸಾ: ಯು.ಬೊಮ್ಮನಾಳ ರವರು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಪಿ.ಎಸ್.ಐ ರವರು ಮಾನ್ಯ ಡಿ ಎಸ್ ಪಿ/ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ HC-233, PC-679, PC-472 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ 4-00 ಪಿ.ಎಂ ಕ್ಕೆ ದಾಳಿ ಮಾಡಲು ಆರೋಪಿತರಿಬ್ಬರೂ ಸಿಕ್ಕಿಬಿದ್ದಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು, ಅವರ ವಶದಲ್ಲಿದ್ದ ಮಟಕಾ ಜೂಜಾಟದ ನಗದು ಹಣ ರೂ. 1,120/- ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸಂಗ್ರಹಿಸಿದ ಹಣ ಮತ್ತು ಪಟ್ಟಿಯನ್ನು ಆರೋಪಿ ನಂ-02 ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಸದರಿ ಆರೋಪಿತನೊಂದಿಗೆ, 6-00 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 28/2020 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ನಿವೇದಿಸಿಕೊಂಡಿದ್ದು ಇಂದು ದಿನಾಂಕ-01-08-2020 ರಂದು 5-30 ಪಿ.ಎಂ ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ ಠಾಣೆಗುನ್ನೆನಂ. 107/2020 ಕಲಂ 78(iii) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
2) ದಿನಾಂಕ:31-07-2020 ರಂದು ಸಾಯಂಕಾಲ 6-40 ಗಂಟೆಯ ಸುಮಾರು ಯು.ಬೊಮ್ಮನಾಳ ಗ್ರಾಮದ ಸರ್ಕಾರಿ ಶಾಲೆ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ನಂ 01 ಹನುಮನಗೌಡ ತಂದೆ ಹನುಮನಗೌಡ
ಮಾಲಿಪಾಟೀಲ, 32ವರ್ಷ, ನಾಯಕ, ಒಕ್ಕಲುತನ ಸಾ:ಯು.
ಬೊಮ್ಮನಾಳ ತಾ: ಮಸ್ಕಿ . ಈತನು ಕೈಯಲ್ಲಿ ಪೆನ್ನು, ಚೀಟಿಯನ್ನು ಹಿಡಿದು ಕಂಬದ ಲೈಟಿನ ಬೆಳಕಿನಲ್ಲಿ ನಿಂತುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಪಿ ಎಸ್ ಐ ತುರುವಿಹಾಳ ರವರು
ಖಚಿತ ಭಾತ್ಮಿ ಪಡೆದು ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ PC-662, PC-188 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ 7-15 ಪಿ.ಎಂ ಕ್ಕೆ
ದಾಳಿ ಮಾಡಿ ಆರೋಪಿ . 01 ನೇದ್ದವನಿಗೆ ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ಮಟಕಾ ಜೂಜಾಟದ ನಗದು ಹಣ ರೂ. 2,330 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2
ಬಸವರಾಜ ಕುರಿ, ಮಟ್ಕಾ ಬುಕ್ಕಿ, ಸಾ:ಜಂಬುನಾಥನಹಳ್ಳಿ ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ 9-10 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 29/2020 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ 01-08-2020 ರಂದು
7-00 ಪಿ ಎಂ ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ತುರುವಿಹಾಳ ಠಾಣೆ ಗುನ್ನೆ ನಂ. 108/2020 ಕಲಂ 78 (iii) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
3)ಈಗಾಗಲೇ ದೇಶದಾದ್ಯಂತ ಕೊರೋನ ವೈರಸ್ ಹರಡುತ್ತಿರುವುದರಿಂದ, ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜನರಿಗೆ ಸರಕಾರವು ಸೂಚಿಸಿದಾಗ್ಯೂ ಆರೋಪಿತರು
ನಾಸೀರ್ ತಂ: ಖಾಸಿಂಸಾಬ್ 40
ವರ್ಷ, ಮುಸ್ಲಿಂ, ಕಿರಾಣಿ ವ್ಯಾಪಾರ, ಸಾ:
LIG-II-86 KHB ಕಾಲೋನಿ, ಯರಮರಸ್ ಕ್ಯಾಂಪ್, ರಾಯಚೂರು
ಮತ್ತು ಇತರೆ 10 ಜನ ಇಂದು ದಿನಾಂಕ:
01.08.2020 ರಂದು 17.30 ಗಂಟೆಗೆ ಅಕ್ರಮಕೂಟ ರಚಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪುಗುಂಪಾಗಿ ಕುಳಿತರೆ ಕೊರೋನಾ ಕೋವಿಡ್-19 ಹರಡುತ್ತದೆ ಎಂದು ಗೊತ್ತಿದ್ದು, ಆರೋಪಿತರು ದುಂಡಗೆ ಕುಳಿತು ಅಂದರ್ ಬಾಹರ್ ಎಂಬ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ್ಗೆ ಫಿರ್ಯಾದಿದಾರರು ತಮ್ಮ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರ ವಶದಲ್ಲಿದ್ದ ಜೂಜಾಟದ ಹಣ
13000/- ರೂ.ಗಳನ್ನು ಹಾಗೂ 52 ಇಸ್ಪೀಟು ಎಲೆಗಳನ್ನು ಜಪ್ತಿಪಡಿಸಿಕೊಂಡು, ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ ಕರೆತಂದು ಹಾಜರ ಪಡಿಸಿ ನೀಡಿದ ವರದಿ ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 118/2020 ಕಲಂ; 87 ಕೆ.ಪಿ. ಆಕ್ಟ. ಹಾಗೂ ಕಲಂ:
143, 147, 188, 269, 270 ಸಹಾ 149 ಐಪಿಸಿ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.