ಪತ್ರಿಕಾ ಪ್ರಕಟಣೆ
ದಿನಾಂಕ: 04-04-2015 ದು ರಾತ್ರಿ ತುರ್ವಿಹಾಳ್ ಬಸ್ ನಿಲ್ದಾಣದಲ್ಲಿ ಇರುವ ಕಾವ್ಯ ಮೊಬೈಲ್ ಅಂಗಡಿಯ ಬಾಗಿಲಿನ ಬೀಗ
ಇಂದು ದಿನಾಂಕ: 09-04-2015 ರಂದು ಬೆಳಿಗ್ಗೆ ಶ್ರೀ ತಿಮ್ಮಣ್ಣ ಚಾಮನೂರು ಪಿ.ಎಸ್.ಐ ತುರ್ವಿಹಾಳ ಠಾಣೆ ಮತ್ತು ಅವರ ಸಿಬ್ಬಂದಿಯವರು ಪ್ರಯತ್ನ ಪೂರ್ವಕವಾಗಿ ಆರೋಪಿತರಾದ 1) ತೋಫಿಕ್ ತಂದೆ ಅಸ್ನುಜಮಾ ವ: 20, ಜಾ: ಮುಸ್ಲಿಂ, ಉ: ಕೂಲಿ, 2) ಜಿಲಾನಿ ತಂದೆ ಅನ್ವರ್ ಸಾಬ್ @ ಖಾಜಾಸಾಬ್ ವ: 19, ಜಾ ಮುಸ್ಲಿಂ: ಉ: ವೆಲ್ಡಿಂಗ್
,3) ಸಲೀಮ್ ತಂದೆ ಅಲ್ಲಾಬಕ್ಷ್ ವ: 20, ಜಾ: ಮುಸ್ಲಿಂ, ಉ: ಪೆಂಟಿಂಗ್ ಕೆಲಸ , 4)ಶರಣಬಸವ ತಂದೆ ನಾಗಪ್ಪ ವ: 20, ಜಾ: ನಾಯಕ್
ಉ:ತರಕಾರಿ ವ್ಯಾಪಾರ ಎಲ್ಲರೂ ಸಾ: ಇಂದಿರನಗರ ಸಿಂಧನೂರು ಇವರುಗಳನ್ನು ಗುಂಜಳ್ಳಿ ಕ್ಯಾಂಪ್ ಸಮೀಪದಲ್ಲಿ ವಶಕ್ಕೆ ತಗೆದುಕೊಂಡು ವಿಚಾರಣೆಗೊಳಪಡಿಸಲಾಗಿ ದಿನಾಂಕ:04-11-2014 ರ ರಾತ್ರಿ 9-30 ಗಂಟೆ ಸುಮಾರು ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿ ವೆಂಕೋಬಾರಾವ್ ತಂದೆ ವಿಠಲರಾವ್ ಕುಲ್ಕರ್ಣಿ ಇವರು ಕ್ಯಾಶ್ ಬ್ಯಾಗ್ ಹೆಗಲಿಗೆ ಹಾಕಿಕೊಂಡು ಮನೆ ಕಡೆ ಹೊರಟಾಗ ಅವರ ಕ್ಯಾಶ್ ಬ್ಯಾಗ್ ಕಳುವು ಮಾಡಿ ಅದರಲ್ಲಿದ್ದ ರೂ.16000/- ಮತ್ತು ಅದರಲ್ಲಿದ್ದ ಪಿಗ್ಮಿ ಮಿಶನ್ , ಎಟಿಎಮ್ ಕಾರ್ಡ್ ಇತರೆ ವಸ್ತುಗಳನ್ನು ಕಳುವು ಮಾಡಿದ್ದು ಈ ಬಗ್ಗೆ ಸಿಂಧನೂರು ನಗರ ಠಾಣಾ ಗುನ್ನೆ ನಂ.256/2014, ಕಲಂ.379 ಐಪಿಸಿ ದಾಖಲಾಗಿತ್ತು.
ದಿನಾಂಕ: 03-12-2014
ರಂದು ರಾತ್ರಿ ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿರುವ ಅಂಬಾದೇವಿ ದೇವಸ್ಥಾನದ ಶೆಟರ್ ಕೀಲಿ ಮುರಿದು ಒಳಗೆ ಪ್ರವೇಶಿಸಿ ದೇವರ ಹುಂಡಿಯನ್ನು ತೆಗೆದುಕೊಂಡು ಹೋಗಿ ಅದರಲ್ಲಿದ್ದ ಹಣ ಕಳುವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಶಶಿಕುಮಾರ್ ತಂದೆ ನಾರಾಯಣಸಾ ದಾನಿ ಸಾ: ಮಹೆಬೂಬ್ ಕಾಲೋನಿ ಸಿಂಧನೂರು ಇವರ ಫಿರ್ಯಾದಿ ಮೇಲಿಂದಾ ಸಿಂಧನೂರು ನಗರ ಠಾಣೆಯಲ್ಲಿ ಗುನ್ನೆ ನಂ.281/2014 ಕಲಂ. 457, 380 ಐಪಿಸಿ ದಾಖಲಾಗಿತ್ತು.
ಈ ಮೇಲ್ಕಂಡ ಮೂರು ಕಳುವಿನ ಪ್ರಕರಣಗಳನ್ನು ತಾವೆ ಮಾಡಿದ್ದಾಗಿ ಆರೋಪಿತರು ಒಪ್ಪಿಕೊಂಡು ಕಳುವು ಮಾಡಿದ 17 ಮೊಬೈಲಗಳನ್ನು ಸಹ ಬಚ್ಚಿಟ್ಟಿದ್ದು ತೋರಿಸಿ ಹಾಜರುಪಡಿಸಿರುತ್ತಾರೆ ಅಲ್ಲದೇ ಕಳ್ಳರು ಉಪಯೋಗಿಸುತ್ತಿದ್ದ ಎರಡು ಮೋಟರ್ ಸೈಕಲಗಳು ಸಹ ಕಳುವು ಮಾಡಿ ತಂದಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿರುತ್ತದೆ. ಈ ಬಗ್ಗೆ ತುರ್ವಿಹಾಳ್ ಠಾಣೆಯಲ್ಲಿ ಗುನ್ನೆ ನಂ.37/2015,ಕಲಂ. 98 ಕೆ.ಪಿ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ.
ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದರಿಂದ ಸಿಂಧನೂರು ಮತ್ತು ತುರ್ವಿಹಾಳ ಗ್ರಾಮಸ್ಥರು ಕಳವಳಕ್ಕೊಳಗಾಗಿದ್ದರು ಈ ಎಲ್ಲಾ ಕಳುವಿನ ಪ್ರಕರಣಗಳನ್ನು ಸಿಂಧನೂರು ಮತ್ತು ತುರ್ವಿಹಾಳ ಪೊಲೀಸರು ಬೇಧಿಸಿ ಕಳ್ಳತನ ಮಾಡಿದವರನ್ನು ಹಿಡಿದು ಕಳ್ಳತನದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಿಂದ ಎಲ್ಲಾ ನಾಗರೀಕರು ಕಳವಳಕಾರಿ ವಾತಾವರಣದಿಂದ ಮುಕ್ತರಾಗಿರುತ್ತಾರೆ . ಸಿಂಧನೂರು ತಾಲ್ಲೂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯ ಪ್ರಶಂಸನೀಯವಾಗಿರುತ್ತದೆ.