Thought for the day

One of the toughest things in life is to make things simple:

29 Aug 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :

            ದಿನಾಂಕ 28-08-2020 ರಂದು ಮಧ್ಯಾಹ್ನ 1-00 ಗಂಟೆಗೆ  ಸಿ.ಪಿ.  ಠಾಣೆಗೆ ಬಂದು 11 ಜನ ಆರೋಪಿತರು ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಮಧ್ಯಾಹ್ನ 1-15 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ಇಂದು ದಿನಾಂಕ 28-08-2020 ರಂದು ಮಾನವಿ ಪಟ್ಟಣದ ಡಾನ್ ಡಾಬಾದ ಹಿಂದುಗಡೆ ಇರುವ ಖಾಲಿ ಸ್ಥಳದಲ್ಲಿ ಇಸ್ಪೆಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ  ಸಿ.ಪಿ. ,ಪಿ.ಎಸ್.ಐ  ಮಾನವಿ ಠಾಣೆರವರನ್ನು, ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಇಂದು ಬೆಳಿಗ್ಗೆ 11-45 ಗಂಟೆಗೆ ದಾಳಿ ಮಾಡಿ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಲಾಗಿ 11  ಜನರು ಸಿಕ್ಕಿ ಬಿದ್ದಿದ್ದು ಸೆರೆ ಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ 1] ನಗದು ಹಣ  30100/- ರೂ ಗಳು  2]  52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ಇಂದು ಬೆಳಿಗ್ಗೆ 11-45 ಗಂಟೆಯಿಂದ ಮಧ್ಯಾಹ್ನ 12-45 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತರ ಮೇಲೆ ಠಾಣೆ ಎನ್.ಸಿ.ಆರ್. ನಂ 40/2020 ರಲ್ಲಿ ನೊಂದಾಯಿಸಿಕೊಂಡು ಸಿ.ಪಿ.  ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ ಸಿ.ಪಿ. ಪರವಾನಿಗೆ ಪಡೆದುಕೊಂಡು ಬಂದು ನೀಡಿದ ಮೇರೆಗೆ ಮಧ್ಯಾಹ್ನ 2-00 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ  140/2020 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.