Thought for the day

One of the toughest things in life is to make things simple:

11 Oct 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ:

 ದಿ.09-10-2019ರಂದು ರಾತ್ರಿ 7-00ಗಂಟೆಗೆ ಮಂಜು ತಂದೆ ಮಲ್ಲಿಕಾರ್ಜುನ ಜಾತಿ-ಹೂಗಾರ,ವಯ-24ವರ್ಷ, ಉ-ವ್ಯವಸಾಯ, ಸಾ:ಕಲ್ಲೂರು ಪಿರ್ಯಾದಿದಾರ ಮತ್ತು ಗಾಯಾಳು ತಿಪ್ಪಣ್ಣ ಇಬ್ಬರು ಕೂಡಿ ಕಲ್ಲೂರು-ರಾಯಚೂರು ರಸ್ತೆಯಲ್ಲಿ ಕಲ್ಲೂರು ಗ್ರಾಮದ ಸಮೀಪ ಬೊಂಬಾಯಿ ಶೇಖರಪ್ಪನ ಮಠದ ಹತ್ತಿರ ಕಲ್ಲೂರು ಗ್ರಾಮದಿಂದ ಮಠದ ಕಡೆಗೆ ಮಠದ ಮುಂದಿನ ಕರೆಂಟಿನ ಕಂಬದ ಲೈಟಿನ ಬೆಳಕಿನಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುವಾಗ  ಹಿಂದಿನಿಂದ ಬಂದ ಆರೋಪಿ ಮೋಟಾರ ಸೈಕಲ್ ಸವಾರನು  ತಾನು ನಡೆಸುತ್ತಿದ್ದ ಬಜಾಜ್ ಡಿಸ್ಕವರಿ ಮೋಟಾರ ಸೈಕಲ್ ನಂ:ಕೆ.ಎ-36/ ವಾಯ್-0346ನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದವನೆ ತಿಪ್ಪಣ್ಣನಿಗೆ ಜೋರಾಗಿ ಟಕ್ಕರ ಕೊಟ್ಟಿ ದ್ದರಿಂದ ತಿಪ್ಪಣ್ಣನು ಕೆಳಗೆ ಬಿದ್ದು ತಲೆಗೆ ಬಲವಾದ ರಕ್ತವಾಗಿದ್ದು ಆರೋಪಿತನು ಸಹ ಸ್ವಲ್ಪ ಮುಂದೆ ಹೋಗಿ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ಸಾದಾ ಸ್ವರೂಪದ ಗಾಯಗೊಂಡು ಮೋಟಾರ ಸೈಕಲ ಜಕಂಗೊಂಡಿದೆ ಭಾರಿ ಸ್ವರೂಪದ ಗಾಯಗೊಂಡ ತಿಪ್ಪಣ್ಣನು ಮಾತನಾಡದಿದ್ದರಿಂದ ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದೆವು ಅಲ್ಲಿನ ವೈದ್ಯರು ನೋಡಿ ಹೆಚ್ಚಿನ ಚಿಕಿತ್ಸೆ ಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದರಿಂದ ತಿಪ್ಪಣ್ಣನನ್ನು ಬೆಂಗಳೂರು ಆಸ್ಪತ್ರೆಗೆ ಕಳಿಸಿ ಈ ದಿವಸ ತಡ ವಾಗಿ ಬಂದು ದೂರು ನೀಡುತ್ತಿರುವದಾಗಿ ನೀಡಿದ ದೂರಿನ ಮೇಲಿಂದ  ¹gÀªÁgÀ ¥ÉưøÀ oÁu  UÀÄ£Éß £ÀA§gÀ  133/2019 ಕಲಂ: 279,337,338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತದೆ