Thought for the day

One of the toughest things in life is to make things simple:

13 Feb 2021

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

     ದಿನಾಂಕ: 12.02.2021 ರಂದು ಇಡಪನೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಿರ್ಯಾದಿ ಗುಂಡುರಾವ್ ತಂದೆ ದೇವಯ್ಯ ಕೊಲಮಿ ಸಾ: ರಾಮ್ ರಾವ್ ಕ್ಯಾಂಪ್ ರವರು ದೂರನ್ನು ನೀಡಿದ್ದು ತನ್ನ ಮಗನಾದ ಚಿನ್ನ ತಂದೆ ಗುಂಡುರಾವ್ 10 ವರ್ಷ 4ನೇ ತರಗತಿ ಮತ್ತು ಪ್ರವೀಣ್ ಕುಮಾರ್ ತಂದೆ ಶಾಂತಪ್ಪ 8 ವರ್ಷ 2ನೇ ತರಗತಿ ಇವರುಗಳು ಬೆಳಿಗ್ಗೆ 9 ಗಂಟೆಗೆ  ಸರಕಾರಿ ಕಿರಿಯ ಪ್ರರ್ಥಮಿ ಶಾಲೆಗೆ ಹೋಗಿ ಮದ್ಯಾಹ್ನ 2ಗಂಟೆಯ ಸುಮಾರು ಝಂಢಾ ಕಟ್ಟೆಯ ಮೇಲೆ ಬ್ಯಾಗಗಳನ್ನುಟ್ಟು ಹೊರಗಡೆ ಹೋಗಿ ಸಂಜೆಯಾದರು ಇಬ್ಬರು ವಾಪಸ್ಸ್ ಮನೆಗೆ ಬಾರದೆ ಇರುವುದರಿಂದ ಕಾಣೆಯಾಗಿರುವ ಕುರಿತು ಪತ್ತೆ ಹಚ್ಚುವಂತೆ ನೀಡಿರುವ ದೂರಿನ ಆಧಾರದ ಮೇಲೆ ಇಡಪನೂರು ಪೊಲೀಸ್ ಠಾಣೆಯ ಗುನ್ನೆ ನಂಬರ 08/2021 ಕಲಂ 363 .ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

    ಇಂದು ದಿನಾಂಕ: 13.02.2021 ರಂದು ತಲಮಾರಿ ಗ್ರಾಮ ವ್ಯಾಪ್ತಿಯ ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಪ್ರಮೀಣ ಕುಮಾರ 8ವರ್ಷ ಈತನ ಮೃತದೇವ ಪತ್ತೆಯಾಗಿರುತ್ತದೆ. ಅದೇ ರೀತಿ ಚಿನ್ನ ತಂದೆ ಗುಂಡುರಾವ್ 10 ವರ್ಷ ಈತನ ಮೃದೇಹವು ಗಾಣದಾಳ ಗ್ರಾಮ ವ್ಯಾಪ್ತಿಯ ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಪತ್ತೆಯಾಗಿರುತ್ತದೆ. ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

3 Feb 2021

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 ಮಟಕಾ ಜಪ್ತಿ ಪ್ರಕರಣದ ಮಮಾಹಿತಿ.

     ದಿನಾಂಕ:02.02.2021 ರಂದು ರಾತ್ರಿ 8.40 ಗಂಟೆಗೆ ಪಿ.ಎಸ್.ಐ (ಕಾ.ಸು) ನೇತಾಜಿನಗರ ಠಾಣೆ ರಾಯಚೂರು ರವರು, ಆರೋಪಿ ಶೇಖ್ ಶಾಲಮ್ @ ಖಾನ್ ತಂದೆ ಶೇಖ್ ಮಹೆಬೂಬ್ ವ:34, ಜಾ: ಮುಸ್ಲಿಂ, ಉ: ಅಟೋ ಡ್ರೈವರ್ ಸಾ: ಜಹೀರಾಬಾದ ರಾಯಚೂರು ಈತನನ್ನು ಮತ್ತು ಮುದ್ದೆಮಾಲು ಮತ್ತು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದ ನೀಡಿದ್ದರ ಮೇರೆಗೆ ಸ್ವೀಕರಿಸಿಕೊಂಡು ಸದರಿ ಪ್ರಕರಣವು ಅಂಜ್ಞೆಯ ಅಪರಾದ ಆಗುತ್ತಿದ್ದರಿಂದ ಎನ್.ಸಿ 01/2021 ರಲ್ಲಿ ದಾಖಲಿಸಿ ಸದರಿ ಎನ್ .ಸಿ ಪ್ರಕರಣವನ್ನು ತನಿಖೆ ನಡೆಸಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ರಾತ್ರಿ  8.40 ಗಂಟೆಗೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆಯ ವಿವರದ ಸಾರಂಶವೇನಂದರೆ ಇಂದು ದಿನಾಂಕ:02.02.2021 ರಂದು ಸಾಯಂಕಾಲ 6.30 ಗಂಟೆಗೆ ಠಾಣಾ ಹದ್ದಿಯ ಶ್ರೀ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ ಅಶೋಕನಗರಕ್ಕೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನು ಮಟಕಾ  ಜೂಜಾಟದಲ್ಲಿ ತೊಡಗಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ  ಪಿಎಸ್ಐ ನೇತಾಜಿ ಠಾಣೆ ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಾಯಂಕಾಲ 7.30 ಗಂಟೆಗೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು  ಶೇಖ್ ಶಾಲಮ್ @ ಖಾನ್ ತಂದೆ ಶೇಖ್ ಮಹೆಬೂಬ್ ವ:34, ಜಾ: ಮುಸ್ಲಿಂ, ಉ: ಅಟೋ ಡ್ರೈವರ್ ಸಾ: ಜಹೀರಾಬಾದ ರಾಯಚೂರು  ಅಂತಾ ಹೇಳಿದ್ದು ಇವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 2010/- ರೂಪಾಯಿಗಳು  ಮತ್ತು ಒಂದು ಮಟಕಾ ನಂಬರ್ ಚೀಟಿ ಹಾಗೂ ಒಂದು ಬಾಲ್ ಪೆನ್ನು ಸಿಕ್ಕಿದ್ದು, ದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದರ ಮೇರೆಗೆ  ನೇತಾಜಿ ನಗರ ಪೊಲೀಸ್ ಠಾಣಾ ಅಪರಾಧ ಸಂ:05/2021  ಕಲಂ.78 (3)  ಕೆ.ಪಿ ಕಾಯ್ದೆ ಪ್ರಕಾರ  ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ 01.02.2021 ರಂದು 17.30 ಗಂಟೆಗೆ ರೋಡಲಬಂಡಾ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಂಗಪ್ಪ ತಂದೆ ಹೂವಪ್ಪ ವಯಾ: 30 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ರೋಡಲಬಂಡಾ ಗ್ರಾಮ ತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿತನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 05/2021 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 02.02.2021 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 20/2021  ಕಲಂ: 78(3)  ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

1 Feb 2021

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರರಕಣದ ಮಾಹಿತಿ.

          ದಿನಾಂಕ: 31-01-2021 ರಂದು ಮಧ್ಯಾಹ್ನ 3-45 ಗಂಟೆ ಸುಮಾರಿಗೆ ರೋಪಿ ಆಂಜಿನಯ್ಯ ತಂದೆ ಅಮರೇಶ ವಯಾ: 25, ಜಾತಿ: ನಾಯಕ ಉ: ಚಾಲಕ ಸಾ: ಅರಕೇರ ತಾ: ದೇವದುರ್ಗ ಈತನು ತನ್ನ ವಾಹನ ನಂ ಕೆ.ಎ-36-ಬಿ-4734 ನೇದ್ದರಲ್ಲಿ ರಾಯಚೂರು-ಮಂತ್ರಾಲಯ ರಸ್ತೆಯ  ಮಲಿಯಾಬಾದ್ ಕ್ರಾಸ ಹತ್ತಿರ ತನ್ನ ವಾಹನ ಮಾಲೀಕ ಹಾಗೂ ವಿಜಯ ತಂದೆ ತಿಮ್ಮಾರೆಡ್ಡಿ ಸಾ: ಮುರ್ಕಿದೊಡ್ಡಿ ಈತನು ಹೇಳಿದ ಮೇರೆಗೆ ಸರಕಾರದಿಂದ ಬಡವರಿಗೆ ವಿತರಣೆ ಮಾಡುವ ಅಗತ್ಯ ವಸ್ತುವಾದ ಅಕ್ಕಿ ಚೀಲಗಳನ್ನು ಅಕ್ರಮ ಲಾಭಕ್ಕಾಗಿ ಮಾರಾಟಮಾಡಲು ಅಕ್ರಮವಾಗಿ ಸಾಗಾಟಮಾಡುತ್ತಿರುವಾಗ ಫಿರ್ಯಾದಿದಾರರಾದ ಸಿ.ಪಿ.ಐ ಯರಗೇರರವರು ಮಾಹಿತಿ ಮೇರೆಗೆ ಅಹಾರ ನಿರೀಕ್ಷಕರು , ಸಿಬ್ಬಂದಿಯೊಂದಿಗೆ ದಾಳಿಮಾಡಿ 57 ಗೊಬ್ಬರದ ಚೀಲದಲ್ಲಿರುವ ಅಕ್ಕಿ, ವಾಹನ ಹಾಗೂ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ನೀಡಿದ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 17/2021 ಕಲಂ 3,7 ಇ.ಸಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

31 Jan 2021

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄlPÁzÁ½ ¥ÀæPÀgÀt ªÀiÁ»w.

       ದಿನಾಂಕ-30/01/2021 ರಂದು ಬೆಳಿಗ್ಗೆ 11-05 ಗಂಟೆಗೆ ಆರೋಫಿ ಬೀಮಣ್ಣ ತಂದೆ ಹನುಮಂತ ವಯಸ್ಸು:58 ವರ್ಷ ಜಾ: ಮಡಿವಾಳ ಉ: ಕೂಲಿಕೆಲಸ ಸಾ: ಅಮೀನಗಡ ಗ್ರಾಮ ನೇದ್ದವನು ಅಮೀನಗಡ ಗ್ರಾಮದ ಹುಚ್ಚಬುಡ್ಡಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಮಟಕಾ ಜೂಜಾಟ ತೊಡಗಿದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1).ಮಟಕಾ ನಂಬರ್‌ ಬರೆದ ಪಟ್ಟಿ ಅ.ಕಿ ಇಲ್ಲ 2)ನಗದು ಹಣ.1060/-ರೂ 3)ಒಂದು ಬಾಲ್‌ ಪೆನ್ನು ಅ.ಕಿ.ಇಲ್ಲ ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ಕೇಳಿದಾದ ಎ-2 ಶಿವಪುತ್ರಪ್ಪ  ಇವರಿಗೆ ಕೊಡುವುದಾಗಿ ಹೇಳಿದ್ದು ಇರುತ್ತದೆ. ನಂತರ ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಆರೋಪಿತರ ಮೇಲೆ ಠಾಣಾ ಎನ್.ಸಿ ನಂ.02/2021 ದಾಖಲು ಮಾಡಿಕೊಂಡು ನಂತರ ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಆರೋಪಿತರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ಜೆಎಮ್ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ- 30/01/2021 ರಂದು ಸಂಜೆ  6.10 ಗಂಟೆಗೆ ಪಿ.ಎಸ್.ಐ ರವರು ಪಡೆದುಕೊಂಡು ವಾಪಾಸ್ ಠಾಣೆಗೆ ಇಂದು ರಾತ್ರಿ 7.00 ಗಂಟೆ ಬಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ: 06/2021 ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

29 Jan 2021

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

¥ÉÆ°Ã¸ï ¥ÀæPÀluÉ    

     ¢£ÁAPÀ-28/01/2021 gÀAzÀÄ 17-00 UÀAmÉUÉ ¦üAiÀiÁð¢zÁgÀgÀÄ oÁuÉUÉ ºÁdgÁV zÀÆgÀÄ ¤ÃrzÀ ¸ÁgÀA±ÀªÉ£ÉAzÀgÉ EAzÀÄ ¢£ÁAPÀ-28/01/2021 gÀAzÀÄ ªÀÄzÁåºÀß 2-00 UÀAmÉ ¸ÀĪÀiÁjUÉ ¦üAiÀiÁð¢zÁgÀgÀÄ ªÀÄvÀÄÛ DvÀ£À ¸ÉßûvÀgÀÄ PÀÆr  ºÉÆ® £ÉÆÃqÀĪÀÅzÀgÀ ¸À®ÄªÁV J£ï.Dgï.©.¹ PÉ£Á¯ï£À r¹Öç§Æålgï £ÀA-16 gÀ ©.r £ÀA-01 gÀ CA§tÚ vÀAzÉ gÀAUÀ¥Àà £ÁAiÀÄPÀ EªÀgÀ ºÉÆ®zÀ ¸ÀªÉð £ÀA-51 £ÉÃzÀÝgÀ°è §gÀĪÀ PÁ®ÄªÉAiÀİè MAzÀÄ AiÀiÁªÀÅzÉÆÃ ±ÀªÀªÀÅ ¤Ãj£À°è ºÀjzÀÄ §AzÀÄ ¨ÉÆÃgÀ¯ÁV ©¢ÝzÀÄÝ ¸ÀzÀj ªÀÄÈvÀ zÉúÀPÉÌ vÀ¯É¬Ä®èzÀAvÉ PÀAqÀÄ §A¢zÀÄÝ, ±ÀªÀªÀ£ÀÄß ¤Ãj¤AzÀ vÉUÉzÀÄ £ÉÆÃqÀ¯ÁV ªÀÄÈvÀ zÉúÀPÉÌ vÀ¯ÉAiÀÄÄ EgÀ°®è. JgÀqÀÄ ªÉÆtPÁ®ÄUÀ½UÉ vÀgÀazÀ UÁAiÀÄUÀ¼ÁVzÀÄÝ ºÁUÀÄ JqÀUÁ®Ä ªÉÆtPÁ®Ä PɼÀUÉ vÀgÀazÀ UÁAiÀÄUÀ¼ÁVzÀÝAvÉ EgÀĪÀ ±ÀªÀªÀÅ PÀAqÀÄ §A¢zÀÄÝ, ºÁUÀÆ ªÀÄÈvÀ zÉúÀzÀ UÀÄ¥ÁÛAUÀ ¨sÁUÀªÁzÀ vÉÆgÀqÀÄ ©ÃdUÀ¼ÀÄ ¨ÁªÀÅ §A¢zÀÄÝ »¸ÀÄQ ¸Á¬Ä¹zÀAvÉ PÀAqÀÄ §A¢gÀÄvÀÛzÉ .¸ÀzÀj ±ÀªÀªÀÅ ¸ÀĪÀiÁgÀÄ 25-30 ªÀAiÀĹì£À C£ÁªÀÄzÉÃAiÀÄ UÀAqÀ¹£À ±ÀªÀªÁVgÀÄvÀÛzÉ. AiÀiÁgÉÆÃ zÀĵÀÌ«ÄðUÀ¼ÀÄ AiÀiÁªÀÅzÉÆÃ zÀÄgÀÄzÉÝñÀPÉÌ PÉÆ¯É ªÀiÁr ªÀÄÈvÀzÉúÀzÀ gÀÄAqÀ vÉUÉzÀÄ ¸ÁPÁëöåzsÁgÀUÀ¼À£ÀÄß £Á±À¥Àr¸ÀĪÀ GzÉÝñÀ¢AzÀ ¤j£À°è ©¸ÁQ ºÉÆÃVzÀÄÝ EgÀÄvÀÛzÉ. ªÀÄÈvÀ ªÀåQÛAiÀÄ ºÉ¸ÀgÀÄ «¼Á¸À w½zÀÄ §A¢gÀĪÀÅ¢®è. ¸ÀzÀj WÀl£ÉAiÀÄÄ FUÉÎ CAzÁdÄ JgÀqÀÄ ¢£ÀUÀ¼À »AzÉ ¢£ÁAPÀ-26/01/2021 jAzÀ ¢£ÁAPÀ-28/01/2021 gÀ ªÀÄzÁåºÀß 2-00 UÀAmÉAiÀÄ CªÀ¢üAiÀİè dgÀÄVzÀAvÉ PÀAqÀÄ §gÀÄvÀÛzÉ.¦ügÁå¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA-12/2021 PÀ®A-302,201 L¦¹ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ. 




23 Jan 2021

Press Note

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

            ದಿ.21-01-2021 ರಂದು ಸಂಜೆ 5-15 ಗಂಟೆಗೆ ಮಾಚನೂರು ಗ್ರಾಮದ ಸೀಮೆಯ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆಇಟ್ಟು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ ಸಿರವಾರ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಕೆಲವು ಜನರು ಓಡಿ ಹೋಗಿ 1] ತಿಮ್ಮಪ್ಪ ತಂದೆ ಈಶ್ವರಪ್ಪ ವಯ-40 ವರ್ಷ,ಜಾತಿ:ನಾಯಕ, ಉ:ವ್ಯವಸಾಯ, ಸಾ:ಕಪಗಲ್  ಹಾಗೂ ಇತರೆ 7 ಜನರು ಸಿಕ್ಕು ಬಿದ್ದಿದ್ದು ಸಿಕ್ಕುಬಿದ್ದವರ ತಾಬಾದಿಂದ ಮತ್ತು ಕಣದಲ್ಲಿಂದ ಜಪ್ತಿ ಮಾಡಿಕೊಂಡಿರುವ ಹಣ ರೂ. 30,230/-,ಹಾಗೂ 52 ಇಸ್ಪೇಟ್ ಎಲೆಗಳನ್ನು ಮತ್ತು ಜೂಜಾಟವಾಡಲು ಬಂದಿರುವ ಆರೋಪಿತರು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದ ವಿವಿಧ ಕಂಪನಿಯ 13 ಮೋಟಾರ ಸೈಕಲಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿ ಬಿದ್ದ 8 ಜನ ಆರೋಪಿತರೊಂದಿಗೆ ದಿ.21-01-2021ರಂದು ರಾತ್ರಿ 8-15ಗಂಟೆಗೆ ಠಾಣೆಗೆ ಬಂದು ಸಿಕ್ಕುಬಿದ್ದ ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಒಪ್ಪಿಸಿ ಪ್ರಕರಣ ದಾಖಲಿಸಲು ಪಿ.ಎಸ್.ಐ.ರವರು ಕೊಟ್ಟ ದೂರನ್ನು ಸ್ವೀಕರಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದಿಕೊಂಡು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 9/2021 ಕಲಂ 87 ಕ.ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಕೆ ಕೈಗೊಂಡಿರುತ್ತಾರೆ. 

19 Jan 2021

Press Note

 ಪತ್ರಿಕಾ ಪ್ರಕಟಣೆ

** *** **

        ದಿನಾಂಕ:19-12-2020 ರಂದು ರಾತ್ರಿ 11-00 ಗಂಟೆಯ ನಂತರದಿಂದ ದಿನಾಂಕ: 20-12-2020 ರಂದು ನಸುಕಿನ 05-00 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಸಿಂಧನೂರು (RH3) ಸೀಮಾದಲ್ಲಿರುವ ಬೀಜನ್ ಮಂಡಲ್ ಇವರ ಹೊಲ ಸರ್ವೆ ನಂ.531/530 ರಲ್ಲಿ ಶೆಡ್ ದಲ್ಲಯ ಬೀಜನ್ ಮಂಡಲ್ ರವರ ಒಟ್ಟು ಅ.ಕಿ.ರೂ.4,52,000/- ಬೆಲೆ ಬಾಳುವ 60 ಹಂದಿಗಳನ್ನು ಯಾರೋ ಕಳ್ಳರು ಎರಡು ಪಿಕ್ ಅಪ್ ವಾಹನಗಳಲ್ಲಿ ಬಂದು ಕಳುವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸದರಿ ಬೀಜನ್ ಮಂಡಲ್ ತಂದೆ ಗೋಪಲ ಮಂಡಲ್ ಸಾ:ಆರ್.ಹೆಚ್.ಕ್ಯಾಂಪ್ ನಂ:03, ತಾ:ಸಿಂಧನೂರು ಇವರು ಕೊಟ್ಟ ದೂರಿನ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

           ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಪೊಲೀಸ್ ಉಪಾಧೀಕ್ಷಕರು ಸಿಂಧನೂರು ಹಾಗೂ ಶ್ರೀ ಜಿ.ಚಂದ್ರಶೇಖರ ಪೊಲೀಸ್ ವೃತ್ತ ನಿರೀಕ್ಷಕರು ಸಿಂಧನೂರು ರವರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರವರಾದ           ಶ್ರೀ ಜಿ.ಎಸ್ ರಾಘವೇಂದ್ರ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಅವರ ಸಿಬ್ಬಂದಿಯವರಾದ ಯಮನಪ್ಪ-ASI, ರಾಘವೇಂದ್ರ HC-03, ದ್ಯಾಮಣ್ಣ PC-396, ಶರಣಪ್ಪ PC-272, ದೇವರೆಡ್ಡಿ PC-671, ರಾಘವೇಂದ್ರ PC-166, ಝಾಕೀರ್ PC-304 ಹಾಗೂ ಶರಣಬಸವ PC-238 ರವರನ್ನೊಳಗೊಂಡ ತಂಡವನ್ನು  ರಚಿಸಲಾಗಿತ್ತು.

           ಸದರಿ ತಂಡದವರು ಇಂದು ದಿನಾಂಕ:18-01-2021 ರಂದು ಶ್ರೀಪುರಂಜಂಕ್ಷನದಲ್ಲಿ ಆರೋಪಿತರಾದ 1). ಅಂಬಣ್ಣ @ ಚರಣ ತಂದೆ ರಾಮಪ್ಪ ಮೋಡಿಕಾರ್, ಸಾ:ರವುಡಕುಂದಾ, ತಾ:ಸಿಂಧನೂರು, 2).ಮಂಜ ತಂದೆ ದುರುಗಪ್ಪ ಮೋಡಿಕಾರ್,

ಸಾ:ಹಿರೇಕೆರೂರು, ತಾ:ಹಾವೇರಿ, ಹಾ.ವ:ನಾಗನಕಲ್, ತಾ:ಕಾರಟಗಿ, 3).ಯಲ್ಲಪ್ಪ ತಂದೆ ವೆಂಕರಮಣ ಕೊರವರು,   ಸಾ:ಸಾಲಗುಂದಾ, ತಾ:ಸಿಂಧನೂರು, 4).ಹನುಮಂತ ತಂದೆ ಯಲ್ಲಪ್ಪ, ಕುಂಚಕೊರವರು, ಸಾ:ನಜೀರ್ ಕಾಲೋನಿ ಕಾರಟಗಿ.

5).ಹನುಮೇಶ ತಂದೆ ದುರುಗಪ್ಪ ಕೊರವರು,  ಸಾ:ತುರ್ವಿಹಾಳ್ , ತಾ:ಸಿಂಧನೂರು ಇವರುಗಳನ್ನು ಬುಲೆರೋ ಪಿಕ್ ಅಪ್ ವಾಹನ ಸಮೇತ ಹಿಡಿದುಕೊಂಡು ನಂತರ ಕಳುವು ಮಾಲು ಸ್ವೀಕೃತಿ ಮಾಡಿದ 6).ದುರುಗಪ್ಪ ತಂದೆ ಗಂಗಪ್ಪ ಗೋಡಗಿ, ಕುಂಚಕೊರವರು, ಸಾ:ನೀಲಕಂಠೇಶ್ವರ ಗುಡಿ ಹತ್ತಿರ ಗಂಗಾವತಿ & 7).ವೆಂಕಟೇಶ ತಂದೆ ದುರುಗಪ್ಪ ಗೋಡಗಿ, ಕುಂಚಕೊರವರು, ಸಾ:ನೀಲಕಂಠೇಶ್ವರ ಗುಡಿ ಹತ್ತಿರ ಗಂಗಾವತಿ ಇವರುಗಳನ್ನು ಹಿಡಿದುಕೊಂಡಿದ್ದು, ಆರೋಪಿತರಿಂದ ಒಟ್ಟು ಅ.ಕಿ.ರೂ.4,52,000/- ಬೆಲೆ ಬಾಳುವ 60 ಹಂದಿಗಳನ್ನು, ಒಂದು ಬೊಲೆರೋ ಪಿಕ್ ಅಪ್ ವಾಹನ ನಂ:KA-37 B-2596 ಅ.ಕಿ.ರೂ.10,00,000=00 ನೇದ್ದನ್ನು ಮತ್ತು ಹಂದಿ ಹಿಡಿಯುವ ಬಲೆಗಳು,  ಟಾರ್ಚ್ ಹಾಗೂ ಬಡಿಗೆಗಳನ್ನು ಹೀಗೆ ಒಟ್ಟು 14,52,000=00 ರೂ ಬೆಲೆಬಾಳುವ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. 

        ಸದರಿ ತಂಡದ ಕಾರ್ಯವನ್ನು ಶ್ರೀ ನಿಕಮ್ ಪ್ರಕಾಶ್ ಅಮ್ರಿತ್ IPS  ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ಹಾಗೂ ಶ್ರೀ ಶ್ರೀಹರಿಬಾಬು KSPS ಹೆಚ್ಚುವರಿ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಶ್ಲಾಘಿಸಿರುತ್ತಾರೆ.

16 Jan 2021

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದೇವಿನಗರದ ನ್ಯಾಯಾಬೆಲೆ ಅಂಗಡಿ ಹತ್ತಿರ ಒಬ್ಬ ವ್ಯಕ್ತಿಯನ್ನು ಕೊಲೆ : ಪ್ರಕರಣ ದಾಖಲು

           ದಿನಾಂಕ 16.01.2021 ರಂದು ಬೆಳಿಗ್ಗೆ 08 :15 ಗಂಟೆಗೆ ಶ್ರೀಮತಿ ರಾಜೇಶ್ವರಿ ಇವರು ಠಾಣೆಗೆ ಹಾಜಾರಾಗಿ ದೂರು ಸಲ್ಲಿಸಿದ್ದೇನಂದರೆ ತನಗೆ ರಾಯಚೂರಿನ ದೇವಿನಗರದ ದರ್ಶೇಲಿ ಇವರ ಮಗನಾದ ತಿರುಮಲೇಶ ಈತನೊಂದಿಗೆ ಮದುವೆಯಾಗಿದ್ದು ದಿನಾಂಕ 15.01.2021 ರಂದು ರಾತ್ರಿ 8 :00 ಗಂಟೆಗೆ ತನ್ನ ಗಂಡನು ಸರಾಯಿ ತರುವುದಾಗಿ ಹೇಳಿ ಹೊಗಿದ್ದು ರಾತ್ರಿ 10 :00 ಗಂಟೆಯಾದರು ವಾಪಸ್ ಮನೆಗೆ ಬರದೇ ಇದ್ದರಿಂದ ತಮ್ಮ ಚಿಕ್ಕಮ್ಮಳಾದ ಸರೋಜಮ್ಮ ಈಕೆಯ ಮನೆಯ ಹತ್ತಿರ ಹೋಗಿರಬಹುದು ಅಂತಾ ಅಲ್ಲಿಗೆ ಹೋಗಿ ವಿಚಾರಿಸಲು ಅಲ್ಲೀಯು ಸಹ ಬಂದಿರುವುದಿಲ್ಲ ಅಂತಾ ತಿಳಿಸಿದರು. ಮನೆಯಲ್ಲಿ ಯಾರು  ಇಲ್ಲದ ಕಾರಣ ತಾನು ದೊಡ್ಡ ಆತ್ತೆಯಾದ ಲಕ್ಷ್ಮೀ ಗಂಡ ಗಂಗಪ್ಪ ದೇವಿನಗರ ಇವರ ಮೆನೆಗೆ ಹೋಗಿ ಮಲಗಿಕೊಂಡಿದ್ದು ನಂತರ ದಿನಾಂಕ 16-01-2021 ಬೆಳಿಗ್ಗೆ 5 :00 ಗಂಟೆ ಸುಮಾರಿಗೆ ಎದ್ದು ಕೈ ಕಾಲು ಮುಖ ತೊಳೆದುಕೊಂಡು ಮನೆಯ ಹೊರಗಡೆ ಬಂದಾಗ ತಮ್ಮ ಓಣಿಯ ಜನರು ದೇವಿನಗರದ ನ್ಯಾಯಾಬೆಲೆ ಅಂಗಡಿ ಹತ್ತಿರ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುತ್ತಾರೆ ಅಂತಾ ಮಾತನಾಡುವ ವಿಷಯ ತಿಳಿದು ತಾನು ಅಲ್ಲಿಗೆ ಹೋಗಿ  ನೋಡಲು ಮೃತ ವ್ಯಕ್ತಿಯ ಮೈಮೇಲಿದ್ದ ಬಟ್ಟೆ ಮತ್ತು ಚಪ್ಪಲಿಗಳನ್ನು ನೋಡಿ ಗುರುತಿಸಿದ್ದು. ದಿನಾಂಕ : 15.01.2021 ರ ರಾತ್ರಿ 8 :00 ಗಂಟೆಯಿಂದ ದಿನಾಂಖ 16.01.2021ರ ಬೆಳಗಿನ ಜಾವ 05 :00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ದೇವಿನಗರದ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಮುಂದಿನ ಅವರಣದಲ್ಲಿ ಸೀಮೆಂಟ್ ನಿಂದ ಕೂಡಿದ ಕೊಡ್ಡ ಗಡ್ಡೆ ಮತ್ತು ದೊಡ್ಡ ಕಲ್ಲುನಿಂದ ಮುಖ ತಲೆಯ ಮೇಲೆ ಎತ್ತಿಹಾಕಿ ಕಲೊಲೆ ಮಾಡಿದ್ದು ಇಎರುತ್ತದೆ. ತನ್ನ ಗಂಡನನ್ನು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಮತ್ತು ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ. ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಮೊ.ಸಂ.  01/2021 ಕಲಂ 302 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.