Pages

6 Jan 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ:04.01.2020 ರಂದು ರಾತ್ರಿ 0700 ಗಂಟೆಯ ಸುಮಾರಿಗೆ ರಾಯಚೂರು ಉಂಡ್ರಾಳದೊಡ್ಡಿ ರಸ್ತೆಯಲ್ಲಿ ಆಯಾಜಪುರ್ ಗ್ರಾಮದ ಕೆರೆಯ ಕಟ್ಟೆಯ ಕೆಳಗೆ ರಾಘವೇಂದ್ರರಾವ್ ಕುಲ್ಕಾರ್ಣಿ ಇವರ  ಹೊಲದ ಹತ್ತಿರ, ಫಿರ್ಯಾದಿಯ ಅಣ್ಣನ ಮಗನಾದ ವೆಂಕಟೇಶ ಈತನು ತನ್ನ ಹಿರೋ ಹೊಂಡಾ  ಮೋಟರ್ ಸೈಕಲ್ ನಂ. ಕೆ.ಎ 36ಹೆಚ್ 5845 ನೇದ್ದರ ಮೇಲೆ ಹುಲ್ಲುತರಲು, ಆಯಾಜಪುರ್ ಕಡೆಯಿಂದ ಉಂಡ್ರಾಳದೊಡ್ಡಿ ರಸ್ತೆಯ ಎಡಬದಿಯಲ್ಲಿ ಹೊರಟಾಗ, ಹಿಂದುಗಡೆಯಿಂದ ಯಾವುದೊ ವಾಹನದ ಚಾಲಕನು ರಾಯಚೂರು ರಸ್ತೆಯ ಕಡೆಯಿಂದ ತನ್ನ ವಾಹನವನ್ನು ಜೋರಾಗಿ ನಿರ್ಲಕ್ಷತನಿಂದ ನಡೆಸಿಕೊಂಡು ಬಂದು, ವೆಂಟೇಶನ ಮೋಟರ್ ಸೈಕಲಗೆ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ , ವೆಂಕಟೇಶನು ಮೋಟರ್ ಸೈಕಲ್ ಸಮೇತ, ಕೆರೆಕಟ್ಟೆಯ ಕಲ್ಲಿಗೆ ಬಿದ್ದು, ತಲೆ ಹೊಡೆದು ಮೆದುಳು ಹೊರಗೆ ಬಂದು, ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು , ಟಕ್ಕರ ಕೊಟ್ಟ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ, ಹಾಗೇಯೆ ಮುಂದಕ್ಕೆ, ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ.01/2020 ಕಲಂ:279.304(ಎ) ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.