Pages

19 Dec 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

gÀ¸ÉÛ CWÁvÀ ¥ÀæPÀgÀtzÀ ªÀiÁ»w.
ದಿನಾಂಕ:18-12-2019 ರಂದು 8-20 ಪಿ.ಎಮ್ ದ ಸುಮಾರಿಗೆ ಸಿಂಧನೂರು-ಕುಷ್ಟಗಿ ಮುಖ್ಯ ರಸ್ತೆಯ ಕ್ಲಾಸ್ ಎಂ.ಜಿ ಆಟೋ ಸರ್ವಿಸ್ ಅಂಗಡಿಯ ಮುಂದಿನ ರಸ್ತೆಯಲ್ಲಿ ಆರೋಪಿ-1 ಸ್ವಿಪ್ಟ್ ಡಿಜೈರ್ ಕಾರ ನಂ KA-37-M-6673 ನೇದ್ದರ ಚಾಲಕ ಕಾರನ್ನು ಅತೀವೇಗವಾಗಿ ಹಾಗೂ ಅಲಕ್ಷತನ ದಿಂದ ಚಲಾಯಿಸುತ್ತಾ ಒಮ್ಮೆಲೆ ಎಡಕ್ಕೆ ತೆಗೆದುಕೊಂಡು ಕುಷ್ಟಗಿ ರಸ್ತೆಯ ಕಡೆಯಿಂದ ಸಿಂಧನೂರು ಕಡೆಗೆ ಬಲಕ್ಕೆ ತಿರುಗಿಸುವಾಗ ಮನೋಜನ ಮೋಟರ್ ಸೈಕಲ್ ನಂ KA-37-EA-3123 ನೇದ್ದಕ್ಕೆ ಡಿಕ್ಕಿಯಾಗಿದ್ದರಿಂದ ಮನೋಜನು ಡಿವೈಡರ್ ಗೆ ಬಿದ್ದು,ರಸ್ತೆಗೆ ಬಿದ್ದನು, ಅದೇ ಸಮಯಕ್ಕೆ ಕುಷ್ಟಗಿ ಕಡೆಯಿಂದ ಸಿಂಧನೂರು ಕಡೆಗೆ ಆರೋಪಿ-2 ಫಾರ್ಚೂನರ್ ಕಾರ ನಂ KA-50-P-0999 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿ ನಡೆಸಿಕೊಂಡು ಬಂದು ರಸ್ತೆಯಲ್ಲಿ ಬಿದ್ದಿದ್ದ ಮನೋಜನ ಮೇಲೆ ಹಾಯಿಸಿ ಹೊರಟು ಹೋಗಿದ್ದು, ಮನೋಜನಿಗೆ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ಹಾಗೂ ಸಾದಾ ಸ್ವರೂಪ ಗಾಯಗಳಾಗಿದ್ದು. ಇಲಾಜು ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆ ತಂದು ಸೇರಿಕೆ ಮಾಡಿದ್ದು, ಇಲಾಜು ಫಲಕಾರಿಯಾಗದೇ 8-50 ಪಿ.ಎಮ್ ಕ್ಕೆ ಮನೋಜನ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ಮೃತನ ಮಾವ T.ಸತೀಶ ಈತನು ಬರೆಯಿಸಿಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರ ಪೊಲಿಸ್ ಠಾಣಾ ಗುನ್ನೆ ನಂ.71/2019, ಕಲಂ. 279,304() ಐಪಿಸಿ ಮತ್ತು 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ದಿನಾಂಕ-18.12.2019 ರಂದು ರಾತ್ರಿ 9.30 ಗಂಟೆಗೆ ಫಿರ್ಯಾದಿ ²æÃªÀÄw £ÀgÀ¸ÀªÀÄä vÀAqÀ ¸ÀAUÀ¥Àà  60ªÀµÀð eÁ:ªÀiÁ¢UÀ G:ªÀÄ£ÉPÉ®¸À ¸Á:eÁUÀlUÀ¯ ರವರು ಠಾಣೆಗೆ ಹಾಜರಾಗಿ  ಲಿಖಿತ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ ಇಂದು ದಿನಾಂಕ-18.12.2019 ರಂದು 5.30 ಪಿ ಎಮ್ ಸುಮಾರಿಗೆ ಫಿರ್ಯಾದಿ ಮೊಮ್ಮಗನಾದ ಬೆಟ್ಟಪ್ಪ ತಂದ ಬಸವರಾಜ ಇತನು ಜಾಗಟಗಲ್ ಗ್ರಾಮದ ಅಂಬೇಡ್ಕರ್  ಸರ್ಕಲ್ ನಲ್ಲಿ ಜಾತ್ರೆಗೆ ಹೋಗಿದ್ದಾಗ ರಾಚಯ್ಯಸ್ವಾಮಿ ತಂದೆ ಗಡ್ಡೆಯ್ಯಸ್ವಾಮಿ ಈತನು ಬೆಟ್ಟಪ್ಪನು ಹೋಗುವಾಗ ಮೈ ಮುಟ್ಟುತ್ತೆನೆಲೇ ಮಾದಿಗ ಸೂಳೆ ಮಗನೆ  ಎಂದು ಫಿರ್ಯಾದಿ ಮೊಮ್ಮಗನಿಗೆ ಹೊಡೆಯುತ್ತಿರುವಾಗ ಫಿರ್ಯಾದಿ ತನ್ನ ಮೊಮ್ಮಗನಿಗೆ ಯಾಕೆ ಹೊಡೇತೀರಿ ಎಂದು ಕೇಳಿದಾಗ ಫಿರ್ಯಾದಿಗೆ  ಬೆನ್ನಿಗೆ ಕೈಯಿಂದ ಹೊಡೆದಿದ್ದು ನಂತರ ಬಿಡಿಸಲು  ಬಂದ ಮಲ್ಲಪ್ಪನಿಗೆ  ಮಹಾದೇವಪ್ಪನು ಎಲೇ ಮಾದಿಗ ಸೂಳೆ ಮಗನೇ ನೀನೆಕೆ ಅಡ್ಡ ಬರುತ್ತೀ ಎಂದು ಕಾಲಿನಿಂದ ಒದ್ದಿದ್ದು ನಂತರ ನಿಂಗಪ್ಪ,ಯಲ್ಲಪ್ಪ ಜಾತಿ:ಮಾದಿಗ ಇವರು ಬಿಡಿಸಲು ಬಂದಾಗ ಅವರಿಗೆ ಶೇಖರಪ್ಪ,ಬಸವರಾಜ,ಮಲ್ಲಪ್ಪ,ಹಂಪಯ್ಯ ಸೇರಿಕೊಂಡು ಫಿರ್ಯಾದಿಗೆ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡಿ ಸೀರೆ ಸೆರಗು ಹಿಡಿದು ಕಾಲಿನಿಂದ ಒದ್ದಿದ್ದು,ಫಿರ್ಯಾದಿ ಹಾಗೂ ಅಕೆಯ ಮೊಮ್ಮಗ ಮನೆಗೆ ಓಡಿ ಬಂದಾಗ ಫಿರ್ಯಾದಿಗೆ ಹಾಗೂ ಬೆಟ್ಟಪ್ಪನಿಗೆ ಮತ್ತು ಯಲ್ಲಮ್ಮ ಗಂಡ ಹನುಮಂತ ಸಾ:ಅಮರಾತಿ ಹಾಗೂ ಮಲ್ಲಪ್ಪ,ನಿಂಗಪ್ಪ  ಜಾ:ಮಾದಿಗ ಇವರಿಗೆ ಆರೋಪಿತರೆಲ್ಲರು ಗುಂಪು ಕಟ್ಟಿಕೊಂಡು ಬಂದು ಏಳೆ ಮಾದಿಗ ಸೂಳೆ ಮಕ್ಕಳೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಫಿರ್ಯಾದಿಯ ಮನೆಯೊಳಗೆ ನುಗ್ಗಿ ಬೈದಾಡಿದ್ದು ಅಲ್ಲದೇ ಇವರೆಲ್ಲರು ಸೇರಿಕೊಂಡು ಕಟ್ಟಿಗೆ,ಕಲ್ಲ,ಚಾಕು,ಚೂರಿ,ಕೊಡಲಿಗಳನ್ನು ಕೈಯಲ್ಲಿ ಹಿಡಿದುಕೊಂಡು  ಮಾದಿಗ ಕೇರಿಗೆ ನುಗ್ಗಿ ಮಾರಣಾಂತಿಕ  ಹಲ್ಲೆ ಮಾಡಿದ್ದು  ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಲಿಖಿತ ಫಿರ್ಯಾದಿ ಮೇಲಿಂದ ಗಬ್ಬೂರು ಪೊಲೀಸ್ ಠಾಣಾ ಗುನ್ನೆ ನಂ-89/2019 ಕಲಂ:143.147.148.323.324.354.(ಬಿ)448.504.506 ರೆ/ವಿ 149 ಐಪಿಸಿ ಮತ್ತು 3(1),(ಆರ್)(ಎಸ್),(ಡಬ್ಲೂ),3(2),(Va) ಎಸ್.ಸಿ/ಎಸ್.ಟಿ ತಿದ್ದುಪಡೆ ಕಾಯ್ದೆ-2015 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ವರದಕ್ಷಿಣ ಕಿರುಕುಳ ಪ್ರಕರಣದ ಮಾಹಿತಿ.
ದಿನಾಂಕ 18/12/2019 ರಂದು ರಾತ್ರಿ 20-15  ಗಂಟೆಗೆ ಪಿರ್ಯಾದಿ ಚೌಡಮ್ಮ ಗಂಡ ಜಿ.ರಂಗಡು 31 ವರ್ಷ ಜಾ-ಗೊಲ್ಲರು ಉ-ಶೂಶ್ರಕಿ ಸಾ-ಪುಲಕುರ್ತಿ ತಾ-ಕೊಡಮೂರು ಜಿ-ಕರ್ನೂಲ್. ಹಾ.-ಪಾಪರಾವ್ ಕ್ಯಾಂಪ್ ತಾ-ಸಿಂಧನೂರು ರವರು ಠಾಣೆಗೆ ಹಾಜರಾಗಿ ಗಣಕಿಕೃತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ದಿನಾಂಕ-21/12/2018 ರಂದು ಪಿರ್ಯಾಧಿದಾರಳಿಗೆ ಆರೋಪಿ ಜಿ.ರಂಗಡು ಈತನೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ಪಿರ್ಯಾಧಿದಾರಳ ಗಂಡ ಮತ್ತು ಆತನ ತಂದೆ ತಾಯಿಯವರ ಬೇಡಿಕೆಯಂತೆ ವರದಕ್ಷಿಣೆಯಾಗಿ 02 ತೊಲೆ ಬಂಗಾರ ನಗದು ಹಣ 2 ಲಕ್ಷ ರೂಪಾಯಿ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ನಂತರ ಪಿರ್ಯಾಧಿದಾರಳು ಗಂಡನ ಮನೆಗೆ ಹೋಗಿದ್ದು ನಂತರದ ದಿನಗಳಲ್ಲಿ ಪಿರ್ಯಾಧಿದಾರಳು ಸಿಂಧನೂರು ತಾಲ್ಲೂಕಿನ ಪಾಪರಾವ್ ಕ್ಯಾಂಪಿನಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಶೂಶೃಕಿ ಎಂದು ಕೆಲಸ ಮಾಡಿಕೊಂಡಿದ್ದರಿಂದ ತಾನು ಮತ್ತು ತನ್ನ ಗಂಡ ಪಾಪರಾವ್ ಕ್ಯಾಂಪಿನಲ್ಲಿ ಮನೆಮಾಡಿಕೊಂಡು ವಾಸವಾಗಿದ್ದು ನಂತರದ ದಿನಗಳಲ್ಲಿ ಪಿರ್ಯಾಧಿದಾರಳ ಗಂಡನು ಆಕೆಯ ಮೇಲೆ ಅನುಮಾನಿಸುವುದು ಶೀಲದ ಬಗ್ಗೆ ಶಂಕೆಪಡುವುದು ಸೂಳೆ ಅಂತಾ ಬೈದಾಡುವುದು ಕುಡಿದು ಬಂದು ಹೊಡೆಯುವುದು ಬಡೆಯುವುದು ಮಾಡುತ್ತಿದ್ದನು. ಪಿರ್ಯಾಧಿದಾರಳು ತನ್ನ ಕೆಲಸಕ್ಕೆ ತೊಂದರೆಯಾಗಬಹುದು ಎಂದುಯದಿಂದ ಸಹಿಸಿಕೊಂಡು ಇರುತ್ತಿದ್ದಳು. ನಂತರದ ದಿನಗಳಲ್ಲಿ ಪಿರ್ಯಾಧಿದಾರಳ ಗಂಡ,ಅತ್ತೆ,ಮಾವ,ಮತ್ತು ಗಂಡನ ಸಂಬಂಧಿಕರಾದ ಕಾಶಿಮಪ್ಪ ಮತ್ತು ಪಕೀರಪ್ಪ ಇವರು ಪಾಪರಾವ್ ಕ್ಯಾಂಪಿಗೆ ಬಂದು ಪಿರ್ಯಾಧಿದಾರಳಿಗೆ ಹೆಚ್ಚಿನ ವರದಕ್ಷಿಣೆಯಾಗಿ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಇಲ್ಲದಿದ್ದರೆ ಬೇರೆ ಮದುವೆಯಾಗುತ್ತೇನೆ ಎಂದು ಎದುರಿಸುತ್ತಿದ್ದನು. ಅಲ್ಲದೆ ಪಿರ್ಯಾಧಿದಾರಳ ಅತ್ತೆ ಮಾವ ಸಂಬಂಧಿಕರು ತನ್ನ ಗಂಡನ ಸಲುವಾಗಿ ಪಾಪರಾವ್ ಕ್ಯಾಂಪಿಗೆ ಬಂದು ಹೆಚ್ಚಿನ ವರದಕ್ಷಿಣೆ ಕೊಡದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೇದರಿಕೆ ಹಾಕಿರುತ್ತಾರೆ. ನಂತರದ ದಿನಗಳಲ್ಲಿ ಆರೋಪಿ ರಂಗಡು ಈತನು ಕುಡಿದು ಬಂದು ಅನೈಸರ್ಗಿಕ ರೀತಿಯಲ್ಲಿ ಸಂಸಾರಮಾಡಲು ಒತ್ತಾಯ ಮಾಡುತ್ತಿದ್ದು ಅದಕ್ಕೆ ಪ್ರತಿರೋಧ ಒಡ್ಡಿದ್ದಾಗ ಬಾಯಿಗೆ ಬಂದಂತೆ ಬೈದು ಹೊಡೆದು ಮಾಡುತ್ತಿದ್ದನು. ದಿನಾಂಕ-13/12/2019 ರಂದು ರಾತ್ರಿ 09-00 ಗಂಟೆಗೆ ಪಿರ್ಯಾಧಿದಾರಳ ಗಂಡನು ಕುಡಿದು ಬಂದು ಪಿರ್ಯಾಧಿದಾರಳ ಮೇಲೆ ಸಂಶಯಪಟ್ಟು ಕಾಲಿನಿಂದ ತುಳಿದು ಎಡಗೈಯನ್ನು ತಿರುವಿ ಒಳಪೆಟ್ಟು ಮಾಡಿದ್ದು ನಂತರ ಪಿರ್ಯಾಧಿದಾರಳು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡರು ನೋವು ಕಡಿಮೆಯಾಗದ ಕಾರಣ ದಿನಾಂಕ-16/12/2019 ರಂದು ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಇಂದು ತಡವಾಗಿ ದೂರು ಸಲ್ಲಿಸಿದ್ದು ಪಿರ್ಯಾಧಿದಾರಳಿಗೆ ಮಾನಸಿಕ ದೈಹಿಕ ಹಲ್ಲೆಮಾಡಿ ಹೆಚ್ಚಿನ ವರದಕ್ಷಿಣೆ ತರಲು ಒತ್ತಾಯಿಸಿ ಕೊಡದಿದ್ದ ಪಕ್ಷದಲ್ಲಿ ಕೊಲೆ ಮಾಡುವುದಾಗಿ ಜೀವದ ಬೇದರಿಕೆ ಹಾಕಿದ ಮತ್ತು ಹಲ್ಲೆ ಮಾಡಲು ಪ್ರಚೊಧಿಸಿರುವ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಗಣಕೀಕೃತ ಸಾರಾಂಶದ ಮೇಲಿಂದ ಬಳಗಾನೂರು ಪೊಲಿಸ್ ಠಾಣಾ ಗುನ್ನೆ ನಂ-90/2019 ಕಲಂ, 498(a) ,323,324,504,506,109 R-w 149 IPC & 3,4 DP ACT  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕೊಲೆ ಮರೆಮಾಚುವ ಪ್ರಕರಣದ ಮಾಹಿತಿ
ಆರೋಪಿ 01 ಆರೋಗ್ಯಸ್ವಾಮಿ  @ ಸ್ವಾಮಿ ತಂದೆ ಸಗೈರಾಜು, ಸಾ:ಆರ್.ಹೆಚ್.ನಂ.01, ತಾ:ಸಿಂಧನೂರು ನೇದ್ದವನ ಸಂಬಂಧಿಕರ ಪೈಕಿ ಪ್ರಿನ್ಸಿ ಎನ್ನುವವಳನ್ನು ಫಿರ್ಯಾದಿದಾರನ ಮಗನಾದ ರಾಜೇಶನು ಈಗ್ಗೆ 06 ವರ್ಷಗಳಿಂದ ಪ್ರೀತಿ ಮಾಡಿ ಇದೇ ಸಾಲಿನ ಮೇ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಂತರ ಮದುವೆ ಇನ್ನೂ 5-10 ದಿನಗಳಿರುವಾಗ ಆರೋಪಿತರು ಮದುವೆ ನಿಲ್ಲಿಸಿದ್ದು, ನಂತರ ಆರೋಪಿತರು ಫಿರ್ಯಾದಿದಾರನ ಮಗನಿಗೆ ನೀನು ಸದರಿ ಹುಡುಗಿಯನ್ನು ಲಗ್ನವಾದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಅಂಜಿಸುತ್ತಾ ಬಂದಿದ್ದು, ಅಲ್ಲದೇ ಅದೇ ಸಿಟ್ಟಿನಿಂದ ಆರೋಪಿ ಮತ್ತು ಇತರೆ 3ಜನರು ಸೇರಿ ದಿನಾಂಕ:12-12-2019 ರಂದು ರಾತ್ರಿ ಸಮಯದಲ್ಲಿ ಫಿರ್ಯಾದಿದಾರನ ಮಗನಾದ ರಾಜೇಶನನ್ನು ಕೊಲೆ ಮಾಡಿ ಅದನ್ನು ಮರೆಮಾಚುವ ಸಲುವಾಗಿ ಹೆಣವನ್ನು ಆರ್.ಹೆಚ್.ನಂ.01 ಕ್ಯಾಂಪ್-ಆರ್.ಹೆಚ್.ನಂ.03 ರ ದಾರಿಯ ಪಕ್ಕದಲ್ಲಿ ಬರುವ ಕೆನಾಲ ನೀರಿನಲ್ಲಿ  ಹಾಕಿದ್ದು ಇರುತ್ತದೆ ಎಂದು ಕೊಟ್ಟ ಗಣಕೀಕೃತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್  ಠಾಣಾ ಗುನ್ನೆ ನಂ.181/2019, ಕಲಂ.302, 201 ಸಹಿತ 34 ಐಪಿಸಿ ರೀತ್ಯ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ:18.12.2019 ರಂದು ಸಂಜೆ 6.30 ಗಂಟೆಗೆ ಫಿರ್ಯಾದಿ ±ÀAPÀgÀ¹AUï vÀAzÉ ²ªÀ¯Á¯ï¹AUï ºÀeÁgÉ ªÀAiÀĸÀÄì:50 ªÀµÀð eÁ: gÀd¥ÀÆvÀ G: ªÁå¥ÁgÀ ¸Á: Q¯Áè ªÀÄÄzÀUÀ¯ ರವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ  ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:15.12.2019 ರಂದು ಫಿರ್ಯಾದಿದಾರರು ತಮ್ಮ ಮನೆಗೆ ಬೀಗ ಹಾಕಿಕೊಂಡು ತಿರುಪತಿ ದೇವಸ್ಥಾನಕ್ಕೆ ದರ್ಶನಕ್ಕೆ ಹೋದಾಗ ದಿನಾಂಕ:15.12.2019 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ:16.12.2019 ರಂದು ಬೆಳಗಿನ ಜಾವ 05.00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರನ ಮನೆಯ ಬಾಗಿಲದ ಬೀಗವನ್ನು ಮುರಿದು ಒಳಗಡೆ ಪ್ರವೇಶ ಮಾಡಿ ಇಸ್ತ್ರಿ ಬಟ್ಟೆಯ ಕೆಳಗಡೆ ಇಟ್ಟಿದ್ದ ಅಲ್ಮಾರಾದ ಬೀಗವನ್ನು ತಗೆದುಕೊಂಡು ಅಲ್ಮಾರವನ್ನು ತಗೆದು ಅಲ್ಮಾರದಲ್ಲಿಟ್ಟಿದ್ದ 1) 2 ತೊಲೆ 7.5 ಗ್ರಾಂ ಬಂಗಾರದ ಮಾಂಗಲ್ಯ ಸರ ಅ.ಕಿ.ರೂ 75000/- 2) 1/2 ತೊಲೆ ಬಂಗಾರದ ಗಣೇಶ ಚಿತ್ರವಿರುವ ಊಂಗುರು ಅ.ಕಿ.ರೂ 16000/-, 3) 2.50 ಗ್ರಾಂ ಬಂಗಾರದ ಸಣ್ಣ ಊಂಗರು ಅ.ಕಿ.ರೂ 8000/-  04) 3 ಜೋತೆ ಕಿವಿಯೊಲೆ 01 ತೊಲೆ ಅ.ಕಿ.ರೂ 28000/- ರೂ ಬೆಲೆ ಬಾಳುವುದು 5) 1/2 ಕೆ.ಜಿ ಬೆಳ್ಳಿ ಸಾಮಾನುಗಳು ಸುಮಾರು 20000/- ರೂ ಬೆಲೆ ಬಾಳುವವು & ಹಾಗೂ Oppo Neo-5 ಕಂಪನಿಯ ಮೋಬೈಲ್ ಅ.ಕಿ.ರೂ 3000/- ಹೀಗೆ ಒಟ್ಟು 150000/- ಬೆಲೆ ಬಾಳುವವು ಇರುತ್ತವೆ  ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕಳ್ಳತನವಾದ ಬಗ್ಗೆ ಫಿರ್ಯಾದಿದಾರ ವಾಪಾಸ ಮನೆಗೆ ಬಂದು ನೋಡಿಕೊಂಡು ಹಾಗೂ ತಮ್ಮ ಮನೆಯಲ್ಲಿ ಎಲ್ಲರೊಂದಿಗೆ ವಿಚಾರ  ಮಾಡಿಕೊಂಡು ಬಂದು ತಡವಾಗಿ ದೂರು ನೀಡಿದ್ದು ಇರುತ್ತದೆ. ಕಾರಣ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳ್ಳತನವಾದ ಬಂಗಾರ, ಬೆಳ್ಳಿ ಸಾಮಾನುಗಳನ್ನು ವಾಪಾಸ ಕೊಡಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 154/2019 PÀ®A. 457, 380 L.¦.¹  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.