Pages

31 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಅಕ್ರಮ ಮದ್ಯ ಪ್ರಕರಣದ ಮಾಹಿತಿ.
ದಿನಾಂಕ 30-07-2019 ರಂದು 1200 ಗಂಟೆಗೆ ಮಲ್ಲಿಕಾರ್ಜುನ.ಸಿ.ಇಕ್ಕಳಕಿ ಪಿ.ಎಸ್..ಮಾರ್ಕೆಟಯಾರ್ಡ ಪೊಲೀಸ ಠಾಣೆ ರವರು ಮೂಲದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿ ಜ್ಞಾನ ಪತ್ರ ನೀಡಿದ್ದು ಸಾರಾಂವೇನೆಂದರೆ, ತಾವು ದಿನಾಂಕ 30-07-2019 ರಂದು 1000 ಗಂಟೆ ಸುಮಾರಿಗೆ ಠಾಣೆಯಲ್ಲಿರುವಾಗ ಗದ್ವಾಲ್ ರಸ್ತೆ ಮ್ಮಡಿಪೇಟೆ ಏರಿಯಾ ಸಾರ್ವಜನಿಕ ಸ್ಥಳದಲ್ಲಿ ಕ್ರಮವಾಗಿ ಸಿ.ಹೆಚ್.ಪೌಡರ್ ಮಿಶ್ರಿತ ಕಲಬೆರಿಕೆ ಸೇಂದಿಯನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 1] ನಾಗಪ್ಪ ತಂದೆ ಹುಲಿಗೆಪ್ಪ, 2] ಶ್ರೀನಿವಾಸ ತಂದೆ ಚಿದಾನಂದ ಹಾಗು ಸಿಬ್ಬಂದಿಯವರಾದ ರಾಜಪ್ಪ ಹೆಚ್.ಸಿ.215, ಭಿಮರಾಯ ಪಿ.ಸಿ.480, ಮತ್ತು ಜೀಪ್ ಚಾಲಕನಾದ ಮೊಹಮ್ಮದ್ ಜಮೀರುದ್ದೀನ ಹೆಚ್.ಸಿ.126 ವರೊಂದಿಗೆ ಮಾರ್ಕೆಟಯಾರ್ಡ ಠಾಣಾ ವ್ಯಾಪ್ತಿಯಲ್ಲಿ ಬರುವ ಗದ್ವಾಲ್ ರಸ್ತೆ ಮ್ಮಡಿಪೇಟೆ ಏರಿಯಾ ಮಂಡೋಳ್ ಬಟ್ಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹತ್ತಿರ ಸರಕಾರದಿಂದ ಯಾವುದೇ ಪರವಾನಗಿ ಇಲ್ಲದೆ, ಅಕ್ರಮವಾಗಿ ಸಿ.ಹೆಚ್.ಪೌಡರ್ ಮಿಶ್ರಿತ ಕಲಬೆರಿಕೆ ಸೇಂದಿಯನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ 1045 ಗಂಟೆಗೆ ದಾಳಿ ಶೇಂದಿ ಮಾರಾಟದಲ್ಲಿ ತೊಡಗಿದ್ದ ತಿಮ್ಮಪ್ಪ ತಂದೆ ನರಸಪ್ಪ, ವಯಾ:35 ವರ್ಷ,ಜಾ;ಮಾದಿಗ.:ಬೇಲ್ದಾರಕೆಲಸ, ಸಾ:ಹರಿಜನವಾಡ ರಾಯಚೂರು ಈತನವಶದಿಂದ ಘಟನಾ ಸ್ಥಳದಲ್ಲಿದ್ದ ಎರಡು  ಪ್ಲಾಸ್ಟಿಕ ಕೊಡಗಳಲ್ಲಿದ್ದ ಸುಮಾರು  45 ಲೀಟರ್ ಅ.ಕಿ.ರೂ 450/- ಬೆಲೆಬಾಳುವ ಶೇಂದಿಯನ್ನು ಜಪ್ತು ಮಾಡಿಕೊಂಡು, ಅದರಲ್ಲಿ ರಾಸಾಯನಿಕ ಪರೀಕ್ಷೆ ಕುರಿತು 180 ಎಂ.ಎಲ್ ಬಾಟಲಿಯಲ್ಲಿ ಸೇಂದಿಯನ್ನು ತುಂಬಿ ಸ್ಯಾಂಪಲ್ ತೆಗೆದು ಅದಕ್ಕೆ ಬಿಳಿಬಟ್ಟೆಯಿಂದ ಬಾಯಿಗೆ ಸುತ್ತಿ MYPS RCR ಎಂಬ ಅಕ್ಷರದ ಸೀಲ್ ಮಾಡಿ ಉಳಿದ ಸೇಂದಿಯನ್ನು ಕೆಟ್ಟು ಮಲಿನವಾಗುವ ಸಾದ್ಯತೆ ಇರುವುದರಿಂದ ಪಂಚರ ಸಮಕ್ಷಮ ಸ್ಥಳದಲ್ಲಿಯೆ ಚಲ್ಲಿ ಕೊಡಗಳ ಸಮೇತ ನಾಶಪಡಿಸಿ, ನಂತರ ಶಾಂಪಲ ಕುರಿತು ತೆಗೆದ ಶೇಂದಿಯನ್ನು ಮತ್ತು ಆರೋಪಿತನನ್ನು ತಾಬಾಕ್ಕೆ ತೆಗೆದುಕೊಂಡು 1045 ಗಂಟೆಯಿಂದ 1145 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 1200 ಗಂಟೆಗೆ ವಾಪಾಸು ಠಾಣೆಗೆ ಬಂದು ದಾಳಿ ಪಂಚನಾಮೆಯೊಂದಿಗೆ ಆರೋಪಿತನನ್ನು ಮತ್ತು ಮುದ್ದೆಮಾಲನ್ನು ತಂದು ಮುಂದಿನ ಕ್ರಮಕುರಿತು ಹಾಜರುಪಡಿಸಿದ್ದು ಇರುತ್ತದೆ, ಅಂತಾ ಮುಂತಾಗಿ ಇರುವ ಸಾರಾಂಸದ ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್ ಠಾಣಾ ಗು.ನಂ.53/2019 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.