Pages

1 Mar 2019

Reported Crimes


AiÀÄÄ.r.Dgï. ¥ÀæPÀgÀtzÀ ªÀiÁ»w.
ದಿ.28.02.19 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ಪಿರ್ಯಾದಿ ಅಮರೇಶ @ ಅಂಬಣ್ಣ ತಂದೆ ಸೋಮನಗೌಡ ತುರಡಗಿ 32 ವರ್ಷ.ಜಾ:-ಲಿಂಗಾಯ್ತ, ಉ;-ಒಕ್ಕಲುತನ,ಸಾ;-ಗೊರೆಬಾಳ ಗ್ರಾಮ,ತಾ:-ಸಿಂಧನೂರು ರವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ನಮ್ಮ ಸ್ವಂತ ಊರು ಲಿಂಗಸ್ಗೂರು ತಾಲೂಕಿನ ತುರಡಗಿ ಇದ್ದು. ನಮ್ಮ ತಂದೆ ತಾಯಿಯವರು 40 ವರ್ಷಗಳ ಹಿಂದೆ ಗೋರೆಬಾಳ ಗ್ರಾಮಕ್ಕೆ ಬಂದು ವಾಸವಾಗಿರುತ್ತಾರೆ. ನಮ್ಮ ತಂದೆ ತಾಯಿಯವರಿಗೆ ನಾವು 4-ಜನ ಗಂಡು ಮಕ್ಕಳು 3-ಜನ ಹೆಣ್ಣು ಮಕ್ಕಳು ಇರುತ್ತೇವೆ.ನಮ್ಮ ತಂದೆ ಸೋಮನಗೌಡನ ಹೆಸರಿನಲ್ಲಿ ಲಿಂಗಸ್ಗೂರು ತಾಲೂಕಿನ ತುರಡಗಿ ಸೀಮಾದಲ್ಲಿ ಜಮೀನು ಸರ್ವೆ ನಂ.59-1-ಪಿ-ರಲ್ಲಿ  4 ಎಕರೆ 59-2-ಪಿ-ರಲ್ಲಿ 4 ಎಕರೆ ಒಟ್ಟು 8-ಎಕರೆ ಜಮೀನು ಇದ್ದು,ನಮ್ಮ ಅಣ್ಣ ಸಿದ್ದಪ್ಪನ ಹೆಸರಿನಲ್ಲಿ ಲಿಂಗಸ್ಗೂರು ತಾಲೂಕಿನ ಹೊನೂರು ಸೀಮಾಂತರದಲ್ಲಿ ಸರ್ವೆ ನಂ.54-1ಎ-ರಲ್ಲಿ 4 ಎಕರೆ ಜಮೀನು ಇದ್ದು,ನಾವೇ ಸಾಗುವಳಿ ಮಾಡಿಕೊಂಡು ಹೋಗುತ್ತೇವೆ.ಅಲ್ಲದೆ ಬೇರೆಯವರ 6 ಎಕರೆ ಜಮೀನನ್ನು ಸಹ ಲೀಜಿಗೆ ಮಾಡಿಕೊಂಡಿರುತ್ತೇವೆ.ನಮ್ಮ ಜಮೀನುಗಳ ಸಾಗುವಳಿಗಾಗಿ ನಮ್ಮ ತಂದೆಯ ಹೆಸರಿನಲ್ಲಿ ಐಸಿಐಸಿಐ ಬ್ಯಾಂಕಿನಲ್ಲಿ ಹಾಗೂ ಕೈಗಡವಾಗಿ ಸಾಲ ಮಾಡಿಕೊಂಡಿದ್ದು, ಹೊಲದಲ್ಲಿ ಬೆಳೆಯ ಗೊಬ್ಬರ ಎಣ್ಣೆಗಾಗಿ ಸಹ ಸಾಲ ಮಾಡಿದ್ದು.ಬ್ಯಾಂಕಿನ ಮತ್ತು ಹೊರಗಡೆಯ ಸಾಲವನ್ನು ನಮ್ಮ ತಾಯಿಯೇ ವ್ಯವಹಾರ ನೋಡಿಕೊಂಡಿದ್ದಳು. ಕಳೆದ 3-4 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಬೆಳೆ ಬಾರದೆ 9 ಲಕ್ಷ ರೂಪಾಯಿ ಲುಕ್ಸಾನಾಗಿದ್ದರಿಂದ ಮಾಡಿದ ಸಾಲ ತೀರಿಸಿರಲಿಲ್ಲಾ. ಈಗಾಗಿ ನಮ್ಮ ತಾಯಿ ಸಾಲ ಜಾಸ್ತಿಯಾಯಿತು ತೀರಿಸುವುದು ಕಷ್ಟವಾಗುತ್ತಿದೆ. ಹೇಗೆ ತೀರಿಸುವುದು ಅಂತಾ ಚಿಂತಿಸುತ್ತಿದ್ದಳು ಇಂದು ದಿ.28.02.19 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯಲ್ಲಿ ಕ್ರಿಮಿನಾಷಕ ಔಷದಿಯನ್ನು ಸೇವಿಸಿದ್ದು.ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುವಾಗ ಬೆಳಿಗ್ಗೆ 11-30 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾಳೆಂದು ತಿಳಿಸಿರುತ್ತಾರೆ.ನಮ್ಮ ತಾಯಿ ರಂಗವ್ವ @ ರಂಗಮ್ಮ ಸಾಲದ ಬಾದೆಯಿಂದ ಮನನೊಂದು ಕ್ರಿಮಿನಾಷಕ ಔಷದಿಯನ್ನು ಸೇವೆನ ಮಾಡಿ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ನೀಡದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 12/2019. ಕಲಂ 174. ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ.28.02.2019 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ©üêÀÄtÚ vÀAzÉ vÁªÀgÀ¥Àà ¥ÀªÁgï, 30 ªÀµÀð, eÁ-®A¨ÁtÂ, G-PÀư PÉ®¸À, ¸Á-D¯ÉÆÌÃqï vÁAqÀ ರವರು ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಾಂಶವೇನೆಂದರೆ,ದಿನಾಂಕ.19.02.2019 ರಂದು ಮದ್ಯಾಹ್ನ 12.30 ಗಂಟೆ ಸುಮಾರಿಗೆ ಪಿರ್ಯಾದಿದಾರನ ತಾಯಿಯಾದ ಮೃತ ಚಂದಮ್ಮ ಈಕೆಯು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಎದೆಯಿಂದ ಕಾಲಿನವರೆಗೆ ಬೆಂಕಿ ಹತ್ತಿಕೊಂಡು ಸುಟ್ಟಿದ್ದು, ಚಿಕಿತ್ಸೆ ಕುರಿತು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಇಂದು ದಿನಾಂಕ.28.02.2019 ರಂದು ಬೆಳಿಗ್ಗೆ 08.32 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಮೃತಳ ಸಾವಿನಲ್ಲಿ ಯಾವುದೇ ಸಂಶಯವಿರುವದಿಲ್ಲ ಅಂತಾ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್.ನಂಬರ 02/2019 PÀ®A-174 ¹.Dgï.¦.¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 26/02/19 ರಂದು ಬೆಳಿಗ್ಗೆ 11.00 ಗಂಟೆಗೆ  ಫಿರ್ಯಾದಿ ಶ್ರೀಮತಿ ನಿರ್ಮಲಾ ಗಂಡ ಸಿದ್ದೇಶ್ವರ ಧನಗಾರ್, 32 ವರ್ಷ, ಕುರುಬರ , ಅಕೌಂಟೆಂಟ್ ಕೆಲಸ  ಸಾಓಂ ಸಾಯಿ ನಿವಾಸ, ಲೇನ್ ನಂ 1 ಗಜಾನನ ನಗರ , ರಹಟನಿ ಫಾಟಾ ಪೂನಾ ಇವರು ಠಾಣೆಗೆ ಹಾಜರಾಗಿ ತಮ್ಮ ಒಂದು ಹೇಳಿಕೆ ದೂರನ್ನು ನೀಡಿದ್ದು  ಸಾರಾಂಶವೇನೆಂದರೆ, ದಿನಾಂಕ 23/02/19 ರಂದು ಫಿರ್ಯಾದಿಯು ತನ್ನ ಗಂಡ ಹಾಗೂ ಮಕ್ಕಳು ಸೇರಿ ನೀರಮಾನವಿ ಜಾತ್ರೆಗೆ ಹೋಗಿದ್ದು ಸಾಯಂಕಾಲ ದೇವಿಯ ದರ್ಶನ ಪಡೆಯುವ ಸಲುವಾಗಿ ಹೋದಾಗ ಬಹಳ ಜನರು ಲೈನಿನಲ್ಲಿ ನಿಂತಿದ್ದು ಕಾರಣ  ತಾನು ನನ್ನ ಕೊರಳಲ್ಲಿದ್ದ  ಅಂದಾಜು 2 ತೊಲೆಯ ಬಂಗಾರದ ಸರ (ಗಂಟನ್) ವನ್ನು ಸುರಕ್ಷತೆಯ ದೃಷ್ಟಿಯಿಂದ ಕೊರಳಲ್ಲಿದ್ದುದನ್ನು ತೆಗೆದು ತನ್ನ  ವ್ಯಾನಿಟಿ ಬ್ಯಾಗನಲ್ಲಿಟ್ಟುಕೊಂಡು ಸಾಯಂಕಾಲ ಅಂದಾಜು 5.00 ಗಂಟೆಯ ಸುಮಾರಿಗೆ ಲೈನಿನಲ್ಲಿ ನಿಂತುಕೊಂಡಿದ್ದು ಸಾಯಂಕಾಲ  6.00 ಗಂಟೆಯ ಸುಮಾರಿಗೆ  ಇನ್ನೂ ದೇವಸ್ಥಾನದ ಹೊರಗಡೆ  ಲೈನ್ ನಲ್ಲಿದ್ದಾಗ ಫಿರ್ಯಾದಿಯು ಪುನಃ ವ್ಯಾನಿಟಿ ಬ್ಯಾಗನ್ನು ನೋಡಿಕೊಳ್ಳಲು ವ್ಯಾನಿಟಿ ಬ್ಯಾಗಿನ ಜಿಪ್ ತೆಗೆದಿದ್ದು ಅದರಲ್ಲಿದ್ದ  ತನ್ನ ಬಳಗಾರದ ಸರ ಇರಲಿಲ್ಲ. ಆಗ  ತನಗೆ ಯಾರೋ ಕಳ್ಳರು ನನ್ನ ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದ ಬಂಗಾರದ ಸರವನ್ನು ಕಳ್ಳತನ ಮಾಡಿರುತ್ತಾರೆ ಅಂತಾ ಗೊತ್ತಾಯಿತು. ಕಾರಣ ನಾನು ಕೋಡಲೇ ತನ್ನ ಗಂಡನಿಗೆ   ವಿಷಯ ತಿಳಿಸಿ ನಂತರ ದೇವಿಯ ದರ್ಶನ ಪಡೆದುಕೊಂಡು ವಾಪಾಸ ಮಾನವಿಗೆ ಬಂದಿದ್ದು ಇರುತ್ತದೆತನ್ನ ಬಂಗಾರದ ಸರ ( ಗಂಟನ್) ಅಂದಾಜು ಕಿಮ್ಮತ್ತು 48,000/- ( ನಲವತ್ತೆಂಟು ಸಾವಿರ) ರೂಪಾಯಿಗಳಾಗಬಹುದು. ಕಾರಣ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ದಿನಾಂಕ 26/02/19 ರಂದು ಠಾಣೆಗೆ ಬಂದು ದೂರನ್ನು ನೀಡಿದ್ದು ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 53/2019 ಕಲಂ 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.